AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’: ಹೊಸ ಆಟ ಶುರು ಮಾಡಿದ ಅಶೋಕ; ಭಾಗರ್ವಿಗೆ ನಡುಕ

‘ಸೀತಾ ರಾಮ’ ಧಾರಾವಾಹಿಯಲ್ಲಿ ಸುಬ್ಬಿಯ ಸ್ವಭಾವದಲ್ಲಿನ ಬದಲಾವಣೆಯು ಭಾರ್ಗವಿಯನ್ನು ಆತಂಕಕ್ಕೀಡು ಮಾಡಿದೆ. ಅಶೋಕನ ಕ್ಷಮೆಯಿಂದ ಆತ ಹಾಗೂ ರಾಮ್ ನಡುವಿನ ಗೆಳೆತನಕ್ಕೆ ಧಕ್ಕೆಯಾಗುವುದು ತಪ್ದೆ. ಆದರೆ, ಅಶೋಕನ ಹೊಸ ಯೋಜನೆಯಿಂದ ಭಾರ್ಗವಿಯ ನಿಜವಾದ ಮುಖ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಸೀತಾ ರಾಮ’: ಹೊಸ ಆಟ ಶುರು ಮಾಡಿದ ಅಶೋಕ; ಭಾಗರ್ವಿಗೆ ನಡುಕ
ಸೀತಾ ರಾಮ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 09, 2025 | 7:53 AM

‘ಸೀತಾ ರಾಮ’ (Seetha Rama Serial) ಧಾರಾವಾಹಿಯಲ್ಲಿ ಸುಬ್ಬಿಯು ಸಿಹಿಯಾಗಿ ಬದಲಾದ ಬಳಿಕ ಧಾರಾವಾಹಿಯ ವಿಲನ್ ಭಾರ್ಗವಿಗೆ ನಿದ್ದೆಯೇ ಇಲ್ಲದಂತೆ ಆಗಿದೆ. ಆಕೆ ಸದಾ ಚಿಂತೆಯಲ್ಲಿ ದಿನ ಕಳೆಯುವಂತೆ ಆಗಿದೆ. ಈಗ ಭಾರ್ಗವಿಯು ಮಾಡಿದ ಒಂದು ಕುತಂತ್ರದಿಂದ ಅಶೋಕ್ ಹಾಗೂ ಕಥಾ ನಾಯಕ ರಾಮ್ ಗೆಳೆತನವು ಬೇರೆ ಆಗುವುದರಲ್ಲಿ ಇತ್ತು. ಆದರೆ, ಈಗ ಇದು ಸರಿ ಆಗಿದೆ. ಈ ಮಧ್ಯೆ ಭಾರ್ಗವಿಗೆ ನಡುಕ ಹುಟ್ಟುವಂತೆ ಮಾಡಿದ್ದಾನೆ ಅಶೋಕ. ಇದನ್ನು ಕೇಳಿ ಆಕೆಗೆ ಚಿಂತೆ ಶುರುವಾಗಿದೆ.

ಅಶೋಕನು ಮಕ್ಕಳ ಬಳಿ ನಾಟಕ ಮಾಡಿಸಿದ್ದ. ಸುಬ್ಬಿಯನ್ನು ಮುಂದಿಟ್ಟುಕೊಂಡು ಸಿಹಿ ಸತ್ತ ದಿನ ಏನಾಯಿತು ಎಂಬುದನ್ನು ವಿವರಿಸುವ ರೀತಿಯಲ್ಲಿ ನಾಟಕ ಮಾಡಿದ್ದನು. ಇದರಲ್ಲಿ ಭಾರ್ಗವಿ ವಿಲನ್ ಎನ್ನುವ ರೀತಿ ತೋರಿಸುವ ಪ್ರಯತ್ನ ನಡೆಯಿತು. ಈ ನಾಟಕವು ರಾಮನಿಗೆ ಕೊಂಚವೂ ಇಷ್ಟ ಆಗಲೇ ಇಲ್ಲ. ಆತನು ರಾಮನ ಮೇಲೆ ಸಿಟ್ಟಾದನು ಮತ್ತು ಚಿಕ್ಕಿಯ (ಭಾರ್ಗವಿ) ಮೇಲೆ ಅಪರಾಧ ಹೊರಿಸಿದ್ದನ್ನು ಸಹಿಸಿಕೊಳ್ಳಲು ರೆಡಿ ಇರಲಿಲ್ಲ. ಇದರಿಂದ ಅಶೋಕ್ ಹಾಗೂ ರಾಮನ ಗೆಳೆತನ ಮುರಿದು ಬೀಳುವುದರಲ್ಲಿ ಇತ್ತು.

ಇದನ್ನೂ ಓದಿ
Image
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
Image
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
Image
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
Image
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ: ಅಶೋಕ್​ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ; ಮುಂದೇನು?

ಆದರೆ, ಅಶೋಕ ಈಗ ಕ್ಷಮೆ ಕೇಳಿದ್ದಾನೆ. ಈ ಬೆನ್ನಲ್ಲೇ ಭಾರ್ಗವಿ ಖುಷಿ ಆಗಿದ್ದಾಳೆ. ‘ಆತ್ಮ ಗೌರವ ಬಿಟ್ಟು ಬಂದು ಕ್ಷಮೆ ಕೇಳಿದ್ಯಲ್ಲೋ ಅಶೋಕ’ ಎಂದಳು ಭಾರ್ಗವಿ. ಆದರೆ, ಇದಕ್ಕೆ ಅಶೋಕ ಕೊಟ್ಟ ಉತ್ತರವು ಆಕೆಯನ್ನು ಹೆಚ್ಚು ಕಂಗಾಲು ಮಾಡಿದೆ. ‘ನನ್ನ ಗೆಳೆಯನಿಗೋಸ್ಕರ ಕತ್ತೆ ಕಾಲು ಹಿಡಿಯೋಕು ರೆಡಿ. ಅಶೋಕನ ಹೊಸ ಆಟ ಶುರು.  ಭಾರ್ಗವಿಯಲ್ಲಿ ಚಿಕ್ಕಿ’ ಎಂದು ಹೇಳಿದ್ದಾನೆ ಅಶೋಕ್.

View this post on Instagram

A post shared by Zee Kannada (@zeekannada)

ಅಶೋಕನಿಗೆ ಭಾರ್ಗವಿಯ ನಿಜವಾದ ಮುಖ ತಿಳಿದು ಹೋಗಿದೆ. ಇದನ್ನು ರಾಮನಿಗೆ ಹೇಳುವ ಪ್ರಯತ್ನವನ್ನೂ ಆತ ಮಾಡಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಅವನಿಗೆ ಬೇಸರ ಇದೆ. ಈಗ ಆತನು ಯಾವ ರೀತಿಯ ಆಟ ಆಡುತ್ತಾನೆ ಮತ್ತು ಭಾರ್ಗವಿಯ ನಿಜವಾದ ಮುಖವನ್ನು ಹೇಗೆ ಬಯಲು ಮಾಡುತ್ತಾನೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್