AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ 12: ಕಾಗೆ-ನರಿಯ ಕತೆ ಹೇಳಿದ ಸುದೀಪ್, ಕತೆ ಎಲ್ಲರಿಗೂ ಗೊತ್ತು, ಆದರೆ….

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಸಾರದ ದಿನಾಂಕ ಘೋಷಣೆ ಆಗಿದೆ. ಇಂದು ಬಿಗ್​​ಬಾಸ್ 12ರ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಹೊಸ ಪ್ರೋಮೋನಲ್ಲಿ ಸುದೀಪ್ ಹಳೆಯ ಕತೆಯೊಂದನ್ನು ಹೇಳಿದ್ದಾರೆ. ಎಲ್ಲರೂ ಕೇಳಿರುವ ಕತೆಯೇ ಅದು, ಆದರೆ ಯಾರೂ ನಿರೀಕ್ಷಿಸದ ಟ್ವಿಸ್ಟ್ ಒಂದನ್ನು ಸುದೀಪ್ ಕತೆಯ ಕ್ಲೈಮ್ಯಾಕ್ಸ್​​ನಲ್ಲಿ ನೀಡಿದ್ದಾರೆ. ಅಷ್ಟಕ್ಕೂ ಸುದೀಪ್ ಆ ಕತೆ ಹೇಳಿದ್ದು ಯಾಕೆ?

ಬಿಗ್​​ಬಾಸ್ 12: ಕಾಗೆ-ನರಿಯ ಕತೆ ಹೇಳಿದ ಸುದೀಪ್, ಕತೆ ಎಲ್ಲರಿಗೂ ಗೊತ್ತು, ಆದರೆ....
Kichcha Sudeep
ಮಂಜುನಾಥ ಸಿ.
|

Updated on: Sep 13, 2025 | 8:05 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರ ದಿನಾಂಕ ಈಗಾಗಲೇ ಘೋಷಣೆ ಆಗಿದೆ. 12ನೇ ಸೀಸನ್ ಸೆಪ್ಟೆಂಬರ್ 28ರಿಂದ ಪ್ರಸಾರ ಆರಂಭಿಸಲಿದೆ. ಸ್ಪರ್ಧಿಗಳ ಆಯ್ಕೆ ಅಂತಿಮಗೊಂಡಿದೆ. ಇನ್ನೇನಿದ್ದರು ಅದ್ಧೂರಿ ಇನ್ಯಾಗುರೇಷನ್ ಕಾರ್ಯಕ್ರಮ ನಡೆಯಬೇಕು. ಬಿಗ್​​ಬಾಸ್ 12ಕ್ಕೆ ಸಂಬಂಧಿಸಿದಂತೆ ಪ್ರೋಮೊ ಒಂದು ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್​​ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಅಂದಹಾಗೆ ಪ್ರೋಮೋನಲ್ಲಿ ಸುದೀಪ್ ಆಸಕ್ತಿಕರವಾದ ಕತೆಯೊಂದನ್ನು ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವ ಕಾಗೆ ಮತ್ತು ನರಿಯ ಕತೆಯನ್ನು ಸುದೀಪ್ ಈ ಹೊಸ ಪ್ರೋಮೋನಲ್ಲಿ ಹೇಳಿದ್ದಾರೆ. ಕಾಗೆ ಅಜ್ಜಿಯಿಂದ ವಡೆಯೊಂದನ್ನು ಪಡೆದು, ಅದನ್ನು ಬಾಯಲ್ಲಿ ಕಚ್ಚಿಕೊಂಡು ಇನ್ನೇನು ತಿನ್ನಬೇಕು ಎಂದಿದ್ದಾಗ ನರಿ ಬಂದು, ಕಾಗೆ, ನೀನು ಚೆನ್ನಾಗಿ ಹಾಡುತ್ತೀಯ, ನನಗಾಗಿ ಹಾಡು ಹಾಡು ಎನ್ನುತ್ತದೆ. ಕಾಗೆ ವಡೆ ಕಚ್ಚಿದ ಬಾಯಿ ತೆರೆದು ಹಾಡಲು ಶುರು ಮಾಡಿದ ಕೂಡಲೇ ವಡೆ ಬಾಯಿಂದ ಜಾರಿ ಬಿದ್ದು ನರಿಯ ಬಾಯಿ ಸೇರುತ್ತದೆ.

ಆದರೆ ಈ ಕತೆಯ ಕ್ಲೈಮ್ಯಾಕ್ಸ್ ಅನ್ನು ಬದಲಿಸಿ ಹೇಳಿದರು. ಸುದೀಪ್, ನರಿ, ಕಾಗೆಗೆ ಹಾಡು ಎಂದಾಗ, ಆ ಕಾಗೆ ಬಾಯಲ್ಲಿ ಕಚ್ಚಿಕೊಂಡಿದ್ದ ವಡೆಯನ್ನು ಕೆಳಗೆ ಇಟ್ಟು ಅದನ್ನು ಕಾಲಲ್ಲಿ ಹಿಡಿದುಕೊಂಡು ಹಾಡು ಹಾಡುತ್ತದೆಯಂತೆ. ತನ್ನ ಯೋಜನೆ ತಲೆಕೆಳಗಾಗಿದ್ದು ನೋಡಿ ನರಿ ಹೊರಟು ಹೋಗುತ್ತದೆಯಂತೆ. ಹೀಗೆಂದು ಸುದೀಪ್ ಅವರು ಕಾಗೆ-ನರಿಯ ಕತೆಯನ್ನು ಬದಲಾಯಿಸಿ ಹೇಳಿದ್ದಾರೆ.

ಆದರೆ ಹೀಗೆ ಕತೆ ಬದಲಾಯಿಸಲು ಕಾರಣವಿದೆ. ಸುದೀಪ್ ಹೇಳಿರುವಂತೆ, ಈ ವರೆಗೆ 11 ಬಿಗ್​​ಬಾಸ್ ಸೀಸನ್ ಪ್ರಸಾರ ಆಗಿದೆ. ನಮಗೆ ಬಿಗ್​​ಬಾಸ್ ಅರ್ಥವಾಗಿದೆ, ಯಾವಾಗ ಏನಾಗುತ್ತದೆ, ಹೇಗೆ ನಡೆಯುತ್ತದೆ ಎಲ್ಲವೂ ಗೊತ್ತಿದೆ, ನಾವು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಎಲ್ಲವೂ ನಡೆಯುತ್ತದೆ ಎಂದುಕೊಂಡಿದ್ದರೆ ಅದು ತಪ್ಪಂತೆ. ಈ ವರೆಗೆ ನಡೆಯದ ರೀತಿಯಲ್ಲಿ ಈ ಬಾರಿ ನಡೆಯಲಿದೆಯಂತೆ. ನಮಗೆ ಗೊತ್ತು ಎಂದುಕೊಂಡಿರುವವರು ಶಾಕ್ ಆಗುವಂತಿರುತ್ತದೆಯಂತೆ ಬಿಗ್​​ಬಾಸ್ ಸೀಸನ್ 12.

ಬಿಗ್​​ಬಾಸ್ ಸೀಸನ್ 12ರ ಇನ್ಯಾಗುರೇಷನ್ ಕಾರ್ಯಕ್ರಮದ ಪ್ರಸಾರ ಸೆಪ್ಟೆಂಬರ್ 28, ಸಂಜೆ 6:30ಕ್ಕೆ ಆಗುತ್ತದೆ. ಪ್ರತಿ ದಿನದ ಎಪಿಸೋಡ್​​ಗಳ ಪ್ರಸಾರ ರಾತ್ರಿ 9:30 ರಿಂದ 10:30ರ ವರೆಗೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ