ಉಗ್ರರೂಪ ತೋರಿದ ಸುದೀಪ್: ಮಂಕಾದ ಮಹಾಕವಿ ಮಂಜ
ಎರಡನೇ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು. ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ ಮಂಜನಿಗೆ.

ಮುಖ್ಯಾಂಶಗಳು
- ಕಿಚ್ಚ ಸುದೀಪ್ ಉಗ್ರರೂಪ ತೋರಿದರು.
- ವಾರದಿಂದ ಅಬ್ಬರಿಸಿದ್ದ ಮಂಜ, ಸುದೀಪ್ ಮುಂದೆ ಥಂಡಾ ಹೊಡೆದ
- ಮಂಜನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್
ಸುದೀಪ್, ಸಾಮಾನ್ಯವಾಗಿ ತಾಳ್ಮೆ ಕಳೆದುಕೊಂಡು ಮಾತನಾಡುವುದಿಲ್ಲ, ಈ ಬಿಗ್ಬಾಸ್ ವೇದಿಕೆ ಮೇಲೆ ಅವರು ತಾಳ್ಮೆ ಕಳೆದುಕೊಂಡಿದ್ದು ಬಲು ಅಪರೂಪ. 13ನೇ ಸೀಸನ್ನಿನ ಎರಡನೇ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು. ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ ಮಂಜನಿಗೆ.
ಮಂಜ ಈ ವಾರ ಮಾಡಿದ್ದು ಒಂದೆರಡಲ್ಲ. ಸಿಕ್ಕ-ಸಿಕ್ಕವರ ಮೇಲೆಲ್ಲ ರೌಡಿತನ ತೋರಿದ್ದ. ಬಿಗ್ಬಾಸ್ ಮನೆಯ ಹಲವಾರು ನಿಯಮಗಳನ್ನು ಮುರಿದಿದ್ದ. ಹಿರಿಯರು, ಕಿರಿಯರು, ಮಹಿಳೆಯರು ಎಂದು ಸಹ ನೋಡದೆ ಕೆಟ್ಟದಾಗಿ ವರ್ತಿಸಿದ್ದ. ಖುದ್ದು ಬಿಗ್ಬಾಸ್ ಬಗ್ಗೆಯೂ ಕೆಟ್ಟದಾಗಿ, ಏಕವಚನದಲ್ಲಿ ಮಾತನಾಡಿದ್ದ. ಆದರೆ ಎಲ್ಲದಕ್ಕೂ ಸುದೀಪ್ ತಕ್ಕ ಉತ್ತರಗಳನ್ನೇ ನೀಡಿದರು.
ಇತರೆ ಸ್ಪರ್ಧಿಗಳನ್ನು ಐದು ಪೈಸೆ ಯೋಗ್ಯತೆ, 10 ಪೈಸೆ ಯೋಗ್ಯತೆ, 50 ಪೈಸೆ ಯೋಗ್ಯತೆ ಎಂದೆಲ್ಲ ಹೇಳಿದ್ದ. ಈ ಬಗ್ಗೆ ಮಾತನಾಡಿದ ಸುದೀಪ್, ‘ನಿನ್ನ ಯೋಗ್ಯತೆ ಎಷ್ಟು?’ ಎಂದರು. ‘ಯೋಗ್ಯತೆಯೇ ಇಲ್ಲದ ವ್ಯಕ್ತಿ ಇನ್ನೊಬ್ಬರ ಯೋಗ್ಯತೆ ಹೇಗೆ ಅಳೆಯಬಲ್ಲ’ ಎಂದು ಪರೋಕ್ಷವಾಗಿ ಮಂಜನ ಬೆಲೆ ಇಲ್ಲದವ ಎಂದು ಟೀಕೆ ಮಾಡಿದರು.
ವ್ಯಕ್ತಿಯೊಬ್ಬ ಮಾತನಾಡಿದ ಅದರಲ್ಲಿ ತೂಕ, ಅರ್ಥ ಇರಬೇಕು ಇರಬೇಕು ಇಲ್ಲವಾದರೆ ಅದನ್ನು ಬರೀ ಸೌಂಡ್ ಅಷ್ಟೆ ಅನ್ನುತ್ತೀವಿ, ನಿಮ್ಮದು ಬರೀ ಸೌಂಡ್, ನಿಮ್ಮ ಮಾತಿಗೆ ತೂಕ, ಅರ್ಥ ಇರುವುದಿಲ್ಲ’ ಎಂದರು. ಸುದೀಪ್ ಅವರನ್ನು ಮಂಜ ‘ಅಣ್ಣ’ ಎಂದು ಕರೆದಾಗ ‘ನನ್ನ ತಮ್ಮನಾಗಲು ಬೆಲೆ ಇರಬೇಕಾಗುತ್ತದೆ. ನಿನ್ನನ್ನು ತಮ್ಮ ಎಂದು ಒಪ್ಪಿಕೊಂಡರೆ, ನನ್ನನ್ನು ಅಣ್ಣ ಎಂದು ಕರೆದವರಿಗೆ ಅವಮಾನ ಮಾಡಿದಂತಾಗುತ್ತದೆ’ ಎಂದರು ಕಿಚ್ಚ. ಸುದೀಪ್ ಆಡಿದ ಪ್ರತಿಮಾತು, ಮಂಜನಿಗೆ ಕಪಾಳಕ್ಕೆ ಭಾರಿಸಿದಂತೆಯೇ ಇತ್ತು.
ಇದನ್ನೂ ಓದಿ:ಕ್ಯಾಪ್ಟನ್ ಆದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್; ಮಾಡಿದ ತಪ್ಪೇನು?
ಬಿಗ್ಬಾಸ್ ಅನ್ನು ಏಕವಚನದಲ್ಲಿ ಮಾತಾಡ್ತೀರ, ನಾನು ಹೇಳಿದಂತೆ ಆಗಬೇಕು ಅನ್ನುತ್ತೀರ, ನಾನೇ ಗ್ರೇಟ್ ಅನ್ನುತ್ತೀರ, ನಿಮ್ಮ ವಯಸ್ಸಿಗೆ ಇದೆಲ್ಲ ಬೇಕ? ವಯಸ್ಸಿನ ಬಗ್ಗೆ ಆದರೂ ಮರ್ಯಾದೆ ಇರಲಿ. ಕ್ಯೆಮೆರಾ ಇದೆ ಎಂಬ ಕಾರಣಕ್ಕೆ ಎಲ್ಲರೂ ಮೌನವಾಗಿ ಸಹಿಸಿಕೊಂಡಿದ್ದಾರೆ. ಕ್ಯಾಮೆರಾ ಆಫ್ ಆದರೆ ಕತೆಯೇ ಬೇರೆ ಆಗುತ್ತೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.
ವಾರವೆಲ್ಲ ಬಾಯಿಗೆ ಬಂದಂತೆ ಮಾತನಾಡಿ ಅಬ್ಬರಿಸಿದ್ದ ಮಹಾಕವಿ ಮಂಜ, ಸುದೀಪ್ ಎದುರು ಬಾಲ ಸುಟ್ಟ ಬೆಕ್ಕಿನಂತೆ ತಲೆ ಬಗ್ಗಿಸಿಕೊಂಡು ಕೂತಿದ್ದ. ಕ್ಷಮೆ ಕೇಳಿದ ಮಂಜನಿಗೆ, ‘ಮುಂದಿನ ವಾರ ಮತ್ತೆ ಬಂದಾಗ ಹೊಸ ಮಂಜನನ್ನು ನೋಡಬೇಕು, ನಾನು ಹೀಗೇ ಇರುತ್ತೀನಿ ಎಂದರೆ ಜನ ಮುಂದಿನದ್ದನ್ನು ನಿರ್ಧರಿಸುತ್ತಾರೆ’ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




