ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ

|

Updated on: Oct 11, 2024 | 11:02 PM

ಚೈತ್ರಾ ಕುಂದಾಪುರ ಅವರಿಗೆ ಮೂರನೇ ವಾರದ ಕ್ಯಾಪ್ಟೆನ್​ ಆಗಲು ಸಾಧ್ಯವಾಗಿಲ್ಲ. ಮಾತಿನ ಕಾರಣದಿಂದ ಅವರು ಇನ್ನುಳಿದ ಸ್ಪರ್ಧಿಗಳ ಟೀಕೆಗೆ ಗುರಿ ಆಗುತ್ತಿದ್ದಾರೆ. ಅವರು ಕ್ಯಾಪ್ಟೆನ್ಸಿ ಟಾಸ್ಕ್​ ಆಡಬಾರದು ಎಂದು ಬಹುತೇಕರು ಹೇಳಿದರು. ಅದಕ್ಕೆ ಕಾರಣ ನೀಡಿದ್ದು ಕೂಡ ಮಾತಿನ ಸಮಸ್ಯೆ. ಚೈತ್ರಾಗೆ ಇತರರ ಮಾತು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ ಎಂಬುದೇ ಮೈನಸ್​ ಪಾಯಿಂಟ್​.

ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ
Follow us on

ಹೊರ ಜಗತ್ತಿನಲ್ಲಿ ಮಾತುಗಾರ್ತಿ ಎಂದು ಗುರುತಿಸಿಕೊಂಡ ಚೈತ್ರಾ ಕುಂದಾಪುರ ಅವರ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ತಮ್ಮದೇ ರೀತಿ ಹೈಲೈಟ್ ಆಗುತ್ತಿದ್ದಾರೆ. ಕ್ಯಾಪ್ಟನ್​ ಆಗಬೇಕು ಎಂಬ ಆಸೆ ಅವರಿಗೆ ಇದೆ. ಅವರು ಕ್ಯಾಪ್ಟನ್​ ಆಗಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯಿತು. ಆಗ ಅವರು ತಮ್ಮ ಮಾತುಗಾರಿಕೆಯಿಂದ ಕ್ಯಾಪ್ಟೆನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದರು. ಗೌತಮಿ ಜಾದವ್, ಉಗ್ರಂ ಮಂಜು, ಶಿಶಿರ್​ ಮುಂತಾದವರು ಚೈತ್ರಾ ಅವರ ಅರ್ಹತೆಯನ್ನು ಟೀಕಿಸಿದರು.

ಮಾತಿನಲ್ಲಿ ತಾವು ಮುಂದಿದ್ದೇವೆ ಎಂಬುದನ್ನೇ ಮುಖ್ಯವಾಗಿಟ್ಟುಕೊಂಡು ಚೈತ್ರಾ ಕುಂದಾಪುರ ಅವರು ಎಲ್ಲರ ಮೇಲೆ ಹಿಡಿಯ ಸಾಧಿಲು ನೋಡುತ್ತಿದ್ದಾರೆ. ಆದ್ರೆ ಆ ಮಾತೇ ಅವರಿಗೆ ಮುಳುವಾಗುವ ಸಾಧ್ಯತೆ ಕೂಡ ಇದೆ. ಎಲ್ಲ ವಿಷಯದಲ್ಲೂ ಮಾತನಾಡುವ ಅವರಿಂದಾಗಿ ಇನ್ನುಳಿದ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಅದನ್ನು ಅನೇಕರು ನೇರವಾಗಿಯೇ ಹೇಳಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲೂ ಅದು ರಿಪೀಟ್​ ಆಯ್ತು.

ಚೈತ್ರಾ ಕುಂದಾಪುರ ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ ಎಂದು ಶಿಶಿರ್​ ಹೇಳಿದ್ದಾರೆ. ಒಂದು ವೇಳೆ ಚೈತ್ರಾ ಕ್ಯಾಪ್ಟನ್​ ಆದರೆ ಅನಗತ್ಯವಾಗಿ ಮಾತಿನ ಮಳೆ ಸುರಿಸುತ್ತಾರೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ‘ಚೈತ್ರಾಗೆ ತಾಳ್ಮೆ ಕಡಿಮೆ’ ಎಂದು ರಂಜಿತ್​ ಮತ್ತು ಧರ್ಮ ಕೀರ್ತಿರಾಜ್​ ಅವರು ಹೇಳಿದ್ದಾರೆ. ‘ಚೈತ್ರಾ ಕುಂದಾಪುರ ಅವರು ಮಾತನಾಡುವಾಗ ಬೇರೆಯವರ ಧ್ವನಿ ಕೇಳಿಸಲ್ಲ. ಬೇರೆಯವರ ಮಾತನ್ನು ಅವರು ಕೇಳಿಸಿಕೊಳ್ಳಲ್ಲ’ ಎಂದು ಹಂಸಾ ಹೇಳಿದ್ದಾರೆ.

ಇದನ್ನೂ ಓದಿ: ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?

ಕಡೆಗೂ ಹೆಚ್ಚು ಓಟ್​ ಬಂದಿದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್​​ನಲ್ಲಿ ಗೌತಮಿ ಜಾದವ್​, ಶಿಶಿರ್​ ಜೊತೆ ಸ್ಪರ್ಧಿಸುವ ಅವಕಾಶ ಚೈತ್ರಾ ಕುಂದಾಪುರ ಅವರಿಗೆ ಸಿಕ್ಕಿತು. ಆದ್ರೆ ಇದು ಫಿಸಿಕಲ್ ಟಾಸ್ಕ್​ ಆದ್ದರಿಂದ ಚೈತ್ರಾ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರಿಗೆ ಕ್ಯಾಪ್ಟನ್​ ಆಗಲು ಸಾಧ್ಯವಾಗಲಿಲ್ಲ. ಮನೆಯ ಒಳಗೆ ಇರುವ ಹಲವರಿಂದ ಚೈತ್ರಾಗೆ ವಿರೋಧ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಮಾತಿನ ಶೈಲಿ ಬದಲಾಯಿಸಿಕೊಂಡರೆ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.