AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​​ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ

Bigg Boss Telugu Finale: ಬಿಗ್​​ಬಾಸ್ ತೆಲುಗು ಸೀಸನ್ 09 ಚಾಲ್ತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಈ ಬಾರಿ ತೆಲುಗು ಬಿಗ್​​ಬಾಸ್​​ನಲ್ಲಿ ಕರ್ನಾಟಕದ ಸಂಜನಾ ಗಲ್ರಾನಿ ಮತ್ತು ನಟಿ ತನುಜಾ ಪುಟ್ಟಸ್ವಾಮಿ ಸ್ಪರ್ಧಿಗಳಾಗಿ ಭಾಗಿ ಆಗಿದ್ದಾರೆ. ಅಂದಹಾಗೆ ಇದೀಗ ತನುಜಾ ಪುಟ್ಟಸ್ವಾಮಿ ಅವರು ಫಿನಾಲೆ ತಲುಪಿದ್ದಾರೆ. ಸಂಜನಾ ಸಹ ಫಿನಾಲೆ ತಲುಪುತ್ತಾರಾ? ಕಾದು ನೋಡಬೇಕಿದೆ.

ತೆಲುಗು ಬಿಗ್​​ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ
Tanuja Puttaswamy
ಮಂಜುನಾಥ ಸಿ.
|

Updated on:Dec 13, 2025 | 4:25 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಚಾಲ್ತಿಯಲ್ಲಿದೆ, ಕನ್ನಡ ಬಿಗ್​​ಬಾಸ್ ಪ್ರಾರಂಭವಾಗಿ 70ಕ್ಕೂ ಹೆಚ್ಚು ದಿನಗಳಾಗಿವೆ. ಕನ್ನಡ ಬಿಗ್​​ಬಾಸ್ ಪ್ರಾರಂಭ ಆಗುವ ಕೆಲವೇ ದಿನಗಳ ಮುಂಚೆ ನೆರೆಯ ತೆಲುಗು ಬಿಗ್​​ಬಾಸ್ ಸಹ ಪ್ರಾರಂಭವಾಗಿದ್ದು, ಇದು ತೆಲುಗು ಬಿಗ್​​ಬಾಸ್​​ನ ಒಂಬತ್ತನೇ ಸೀಸನ್ ಆಗಿದ್ದು ಈ ಸೀಸನ್​​ನಲ್ಲಿ ಇಬ್ಬರು ಕನ್ನಡತಿಯರು ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು ವಿಶೇಷ. ತನುಜಾ ಪುಟ್ಟಸ್ವಾಮಿ ಮತ್ತು ಸಂಜನಾ ಗಲ್ರಾನಿ ಅವರುಗಳು ತೆಲುಗು ಬಿಗ್​​ಬಾಸ್ ಸೀಸನ್ 09ರಲ್ಲಿ ಭಾಗವಹಿಸಿದ್ದರು. ಇದೀಗ ತನುಜಾ ಅವರು ಫಿನಾಲೆಗೆ ಎಂಟ್ರಿ ಕೊಟ್ಟಾಗಿದೆ.

ತೆಲುಗು ಬಿಗ್​​ಬಾಸ್ ಸೀಸನ್ 09 ಅಂತಿಮ ವಾರದಲ್ಲಿದ್ದು, ವಿನ್ನರ್ ಘೋಷಣೆಗೆ ಇನ್ನೊಂದು ವಾರವಷ್ಟೆ ಬಾಕಿ ಇದೆ. ಮನೆಯಲ್ಲಿ ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ ಸೇರಿದಂತೆ ಇನ್ನೂ ಮೂರು ಮಂದಿ ಇದ್ದಾರೆ. ಅವರಲ್ಲಿ ಕಲ್ಯಾಣ್ ಎಂಬುವರು ಈಗಾಗಲೇ ಫಿನಾಲೆ ಟಿಕೆಟ್ ಪಡೆದು, ಫಿನಾಲೆಗೆ ಹೋಗಿ ಬಿಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಬ್ಬರು ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಇದೀಗ ತನುಜಾಗೂ ಸಹ ಈ ವಾರ ಪಿನಾಲೆ ಟಿಕೆಟ್ ದೊರೆತಿದೆ.

ಈ ವಾರದ ಟಾಸ್ಕ್​​ಗಳು ಫಿನಾಲೆ ಟಿಕೆಟ್​​ಗಾಗಿಯೇ ನಡೆದವು. ಎಲ್ಲ ಆಟದಲ್ಲಿಯೂ ಹೆಚ್ಚಾಗಿ ಆಡಿದ ತನುಜಾ ಅವರು ಕೊನೆಯದಾಗಿ ಟಾಸ್ಕ್ ಗೆದ್ದು ಫಿನಾಲೆಗೆ ಹೋಗಿದ್ದಾರೆ. ಮಾತ್ರವಲ್ಲದೆ ಟಾಸ್ಕ್​​ನಲ್ಲಿ ಸೋತ ಭರಣಿ ಸಹ ತಮ್ಮ ಬಳಿ ಇದ್ದ ಪಾಯಿಂಟ್ಸ್​​ಗಳನ್ನು ತನುಜಾಗೆ ನೀಡುವ ಮೂಲಕ ಅವರ ಫಿನಾಲೆ ಪಯಣವನ್ನು ಸುಲಭ ಮಾಡಿದ್ದಾರೆ. ಅಲ್ಲಿಗೆ ಮನೆಯಲ್ಲಿರುವವರ ಪೈಕಿ ತನುಜಾ ಮತ್ತು ಕಲ್ಯಾಣ್ ಇಬ್ಬರೂ ಫಿನಾಲೆ ತಲುಪಿದಂತಾಗಿದೆ.

ಇದನ್ನೂ ಓದಿ:Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

ಸಂಜನಾ ಫಿನಾಲೆ ತಲುಪುತ್ತಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿದೆ. ಸಂಜನಾಗೆ ಪೈಪೋಟಿಯಾಗಿ ಇಮಾನ್ಯುಯೆಲ್ ಇದ್ದಾರೆ. ಅವರು ಸಹ ಬಹಳ ಚೆನ್ನಾಗಿ ಆಟ ಆಡುತ್ತಿದ್ದಾರೆ. ಇನ್ನು ಅವರ ಜೊತೆಗೆ ಭರಣಿ ಮತ್ತು ಸುಮನ್ ಸಹ ಇದ್ದು, ಈ ಇಬ್ಬರೂ ಸಹ ಈ ವಾರ ಎಲಿಮಿನೇಟ್ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅಲ್ಲಿಗೆ, ಸಂಜನಾ ಹಾಗೂ ಇಮಾನ್ಯುಯೆಲ್ ನಡುವೆ ಸ್ಪರ್ಧೆ ಏರ್ಪಡಲಿದೆ.

ತನುಜಾ ಪುಟ್ಟಸ್ವಾಮಿ ಕನ್ನಡದ ನಟಿಯಾಗಿದ್ದು, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತನುಜಾಗೆ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬಿಗ್​​ಬಾಸ್​​ನಲ್ಲಿ ಚೆನ್ನಾಗಿ ಆಡುತ್ತಾ ಬರುತ್ತಿರುವ ಅವರಿಗೆ ತೆಲುಗು ಪ್ರೇಕ್ಷಕರು ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ತನುಜಾ ಗೆಲ್ಲುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sat, 13 December 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ