AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಆ.9ರಿಂದ ಕಲರ್ಸ್​ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಹಾಗೂ 10 ಗಂಟೆಗೆ ‘ಕನ್ಯಾಕುಮಾರಿ’ ಪ್ರಸಾರ ಆಗಲಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?
ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?
TV9 Web
| Edited By: |

Updated on: Aug 07, 2021 | 11:51 AM

Share

ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ‘ಬಿಗ್ ಬಾಸ್​ ಕನ್ನಡ ಸೀಸನ್​ 8’​ ಮೋಡಿ ಮಾಡಿದೆ. ಇಷ್ಟು ದಿನ ಪ್ರತಿ ರಾತ್ರಿ 9.30 ಆದ ತಕ್ಷಣ ವೀಕ್ಷಕರನ್ನು ಈ ಕಾರ್ಯಕ್ರಮ ಸೆಳೆದುಕೊಳ್ಳುತ್ತಿತ್ತು. 115ಕ್ಕೂ ಹೆಚ್ಚು ದಿನಗಳ ಕಾಲ ಎಲ್ಲರನ್ನೂ ರಂಜಿಸಿದ ಈ ಶೋ ಆ.8ರಂದು ಮುಕ್ತಾಯ ಆಗುತ್ತಿದೆ. ಇದೇ ಭಾನುವಾರ ಬಿಗ್​ ಬಾಸ್​ ಫಿನಾಲೆ ನಡೆಯಲಿದೆ. ಮಂಜು ಪಾವಗಡ, ವೈಷ್ಣವಿ ಗೌಡ, ಅರವಿಂದ್​ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ನಡುವೆ ಫಿನಾಲೆಯಲ್ಲಿ ಹಣಾಹಣಿ ನಡೆಯುತ್ತಿದೆ. ಯಾರು ವಿನ್ನರ್​ ಎಂಬುದು ಆ.8ರ ರಾತ್ರಿ ಗೊತ್ತಾಗುತ್ತದೆ. ಅಲ್ಲಿಗೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಜರ್ನಿ ಅಂತ್ಯವಾಗುತ್ತದೆ. ಹಾಗಾದರೆ, ಇನ್ಮುಂದೆ ರಾತ್ರಿ 9.30ಕ್ಕೆ ವೀಕ್ಷಕರಿಗೆ ಮನರಂಜನೆ ಕೊಡೋರು ಯಾರು? ಅದಕ್ಕೀಗ ಉತ್ತರ ಸಿಕ್ಕಿದೆ. ‘ಲಕ್ಷಣ’ ಮತ್ತು ‘ಕನ್ಯಾಕುಮಾರಿ’ ಎಂಬ ಎರಡು ಹೊಸ ಸೀರಿಯಲ್​ಗಳು ಪ್ರಸಾರ ಆರಂಭಿಸಲು ಸಜ್ಜಾಗಿವೆ.

ಬಿಗ್​ ಬಾಸ್​ ಮುಗಿದ ಬಳಿಕ ಕಲರ್ಸ್​ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಪ್ರಸಾರ ಆಗಲಿದೆ. ಕಪ್ಪು ಮೈಬಣ್ಣವನ್ನು ಬಹುತೇಕರು ಜರಿಯುತ್ತಾರೆ. ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ. ಅಂಥ ಕಾನ್ಸೆಪ್ಟ್​​ಗೆ ಸವಾಲೊಡ್ಡುವಂತಹ ಕಥೆಯನ್ನು ‘ಲಕ್ಷಣ’ ಧಾರಾವಾಹಿ ಹೊಂದಿದೆ. ಈ ಸೀರಿಯಲ್​ನ ಪ್ರೋಮೋಗಳು ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿವೆ. ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್​ ಕೂಡ ಈ ಧಾರಾವಾಹಿಯ ಬಗ್ಗೆ ಪ್ರಚಾರ ಮಾಡಿದ್ದಾರೆ. ಹಾಗಾಗಿ ಹೈಪ್​ ಸೃಷ್ಟಿ ಆಗಿದೆ.

ಇನ್ನು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10 ಗಂಟೆಗೆ ‘ಕನ್ಯಾಕುಮಾರಿ’ ಎಂಬ ಹೊಸ ಸೀರಿಯಲ್​ ಪ್ರಸಾರಕ್ಕೆ ಅಣಿಯಾಗಿದೆ. ಈ ಧಾರಾವಾಹಿಯ ಕಥೆ ಏನು ಎಂಬುದನ್ನು ತಿಳಿಸುವಂತಹ ಪ್ರೋಮೋಗಳನ್ನು ಈಗಾಗಲೇ ಕಲರ್ಸ್​ ಕಂಡ ವಾಹಿನಿ ಹಂಚಿಕೊಂಡಿದೆ. ಬಡತನದ ಕುಟುಂಬದಲ್ಲಿರುವ ಕಥಾನಾಯಕ ಚರಣ್​ ಒಬ್ಬ ಕ್ಯಾಬ್​ ಚಾಲಕ. ಮನೆ ಚಿಕ್ಕದಾದರೂ ಮನೆಯವರ ಪ್ರೀತಿಗೆ ಕೊರತೆ ಇಲ್ಲ. ಕೆಲಸವನ್ನೇ ದೇವರು ಎಂದು ಆತ ನಂಬಿದ್ದಾನೆ. ಅದೇ ರೀತಿ, ದೇವರಿಗಾಗಿ ಯಾವ ಕೆಲಸ ಬೇಕಾದರೂ ಮಾಡ್ತೀನಿ ಎನ್ನುವ ಹುಡುಗಿ ಕನ್ನಿಕಾ. ಒಂದಿನ ಕಥಾನಾಯಕ ಚರಣ್​ ಕ್ಯಾಬ್​ನಲ್ಲಿ ಕನ್ನಿಕಾ ಕುಳಿತುಕೊಂಡ ಬಳಿಕ ಎಲ್ಲವೂ ಬದಲಾಗಿ ಬಿಡುತ್ತದೆ. ಮುಂದೇನು ಎಂಬುದು ‘ಕನ್ಯಾಕುಮಾರಿ’ ಸೀರಿಯಲ್​ನ ಕಥಾಕೌತುಕ.

ದಿನದಿಂದ ದಿನಕ್ಕೆ ಕಿರುತೆರೆ ಲೋಕ ದೊಡ್ಡದಾಗುತ್ತಿದೆ. ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಧಾರಾವಾಹಿಗಳ ತಾಂತ್ರಿಕ ಗುಣಮಟ್ಟ ಹೆಚ್ಚುತ್ತಿದೆ. ಆ ಕಾರಣ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಕೂಡ ಇದೆ. ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ಇತರೆ ಧಾರಾವಾಹಿಗಳಿಗೆ ‘ಲಕ್ಷಣ’ ಮತ್ತು ‘ಕನ್ಯಾಕುಮಾರಿ’ ಹೇಗೆ ಸ್ಪರ್ಧೆ ನೀಡುತ್ತವೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ:

‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ

ಸಾಮಾಜಿಕ ಸಂದೇಶ ಹೊತ್ತು ಬರುತ್ತಿದ್ದಾರೆ ತನ್ವಿ ರಾವ್; ರಾಧೆ ಶ್ಯಾಮ ಧಾರಾವಾಹಿಯಲ್ಲಿ ಭಿನ್ನ ಪ್ರಯತ್ನ

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ