Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್

Bigg Boss: ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಕೆಲ ವರ್ಷಗಳಿಂದಲೂ ಗೆಳೆಯರು ಆದರೆ ಬಿಗ್​ಬಾಸ್ ಮನೆಯಲ್ಲಿ ಅವರ ಗೆಳೆತನ ಹಾಳಾಗಿದೆ. ಆದರೆ ಈಗ ಸುದೀಪ್​ ದೆಸೆಯಿಂದ ಮತ್ತೆ ಗೆಳೆತನ ಚಿಗುರೊಡೆದಿದೆ.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್
ವಿನಯ್-ಕಾರ್ತಿಕ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Dec 10, 2023 | 8:02 PM

ಹೊರ ಜಗತ್ತಿನಲ್ಲಿ ಎಷ್ಟೇ ಒಳ್ಳೆಯ ಗೆಳೆಯರಾಗಿದ್ದರೂ ಬಿಗ್ ಬಾಸ್​ನಲ್ಲಿ (Bigg Boss) ಅದೆಲ್ಲ ವರ್ಕೌಟ್ ಆಗಲ್ಲ. ಇದಕ್ಕೆ ಉತ್ತಮ ಉದಾಹರಣೆ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್. ಇವರು ಒಂದೇ ಇಂಡಸ್ಟ್ರಿಯಲ್ಲಿ ಇದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಅದು ಹಾಳಾಗಿತ್ತು. ಈಗ ಇಬ್ಬರೂ ಹಗ್ ಮಾಡಿಕೊಂಡು ಮತ್ತೆ ಫ್ರೆಂಡ್ಸ್ ಆಗಿದ್ದಾರೆ. ವೀಕೆಂಡ್ ಎಪಿಸೋಡ್ ಈ ಒಂದು ಸುಂದರ ಘಟನೆಗೆ ಸಾಕ್ಷಿ ಆಗಿದೆ.

ವಿನಯ್ ಅವರು ಹಲವು ಸಂದರ್ಭದಲ್ಲಿ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಾರೆ. ಸಂಗೀತಾ ಹಾಗೂ ವಿನಯ್ ಮಧ್ಯೆ ಯಾವಾಗಲೂ ಕಿರಿಕ್ ಆಗುತ್ತಲೇ ಇರುತ್ತದೆ. ಆದರೆ, ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಫ್ರೆಂಡ್ಸ್. ಇದು ಕಾರ್ತಿಕ್ ಹಾಗೂ ವಿನಯ್ ಅವರ ಫ್ರೆಂಡ್​ಶಿಪ್​ ಮೇಲೆ ಎಫೆಕ್ಟ್ ಆಗಿದೆ ಎಂದರೂ ಯಾವುದೇ ತಪ್ಪಿಲ್ಲ. ಕಳೆದ ವಾರವಂತೂ ಇದು ಮಿತಿ ಮೀರಿತ್ತು. ಕಾರ್ತಿಕ್ ಅವರನ್ನು ಎಂದಿಗೂ ಕ್ಷಮಿಸಲ್ಲ ಎಂದಿದ್ದರು ವಿನಯ್. ಅಷ್ಟೇ ಅಲ್ಲ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಇವರ ಜಗಳ ಹೋಗಿತ್ತು. ಇಬ್ಬರೂ ಮತ್ತೆ ಒಂದಾಗಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

‘ನಾನು ಹಾಗೂ ಕಾರ್ತಿಕ್ ಹಲವು ಕೆಟ್ಟ ಕೆಲಸಗಳನ್ನು ಒಟ್ಟಿಗೆ ಮಾಡಿದ್ದೇವೆ’ ಎಂದು ಹೇಳಿದ್ದರು ವಿನಯ್. ಆದರೆ, ಬಿಗ್ ಬಾಸ್​ನಲ್ಲಿ ಇವರು ಬದ್ಧ ವೈರಿಗಳಂತೆ ನಡೆದುಕೊಂಡಿದ್ದರು. ಈಗ ಸುದೀಪ್ ಅವರ ನೇತೃತ್ವದಲ್ಲಿ ಇವರ ಮಧ್ಯೆ ರಾಜಿ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:ಟಾಸ್ಕ್ ಆಡುವಾಗ ಗಾಯ: ಬಿಗ್​ಬಾಸ್ ಮನೆಯಿಂದ ಸಂಗೀತಾ-ಪ್ರತಾಪ್ ಹೊರಗೆ

ಬಿಳಿ ರೋಸ್ ನೀಡಿ ಕ್ಷಮೆ ಕೇಳುವ ಅವಕಾಶವನ್ನು ಸುದೀಪ್ ನೀಡಿದರು. ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್​ಗೆ ಹೂವು ನೀಡಿದರು. ಟಾಸ್ಕ್​ನಲ್ಲಿ ಮುಖಕ್ಕೆ ನೀರು ಚೆಲ್ಲಿದ್ದಕ್ಕೆ ಕ್ಷಮೆ ಕೇಳಿದರು ಮತ್ತು ಇನ್ನು ಈ ರೀತಿ ಮಾಡುವುದಿಲ್ಲ ಎಂದರು ವರ್ತೂರು. ಆ ಬಳಿಕ ವಿನಯ್ ಅವರು ಕಾರ್ತಿಕ್​​​ಗೆ ಕ್ಷಮೆ ಳಿದರು.

‘ನಾನು ನೀನು ಬಹಳ ವರ್ಷಗಳಿಂದ ಫ್ರೆಂಡ್ಸ್. ಮೂರನೇ ವ್ಯಕ್ತಿಯಿಂದ ಮಿಸ್​ ಅಂಡರ್​​ಸ್ಟ್ಯಾಂಡಿಗ್ ಆಯ್ತು. ನಾನು ಸಾಕಷ್ಟು ರ್ಯೂಡ್ ಆಗಿ ನಡೆದುಕೊಂಡೆ. ಇದಾದಮೇಲೆ ನೀನು ನನ್ನ ಫ್ರೆಂಡ್ ಎಂದು ಟ್ರೀಟ್ ಮಾಡ್ತೀಯೋ ಗೊತ್ತಿಲ್ಲ. ನೀನು ಯಾವಾಗಲೂ ನನ್ನ ಫ್ರೆಂಡ್’ ಎಂದು ಹೇಳಿದ್ದಾರೆ ವಿನಯ್. ಸದ್ಯ ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋ ವೈರಲ್ ಆಗಿದೆ.

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಈ ಮೊದಲು ಹಲವು ಬಾರಿ ವೈಮನಸ್ಸು ಉಂಟಾಗಿತ್ತು. ಆ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈಗ ಮತ್ತೊಮ್ಮೆ ಇವರು ಒಂದಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sun, 10 December 23

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ