AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್

Bigg Boss: ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಕೆಲ ವರ್ಷಗಳಿಂದಲೂ ಗೆಳೆಯರು ಆದರೆ ಬಿಗ್​ಬಾಸ್ ಮನೆಯಲ್ಲಿ ಅವರ ಗೆಳೆತನ ಹಾಳಾಗಿದೆ. ಆದರೆ ಈಗ ಸುದೀಪ್​ ದೆಸೆಯಿಂದ ಮತ್ತೆ ಗೆಳೆತನ ಚಿಗುರೊಡೆದಿದೆ.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್
ವಿನಯ್-ಕಾರ್ತಿಕ್
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:Dec 10, 2023 | 8:02 PM

Share

ಹೊರ ಜಗತ್ತಿನಲ್ಲಿ ಎಷ್ಟೇ ಒಳ್ಳೆಯ ಗೆಳೆಯರಾಗಿದ್ದರೂ ಬಿಗ್ ಬಾಸ್​ನಲ್ಲಿ (Bigg Boss) ಅದೆಲ್ಲ ವರ್ಕೌಟ್ ಆಗಲ್ಲ. ಇದಕ್ಕೆ ಉತ್ತಮ ಉದಾಹರಣೆ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್. ಇವರು ಒಂದೇ ಇಂಡಸ್ಟ್ರಿಯಲ್ಲಿ ಇದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಅದು ಹಾಳಾಗಿತ್ತು. ಈಗ ಇಬ್ಬರೂ ಹಗ್ ಮಾಡಿಕೊಂಡು ಮತ್ತೆ ಫ್ರೆಂಡ್ಸ್ ಆಗಿದ್ದಾರೆ. ವೀಕೆಂಡ್ ಎಪಿಸೋಡ್ ಈ ಒಂದು ಸುಂದರ ಘಟನೆಗೆ ಸಾಕ್ಷಿ ಆಗಿದೆ.

ವಿನಯ್ ಅವರು ಹಲವು ಸಂದರ್ಭದಲ್ಲಿ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಾರೆ. ಸಂಗೀತಾ ಹಾಗೂ ವಿನಯ್ ಮಧ್ಯೆ ಯಾವಾಗಲೂ ಕಿರಿಕ್ ಆಗುತ್ತಲೇ ಇರುತ್ತದೆ. ಆದರೆ, ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಫ್ರೆಂಡ್ಸ್. ಇದು ಕಾರ್ತಿಕ್ ಹಾಗೂ ವಿನಯ್ ಅವರ ಫ್ರೆಂಡ್​ಶಿಪ್​ ಮೇಲೆ ಎಫೆಕ್ಟ್ ಆಗಿದೆ ಎಂದರೂ ಯಾವುದೇ ತಪ್ಪಿಲ್ಲ. ಕಳೆದ ವಾರವಂತೂ ಇದು ಮಿತಿ ಮೀರಿತ್ತು. ಕಾರ್ತಿಕ್ ಅವರನ್ನು ಎಂದಿಗೂ ಕ್ಷಮಿಸಲ್ಲ ಎಂದಿದ್ದರು ವಿನಯ್. ಅಷ್ಟೇ ಅಲ್ಲ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಇವರ ಜಗಳ ಹೋಗಿತ್ತು. ಇಬ್ಬರೂ ಮತ್ತೆ ಒಂದಾಗಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

‘ನಾನು ಹಾಗೂ ಕಾರ್ತಿಕ್ ಹಲವು ಕೆಟ್ಟ ಕೆಲಸಗಳನ್ನು ಒಟ್ಟಿಗೆ ಮಾಡಿದ್ದೇವೆ’ ಎಂದು ಹೇಳಿದ್ದರು ವಿನಯ್. ಆದರೆ, ಬಿಗ್ ಬಾಸ್​ನಲ್ಲಿ ಇವರು ಬದ್ಧ ವೈರಿಗಳಂತೆ ನಡೆದುಕೊಂಡಿದ್ದರು. ಈಗ ಸುದೀಪ್ ಅವರ ನೇತೃತ್ವದಲ್ಲಿ ಇವರ ಮಧ್ಯೆ ರಾಜಿ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:ಟಾಸ್ಕ್ ಆಡುವಾಗ ಗಾಯ: ಬಿಗ್​ಬಾಸ್ ಮನೆಯಿಂದ ಸಂಗೀತಾ-ಪ್ರತಾಪ್ ಹೊರಗೆ

ಬಿಳಿ ರೋಸ್ ನೀಡಿ ಕ್ಷಮೆ ಕೇಳುವ ಅವಕಾಶವನ್ನು ಸುದೀಪ್ ನೀಡಿದರು. ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್​ಗೆ ಹೂವು ನೀಡಿದರು. ಟಾಸ್ಕ್​ನಲ್ಲಿ ಮುಖಕ್ಕೆ ನೀರು ಚೆಲ್ಲಿದ್ದಕ್ಕೆ ಕ್ಷಮೆ ಕೇಳಿದರು ಮತ್ತು ಇನ್ನು ಈ ರೀತಿ ಮಾಡುವುದಿಲ್ಲ ಎಂದರು ವರ್ತೂರು. ಆ ಬಳಿಕ ವಿನಯ್ ಅವರು ಕಾರ್ತಿಕ್​​​ಗೆ ಕ್ಷಮೆ ಳಿದರು.

‘ನಾನು ನೀನು ಬಹಳ ವರ್ಷಗಳಿಂದ ಫ್ರೆಂಡ್ಸ್. ಮೂರನೇ ವ್ಯಕ್ತಿಯಿಂದ ಮಿಸ್​ ಅಂಡರ್​​ಸ್ಟ್ಯಾಂಡಿಗ್ ಆಯ್ತು. ನಾನು ಸಾಕಷ್ಟು ರ್ಯೂಡ್ ಆಗಿ ನಡೆದುಕೊಂಡೆ. ಇದಾದಮೇಲೆ ನೀನು ನನ್ನ ಫ್ರೆಂಡ್ ಎಂದು ಟ್ರೀಟ್ ಮಾಡ್ತೀಯೋ ಗೊತ್ತಿಲ್ಲ. ನೀನು ಯಾವಾಗಲೂ ನನ್ನ ಫ್ರೆಂಡ್’ ಎಂದು ಹೇಳಿದ್ದಾರೆ ವಿನಯ್. ಸದ್ಯ ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋ ವೈರಲ್ ಆಗಿದೆ.

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಈ ಮೊದಲು ಹಲವು ಬಾರಿ ವೈಮನಸ್ಸು ಉಂಟಾಗಿತ್ತು. ಆ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈಗ ಮತ್ತೊಮ್ಮೆ ಇವರು ಒಂದಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sun, 10 December 23

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?