AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಏಕವಚನ ಬಳಸಿದ ವಿನಯ್: ಖಡಕ್ ಉತ್ತರ ಕೊಟ್ಟ ತನಿಷಾ

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಕಳೆದೊಂದು ವಾರದಲ್ಲಿ ವಿಶೇಷವಾಗಿ ಬುಧವಾರದ ಎಪಿಸೋಡ್​ನಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಗುರುವಾರವೂ ಮತ್ತೆ ಅದನ್ನೇ ಮುಂದುವರೆಸಿದ ಅವರಿಗೆ ತನಿಷಾ ಖಡಕ್ ಉತ್ತರ ಕೊಟ್ಟರು.

ಮತ್ತೆ ಏಕವಚನ ಬಳಸಿದ ವಿನಯ್: ಖಡಕ್ ಉತ್ತರ ಕೊಟ್ಟ ತನಿಷಾ
ಮಂಜುನಾಥ ಸಿ.
|

Updated on: Nov 02, 2023 | 11:43 PM

Share

ಬಿಗ್​ಬಾಸ್ ಸ್ಪರ್ಧಿ ವಿನಯ್ (VInay) ಅವರನ್ನು ಸುದೀಪ್ ಅವರು ಆನೆ ಎಂದು ಹೊಗಳಿದ ಬೆನ್ನಲ್ಲೆ ಸ್ವತಃ ಮದ್ದೇರಿದ ಆನೆಯಂತೆ ವಿನಯ್ ಬಿಗ್​ಬಾಸ್​ನಲ್ಲಿ ವರ್ತಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಇನ್ನೂ ಕೆಲವರಿಗೆ ಬೆದರಿಸುವ ದನಿಯಲ್ಲಿ ಮಾತನಾಡಿದ್ದ ವಿನಯ್ ಹಳ್ಳಿ ಟಾಸ್ಕ್​ನ ವೇಳೆಯಲ್ಲಿ ಸಂಗೀತಾ ಮೇಲೆ ತಮ್ಮ ಪ್ರತಾಪ ಪ್ರದರ್ಶಿಸಿದ್ದರು. ಅದಕ್ಕೆ ಸಂಗೀತಾ ಸೊಪ್ಪು ಹಾಕಿರಲಿಲ್ಲ. ಇದೀಗ ಮತ್ತೆ ವಿನಯ್ ತಮ್ಮ ನಾಲಗೆ ಹರಿಬಿಟ್ಟು ಮತ್ತೊಬ್ಬ ಮಹಿಳೆಯನ್ನು ಏಕವಚನದಿಂದ ಮಾತನಾಡಿಸಿ ಬೈಸಿಕೊಂಡಿದ್ದಾರೆ.

ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್, ಸ್ಪರ್ಧಿಗಳಿಗಾಗಿ ಕುಸ್ತಿ ಪಂದ್ಯವನ್ನು ಆಯೋಜಿಸಿದ್ದರು. ಮೊದಲು ಕಣಕ್ಕೆ ಇಳಿದು ಮೈಖಲ್ ವಿರುದ್ಧ ಎರಡು ನೇರ ಸುತ್ತುಗಳಲ್ಲಿ ಜಯಿಸಿದ್ದ ವಿನಯ್ ಅಖಾಡದ ಪಕ್ಕದಲ್ಲಿ ತಮ್ಮ ತಂಡದ ಸದಸ್ಯರೊಟ್ಟಿಗೆ ಕುಳಿತಿದ್ದರು. ಅವರ ಪಂದ್ಯದ ಬಳಿಕ ಸಂಗೀತಾ ಹಾಗೂ ನೀತು ನಡುವೆ ಸ್ಪರ್ಧೆ ನಡೆಯಿತು. ಇಬ್ಬರು ಸ್ಪರ್ಧಿಗಳ ನಡುವೆ ಬಹಳ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ತಂಡದ ಸದಸ್ಯರು ತಮ್ಮ ತಂಡದ ಆಟಗಾರರಿಗೆ ಬೆಂಬಲ ನೀಡುತ್ತಿದ್ದರು.

ತನಿಷಾ ಸಹ ತಮ್ಮ ತಂಡದ ಕ್ಯಾಪ್ಟನ್ ಆದ ಸಂಗೀತಾಗೆ ಬೆಂಬಲ ನೀಡುತ್ತಾ, ಎದುರಾಳಿ ನೀತುಗೆ, ನೋಡಿಕೊಂಡು ಆಡಿ, ನೀವು ಆಡುತ್ತಿರುವುದು ತಪ್ಪಾಗಬಹುದು ಎಂದರು. ಅದಕ್ಕೆ ಉಡಾಫೆಯಾಗಿ ವಿನಯ್, ನೀನು ಹೋಗಿ ಬಟ್ಟೆ ಬದಾಯಿಸಿಕೊಂಡು ಅಖಾಡಕ್ಕೆ ಇಳಿ ಎಂದರು. ಆಗ ತನಿಷಾ, ‘ನಾನು ಆಡುತ್ತಿರುವವರ ಬಳಿ ಮಾತನಾಡುತ್ತಿರುವುದು, ನಿಮ್ಮ ಬಳಿ ಅಲ್ಲ ಎಂದರು. ಅದಕ್ಕೆ ತಾಳ್ಮೆ ಕಳೆದುಕೊಂಡ ವಿನಯ್ ಏನೇ ನಿಂದು ಏನಿವಾಗ ಎಂದು ಏರಿದ ದನಿಯಲ್ಲಿ ಜಗಳಕ್ಕೆ ನಿಂತರು. ತನಿಷಾ ಸಹ ತಾಳ್ಮೆ ಕಳೆದುಕೊಂಡು, ಏಕವಚನದಲ್ಲಿ ಮಾತನಾಡಿದರೆ ಸರಿಯಾಗಿರಲ್ಲ, ಏನೇ, ಹೋಗೆ ಬಾರೆ ಎಂಬುದನ್ನು ನಿನ್ನ ಹೆಂಡತಿ ಹತ್ತಿರ ಇಟ್ಟುಕೊ ನನ್ನ ಬಳಿ ಅಲ್ಲ, ಎಂದು ಸರಿಯಾಗಿ ಜಾಡಿಸಿದರು.

ಇದನ್ನೂ ಓದಿ:ವಿನಯ್​ಗೆ ಕೌಂಟರ್ ಕೊಟ್ಟು ಭೇಷ್ ಎನಿಸಿಕೊಂಡ ಪ್ರತಾಪ್

ವಿನಯ್​ರನ್ನು ಅವರ ತಂಡದ ಸದಸ್ಯರು, ತನಿಷಾರನ್ನು ಅವರ ತಂಡದ ಸದಸ್ಯರು ಸುಮ್ಮನಾಗಿಸಿದರು. ಆ ಆಟದಲ್ಲಿ ಸಂಗೀತಾ ಗೆದ್ದರಾದರೂ ಒಟ್ಟು ಕುಸ್ತಿ ಪಂದ್ಯವನ್ನು ಸಂಗೀತಾರ ತಂಡ ಸೋತಿತು. ಬಳಿಕ ವಿನಯ್ ಬಂದು ತನಿಷಾ ಬಳಿ ಕ್ಷಮೆ ಕೇಳಿದರು. ಮಾತಿನ ಭರದಲ್ಲಿ ಏಕವಚನ ಬಂತು ಎಂದರು. ತನಿಷಾ ಹೆಚ್ಚೇನೂ ಮಾತನಾಡದೆ ವಿನಯ್ ಕ್ಷಮೆಯನ್ನು ಸ್ವೀಕರಿಸಿದರು.

ಕಳೆದೊಂದು ವಾರ ಅದರಲ್ಲಿಯೂ ವಿಶೇಷವಾಗಿ ನಿನ್ನೆಯ ಎಪಿಸೋಡ್​ನಲ್ಲಿ ವಿನಯ್, ಸಂಗೀತಾ ಹಾಗೂ ಇತರರ ಮೇಲೆ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ವಿನಯ್ ಇಂದೂ ಅದನ್ನೇ ಮುಂದುವರೆಸಿದ್ದರು, ಆದರೆ ಎದುರಿಂದ ಅಷ್ಟೇ ಖಡಕ್ ಆದ ಪ್ರತಿಕ್ರಿಯೆ ಬಂದ ಕೂಡಲೇ ಕ್ಷಮೆ ಕೇಳಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು