AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂಪ್ರಮೈಸ್ ಆಗಬೇಕು’; ನಟಿ ಚಂದನಾಗೆ ಹೀಗೆ ನೇರವಾಗಿ ಹೇಳಿದ ನಿರ್ಮಾಪಕ ಯಾರು?

ಚಂದನಾ ಅನಂತಕೃಷ್ಣ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಏಜೆನ್ಸಿ ಅವರಿಗೆ ಕಳುಹಿಸಿದ ಪ್ರಸ್ತಾಪದಲ್ಲಿ ‘3 ತಿಂಗಳು ಶೂಟ್ + ಕಾಂಪ್ರಮೈಸ್’ ಎಂದು ಸ್ಪಷ್ಟವಾಗಿ ಬರೆದಿತ್ತು ಎಂದು ಅವರು ಹೇಳಿದ್ದಾರೆ. ಈ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

‘ಕಾಂಪ್ರಮೈಸ್ ಆಗಬೇಕು’; ನಟಿ ಚಂದನಾಗೆ ಹೀಗೆ ನೇರವಾಗಿ ಹೇಳಿದ ನಿರ್ಮಾಪಕ ಯಾರು?
ಚಂದನಾ
Follow us
ರಾಜೇಶ್ ದುಗ್ಗುಮನೆ
|

Updated on: May 09, 2025 | 2:58 PM

ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಹಾಗೂ ನಟಿ. ಸದ್ಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಂದನಾ ಅವರು ನಟಿಸುತ್ತಿದ್ದಾರೆ. ಈಗ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರಿಗೂ ಕಾಸ್ಟಿಂಗ್ ಕೌಚ್ ರೀತಿಯ ಅನುಭವ ಆಗಿತ್ತು. ಈ ಬಗ್ಗೆ ಚಂದನಾ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದಾರೆ.

‘ವೈ5 ಟಿವಿ ಕನ್ನಡ’ ಯೂಟ್ಯೂಬ್ ಚಾನೆಲ್​ಗೆ ಚಂದನಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಜೀವನದಲ್ಲಾದ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗಂತ ಅವರಿಗೆ ಕರೆ ಮಾಡಿದ ಯಾರೊಬ್ಬರೂ ನಿರ್ಮಾಪಕರಾಗಿರಲಿಲ್ಲ. ಆಫರ್ ಕೊಡೋ ಹೆಸರಲ್ಲಿ ಚಾನ್ಸ್ ಪಡೆದುಕೊಳ್ಳಲು ಬಯಸಿದವರಾಗಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ
Image
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
Image
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
Image
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
Image
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

‘ಒಬ್ಬರು ಕರೆ ಮಾಡಿದ್ದರು. ಮಾಡರ್ನ್​ ಫೋಟೋಶೂಟ್ ಬೇಕು ಎಂದರು. ನಾನು ಅಷ್ಟು ಮಾಡರ್ನ್​ ಫೋಟೋಶೂಟ್ ಮಾಡಿಸಿರಲಿಲ್ಲ. ಇದ್ದಿದ್ದರಲ್ಲೇ ಮಾಡರ್ನ್ ಆಗಿರೋ ಫೋಟೋ ಕಳುಹಿಸಿದೆ. ಆ ಬಳಿಕ ಮೇಕಪ್ ಇಲ್ಲದ ಫೋಟೋ ಕಳುಹಿಸಿ ಎಂದರು. ಅದನ್ನೂ ಕಳುಹಿಸಿದೆ’ ಎಂದು ಮಾತು ಆರಂಭಿಸಿದರು ಚಂದನಾ.

‘ವಿಡಿಯೋ ಕಾಲ್ ಮಾಡಿ ಎಂದು ಕೇಳಿದರು. ನನಗೆ ವಿಚಿತ್ರ ಅನಿಸಿತು. ಯಾರು ವಿಡಿಯೋ ಕಾಲ್ ಅಲಾ ಮಾಡಿ ಅಂತಾರೆ? ಅದಕ್ಕೆ ರಿಪ್ಲೈ ಮಾಡಲಿಲ್ಲ. ಅವರು ಪದೇ ಪದೇ ಕರೆ ಮಾಡುತ್ತಲೇ ಇದ್ದ. ಆಗ ನನ್ನ ಗೆಳೆಯರ ಜೊತೆ ಇದ್ದ. ನನ್ನ ಫ್ರೆಂಡ್ ಒಬ್ಬರು ಮಾತನಾಡಿದರು. ಆ ಬಳಿಕ ಕಾಲ್ ಕಟ್ ಮಾಡಿದೆ. ನಂತರ ಬ್ಲಾಕ್ ಮಾಡಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ

‘ಒಂದು ಏಜೆನ್ಸಿ ಅವರು ಕರೆ ಮಾಡಿದ್ದರು. ವಯಸ್ಸು, ಸಂಭಾವನೆ ಎಲ್ಲವೂ ಬರೆದುಕೊಂಡಿತ್ತು. 3 ತಿಂಗಳು ಶೂಟ್ ಪ್ಲಸ್ ಕಾಂಪ್ರಮೈಸ್ ಅಂತ ಅಲ್ಲಿಯೇ ಬರೆದುಕೊಂಡಿತ್ತು. ಈ ರೀತಿಯ ಏಜೆನ್ಸಿಗಳು ಇರುತ್ತವೆ. ಏಜೆನ್ಸಿಗಳ ಸತ್ಯಾಸತ್ಯಯತೆ ನೋಡಿಕೊಂಡು ನಾವು ನಿರ್ಧರಿಸಬೇಕು’ ಎಂದಿದ್ದಾರೆ ಚಂದನಾ. ನಟನೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಇರುವವರಿಗೆ ಈ ರೀತಿಯವರು ಕರೆ ಮಾಡಿದಾಗ ಆ ಬಗ್ಗೆ ಜ್ಞಾನ ಇರೋದಿಲ್ಲ. ಈಗ ಚಂದನಾ ಹೇಳಿದ ಮಾತಿನಿಂದ ಕೆಲವರಲ್ಲಿ ಜಾಗೃತಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ