AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಏಕವಚನ ಬಳಸಿದ ವಿನಯ್: ಖಡಕ್ ಉತ್ತರ ಕೊಟ್ಟ ತನಿಷಾ

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಕಳೆದೊಂದು ವಾರದಲ್ಲಿ ವಿಶೇಷವಾಗಿ ಬುಧವಾರದ ಎಪಿಸೋಡ್​ನಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಗುರುವಾರವೂ ಮತ್ತೆ ಅದನ್ನೇ ಮುಂದುವರೆಸಿದ ಅವರಿಗೆ ತನಿಷಾ ಖಡಕ್ ಉತ್ತರ ಕೊಟ್ಟರು.

ಮತ್ತೆ ಏಕವಚನ ಬಳಸಿದ ವಿನಯ್: ಖಡಕ್ ಉತ್ತರ ಕೊಟ್ಟ ತನಿಷಾ
ಮಂಜುನಾಥ ಸಿ.
|

Updated on: Nov 02, 2023 | 11:43 PM

Share

ಬಿಗ್​ಬಾಸ್ ಸ್ಪರ್ಧಿ ವಿನಯ್ (VInay) ಅವರನ್ನು ಸುದೀಪ್ ಅವರು ಆನೆ ಎಂದು ಹೊಗಳಿದ ಬೆನ್ನಲ್ಲೆ ಸ್ವತಃ ಮದ್ದೇರಿದ ಆನೆಯಂತೆ ವಿನಯ್ ಬಿಗ್​ಬಾಸ್​ನಲ್ಲಿ ವರ್ತಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಇನ್ನೂ ಕೆಲವರಿಗೆ ಬೆದರಿಸುವ ದನಿಯಲ್ಲಿ ಮಾತನಾಡಿದ್ದ ವಿನಯ್ ಹಳ್ಳಿ ಟಾಸ್ಕ್​ನ ವೇಳೆಯಲ್ಲಿ ಸಂಗೀತಾ ಮೇಲೆ ತಮ್ಮ ಪ್ರತಾಪ ಪ್ರದರ್ಶಿಸಿದ್ದರು. ಅದಕ್ಕೆ ಸಂಗೀತಾ ಸೊಪ್ಪು ಹಾಕಿರಲಿಲ್ಲ. ಇದೀಗ ಮತ್ತೆ ವಿನಯ್ ತಮ್ಮ ನಾಲಗೆ ಹರಿಬಿಟ್ಟು ಮತ್ತೊಬ್ಬ ಮಹಿಳೆಯನ್ನು ಏಕವಚನದಿಂದ ಮಾತನಾಡಿಸಿ ಬೈಸಿಕೊಂಡಿದ್ದಾರೆ.

ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್, ಸ್ಪರ್ಧಿಗಳಿಗಾಗಿ ಕುಸ್ತಿ ಪಂದ್ಯವನ್ನು ಆಯೋಜಿಸಿದ್ದರು. ಮೊದಲು ಕಣಕ್ಕೆ ಇಳಿದು ಮೈಖಲ್ ವಿರುದ್ಧ ಎರಡು ನೇರ ಸುತ್ತುಗಳಲ್ಲಿ ಜಯಿಸಿದ್ದ ವಿನಯ್ ಅಖಾಡದ ಪಕ್ಕದಲ್ಲಿ ತಮ್ಮ ತಂಡದ ಸದಸ್ಯರೊಟ್ಟಿಗೆ ಕುಳಿತಿದ್ದರು. ಅವರ ಪಂದ್ಯದ ಬಳಿಕ ಸಂಗೀತಾ ಹಾಗೂ ನೀತು ನಡುವೆ ಸ್ಪರ್ಧೆ ನಡೆಯಿತು. ಇಬ್ಬರು ಸ್ಪರ್ಧಿಗಳ ನಡುವೆ ಬಹಳ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ತಂಡದ ಸದಸ್ಯರು ತಮ್ಮ ತಂಡದ ಆಟಗಾರರಿಗೆ ಬೆಂಬಲ ನೀಡುತ್ತಿದ್ದರು.

ತನಿಷಾ ಸಹ ತಮ್ಮ ತಂಡದ ಕ್ಯಾಪ್ಟನ್ ಆದ ಸಂಗೀತಾಗೆ ಬೆಂಬಲ ನೀಡುತ್ತಾ, ಎದುರಾಳಿ ನೀತುಗೆ, ನೋಡಿಕೊಂಡು ಆಡಿ, ನೀವು ಆಡುತ್ತಿರುವುದು ತಪ್ಪಾಗಬಹುದು ಎಂದರು. ಅದಕ್ಕೆ ಉಡಾಫೆಯಾಗಿ ವಿನಯ್, ನೀನು ಹೋಗಿ ಬಟ್ಟೆ ಬದಾಯಿಸಿಕೊಂಡು ಅಖಾಡಕ್ಕೆ ಇಳಿ ಎಂದರು. ಆಗ ತನಿಷಾ, ‘ನಾನು ಆಡುತ್ತಿರುವವರ ಬಳಿ ಮಾತನಾಡುತ್ತಿರುವುದು, ನಿಮ್ಮ ಬಳಿ ಅಲ್ಲ ಎಂದರು. ಅದಕ್ಕೆ ತಾಳ್ಮೆ ಕಳೆದುಕೊಂಡ ವಿನಯ್ ಏನೇ ನಿಂದು ಏನಿವಾಗ ಎಂದು ಏರಿದ ದನಿಯಲ್ಲಿ ಜಗಳಕ್ಕೆ ನಿಂತರು. ತನಿಷಾ ಸಹ ತಾಳ್ಮೆ ಕಳೆದುಕೊಂಡು, ಏಕವಚನದಲ್ಲಿ ಮಾತನಾಡಿದರೆ ಸರಿಯಾಗಿರಲ್ಲ, ಏನೇ, ಹೋಗೆ ಬಾರೆ ಎಂಬುದನ್ನು ನಿನ್ನ ಹೆಂಡತಿ ಹತ್ತಿರ ಇಟ್ಟುಕೊ ನನ್ನ ಬಳಿ ಅಲ್ಲ, ಎಂದು ಸರಿಯಾಗಿ ಜಾಡಿಸಿದರು.

ಇದನ್ನೂ ಓದಿ:ವಿನಯ್​ಗೆ ಕೌಂಟರ್ ಕೊಟ್ಟು ಭೇಷ್ ಎನಿಸಿಕೊಂಡ ಪ್ರತಾಪ್

ವಿನಯ್​ರನ್ನು ಅವರ ತಂಡದ ಸದಸ್ಯರು, ತನಿಷಾರನ್ನು ಅವರ ತಂಡದ ಸದಸ್ಯರು ಸುಮ್ಮನಾಗಿಸಿದರು. ಆ ಆಟದಲ್ಲಿ ಸಂಗೀತಾ ಗೆದ್ದರಾದರೂ ಒಟ್ಟು ಕುಸ್ತಿ ಪಂದ್ಯವನ್ನು ಸಂಗೀತಾರ ತಂಡ ಸೋತಿತು. ಬಳಿಕ ವಿನಯ್ ಬಂದು ತನಿಷಾ ಬಳಿ ಕ್ಷಮೆ ಕೇಳಿದರು. ಮಾತಿನ ಭರದಲ್ಲಿ ಏಕವಚನ ಬಂತು ಎಂದರು. ತನಿಷಾ ಹೆಚ್ಚೇನೂ ಮಾತನಾಡದೆ ವಿನಯ್ ಕ್ಷಮೆಯನ್ನು ಸ್ವೀಕರಿಸಿದರು.

ಕಳೆದೊಂದು ವಾರ ಅದರಲ್ಲಿಯೂ ವಿಶೇಷವಾಗಿ ನಿನ್ನೆಯ ಎಪಿಸೋಡ್​ನಲ್ಲಿ ವಿನಯ್, ಸಂಗೀತಾ ಹಾಗೂ ಇತರರ ಮೇಲೆ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ವಿನಯ್ ಇಂದೂ ಅದನ್ನೇ ಮುಂದುವರೆಸಿದ್ದರು, ಆದರೆ ಎದುರಿಂದ ಅಷ್ಟೇ ಖಡಕ್ ಆದ ಪ್ರತಿಕ್ರಿಯೆ ಬಂದ ಕೂಡಲೇ ಕ್ಷಮೆ ಕೇಳಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ