ಮನೆಯ ಮೊದಲ ಕ್ಯಾಪ್ಟನ್ ಹಂಸಾಗೆ ಕಿಚ್ಚನ ಕ್ಲಾಸ್

ಬಿಗ್​ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಪಂಚಾಯಿತಿ ಶನಿವಾರ ನಡೆದಿದ್ದು, ಸುದೀಪ್ ಪ್ರತಿಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳಿಗೆ ತಮ್ಮದೇ ರೀತಿಯಲ್ಲಿ ಎಚ್ಚರಿಕೆಗಳನ್ನು ನೀಡಿದರು. ಈ ಸೀಸನ್​ನ ಮೊದಲ ಕ್ಯಾಪ್ಟನ್ ಹಂಸಾ ತಮ್ಮ ಜವಾಬ್ದಾರಿ ಮರೆತಿದ್ದರಿಂದ ಟೀಕೆಗೆ ಗುರಿಯಾದರು.

ಮನೆಯ ಮೊದಲ ಕ್ಯಾಪ್ಟನ್ ಹಂಸಾಗೆ ಕಿಚ್ಚನ ಕ್ಲಾಸ್
Follow us
|

Updated on:Oct 05, 2024 | 11:34 PM

ಬಿಗ್​ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿದ್ದಾರೆ ಸ್ವರ್ಗವಾಸಿ ಹಂಸ. ಕ್ಯಾಪ್ಟನ್ ಆಗಲು ಸಾಕಷ್ಟು ರಾಜಕೀಯವನ್ನು ಹಂಸ ಮಾಡಿದ್ದರು. ವಿಶೇಷವಾಗಿ ನರಕವಾಸಿಗಳ ಜೊತೆಗೆ ಒಳ ಒಪ್ಪಂದ ಸಹ ಮಾಡಿಕೊಂಡಿದ್ದರು. ಏನಾದರೂ ಆಗಲಿ ಕ್ಯಾಪ್ಟನ್ ಆಗಲೇ ಬೇಕು ಎಂದು ನಿರ್ಣಯಿಸಿ ಆಟ ಆಡಿದ್ದ ಹಂಸ ಕೊನೆಗೆ ತಮ್ಮ ರಾಜಕೀಯದಿಂದಲೇ ಕ್ಯಾಪ್ಟನ್ ಆದರು. ಒಂದು ವಾರದ ಇಮ್ಯೂನಿಟಿ ಪಡೆವ ಜೊತೆಗೆ ಕ್ಯಾಪ್ಟನ್ ರೂಂ ಸಹ ಪಡೆದುಕೊಂಡರು.

ಆದರೆ ಕ್ಯಾಪ್ಟನ್ ಆದ ಖುಷಿ ಹಂಸಗೆ ಹೆಚ್ಚು ಸಮಯ ಉಳಿಯಲಿಲ್ಲ. ಶನಿವಾರ ನಡೆದ ಈ ಸೀಸನ್​ನ ಮೊದಲ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್, ಹಂಸಾರ ರಾಜಕೀಯವನ್ನು, ಕ್ಯಾಪ್ಟನ್ ಆದ ಮೇಲೆ ಅವರು ಜವಾಬ್ದಾರಿ ಮರೆತು ವರ್ತಿಸಿದ ರೀತಿಯನ್ನು ಕಟುವಾಗಿ ಟೀಕೆ ಮಾಡಿದರು. ಮಾತ್ರವಲ್ಲದೆ ಅವರು ಮಾಡಿಕೊಂಡಿದ್ದ ಒಳ ಒಪ್ಪಂದವನ್ನು ಇತರೆ ಸ್ಪರ್ಧಿಗಳ ಎದುರು ಬಯಲು ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ನಮಗೆ ಬೆಂಬಲ ನೀಡಿದರೆ ನೀವು ಹೇಳಿದಂತೆಯೇ ಕೇಳುತ್ತೇನೆ ಎಂದು ನರಕವಾಸಿಗಳಿಗೆ ಮಾತು ಕೊಟ್ಟಿದ್ದರಂತೆ. ಇನ್ನು ಸ್ವರ್ಗವಾಸಿಗಳಲ್ಲಿಯೂ ಕೆಲವರಿಗೆ ಕೆಲವು ಭರವಸೆಗಳನ್ನು ನೀಡಿದ್ದಾರೆ. ಕ್ಯಾಪ್ಟನ್ ಆದ ಬಳಿಕವೂ ಸಹ ನಿಯಮ ಮೀರಿ ನರಕವಾಸಿಗಳಿಗೆ ಕೆಲವು ರಿಯಾಯಿತಿಗಳನ್ನು ಕೊಟ್ಟಿದ್ದನ್ನು ಸುದೀಪ್ ಟೀಕೆ ಮಾಡಿದರು. ನಿಯಮದ ಪ್ರಕಾರ ನರಕವಾಸಿಗಳು ಮೇಕಪ್ ರೂಂನಿಂದ ಹೊರಗೆ ಬರುವಂತಿರಲಿಲ್ಲ ಆದರೆ ಶನಿವಾರದ ಎಪಿಸೋಡ್​ಗೆ ಮೇಕಪ್​ ರೂಂಗೆ ಬಂದು ಮೇಕಪ್ ಮಾಡಿಕೊಂಡಿದ್ದರು ನರಕವಾಸಿಗಳು ಇದರ ಬಗ್ಗೆಯೂ ಸುದೀಪ್ ಆಕ್ಷೇಪ ಎತ್ತಿದರು.

ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ವಿಶೇಷ ಗೌರವ, ಜವಾಬ್ದಾರಿ ಇದೆ ಈ ಬಾರಿಯೂ ಕ್ಯಾಪ್ಟನ್​ಗೆ ಕೆಲ ವಿಶೇಷ ಶಕ್ತಿಗಳು ಸಹ ಇವೆ. ಒಬ್ಬ ನರಕವಾಸಿಯನ್ನು ಸ್ವರ್ಗಕ್ಕೆ ಕರೆದುಕೊಳ್ಳುವ ಶಕ್ತಿ ಇದೆ. ಹೀಗಿರುವಾಗ ನೀವು ಹೀಗೆ ನಿಯಮ ಮೀರಿ ನಡೆದುಕೊಳ್ಳುವುದು ಸೂಕ್ತವಲ್ಲ ಎಂದು ಸುದೀಪ್ ತಮ್ಮದೇ ರೀತಿಯಲ್ಲಿ ವಿನಯದಿಂದಲೇ ಅರ್ಥ ಮಾಡಿಸಿದರು. ಆರಂಭದಲ್ಲಿ ಖುಷಿಯಾಗಿದ್ದ ಹಂಸಾ ಆ ಬಳಿಕ ಸುದೀಪ್​ ಹೇಳಿದ ಮಾತುಗಳನ್ನು ಅರ್ಥ ಮಾಡಿಕೊಂಡು ಇನ್ನು ಮುಂದೆ ಸರಿಯಾಗಿ ಇರುವುದಾಗಿಯೂ, ನಿಯಮಗಳನ್ನು ಸರಿಯಾಗಿ ಫಾಲೋ ಮಾಡುವುದಾಗಿಯೂ ಇತರರನ್ನು ನಿಯಂತ್ರಣದಲ್ಲಿ ಇಡುವುದಾಗಿ ಭರವಸೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 pm, Sat, 5 October 24

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ