AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಸ್ಯಹಾರಿ ಚೈತ್ರಾ ಕುಂದಾಪುರಗೆ ಮೋಸದಿಂದ ಮಾಂಸಾಹಾರ ತಿನ್ನಿಸಿದರೆ ಸಹ ಸ್ಪರ್ಧಿಗಳು?

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ, ಧನರಾಜ್ ಇನ್ನೂ ಕೆಲವು ಸಸ್ಯಹಾರಿಗಳು ಇದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಮಾತನಾಡಿದ ಸುದೀಪ್, ಚೈತ್ರಾ ಅವರನ್ನು ಉದ್ದೇಶಿಸಿ, ನಿಮ್ಮ ಸಹಸ್ಪರ್ಧಿಗಳು ನಿಮಗೆ ನಾನ್ ವೆಜ್ ತಿನ್ನಿಸಿದ್ದಾರೆ ಎಂದಿದ್ದಾರೆ. ಸುದೀಪ್ ಮಾತು ಕೇಳಿ ಚೈತ್ರಾ ಶಾಕ್ ಆಗಿದ್ದಾರೆ. ಅಂದಹಾಗೆ ನಿಜಕ್ಕೂ ಚೈತ್ರಾಗೆ ಮಾಂಸಾಹಾರ ತಿನ್ನಿಸಲಾಗಿದೆಯೇ? ನಡೆದಿದ್ದೇನು?

ಸಸ್ಯಹಾರಿ ಚೈತ್ರಾ ಕುಂದಾಪುರಗೆ ಮೋಸದಿಂದ ಮಾಂಸಾಹಾರ ತಿನ್ನಿಸಿದರೆ ಸಹ ಸ್ಪರ್ಧಿಗಳು?
Chaithra Kundapura
ಮಂಜುನಾಥ ಸಿ.
|

Updated on: Dec 29, 2024 | 9:10 AM

Share

ಬಿಗ್​ಬಾಸ್ ಮನೆಯಲ್ಲಿ ಊಟದ ಸಮಸ್ಯೆ ಇದ್ದಿದ್ದೆ. ಬಿಗ್​ಬಾಸ್ ಸ್ಪರ್ಧಿಗಳು ಅವರೇ ಅಡುಗೆ ಮಾಡಿಕೊಂಡು ತಿನ್ನಬೇಕಿರುತ್ತದೆ. ಕೆಲವರಿಗೆ ಅಡುಗೆ ಮಾಡಲು ಬರುತ್ತದೆ, ಕೆಲವರಿಗೆ ಬರುವುದಿಲ್ಲ ಹಾಗಾಗಿ ಸ್ಪರ್ಧಿಗಳಿಗೆ ಯಾವಾಗಲೂ ಒಳ್ಳೆಯ ಊಟ ಸಿಗುತ್ತದೆ ಎಂಬುದು ಗ್ಯಾರೆಂಟಿ ಇಲ್ಲ. ಅದರಲ್ಲಿ ಸಸ್ಯಹಾರಿಗಳಿಗಂತೂ ಬಹಳ ಸಮಸ್ಯೆ. ಲಕ್ಷುರಿ ಬಜೆಟ್​ನಲ್ಲಿ ಸ್ಪರ್ಧಿಗಳು ಮೊದಲು ನಾನ್​ವೆಜ್ ಆರ್ಡರ್ ಮಾಡಿಬಿಡುತ್ತಾರೆ, ಪನ್ನೀರು ಕೊನೆಯ ಆಯ್ಕೆ ಆಗಿರುತ್ತದೆ. ಮಾಂಸಹಾರಿಗಳು, ಸಸ್ಯಹಾರಿಗಳು ಇಬ್ಬರೂ ಇದ್ದು, ಒಂದೇ ಒಲೆಯಲ್ಲಿ ಎರಡೂ ಅಡುಗೆ ಆಗುತ್ತಿರುವಾಗ ಮಿಕ್ಸ್ ಆಗಿಬಿಡುತ್ತದೆಯೇ ಎಂಬ ಭಯ ಸಹಜವಾಗಿಯೇ ಸಸ್ಯಹಾರಿಗಳಿಗೆ ಇದ್ದೇ ಇರುತ್ತದೆ.

ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಲಾಗಿದೆ. ಮನೆಯ ಸ್ಪರ್ಧಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಅತಿಥಿಗಳಾಗಿ ಮತ್ತು ಸಿಬ್ಬಂದಿಗಳಾಗಿ ಮಾಡಲಾಗಿತ್ತು. ಸಿಬ್ಬಂದಿ ಆಗಿದ್ದವರು ಅತಿಥಿಗಳಿಗೆ ಕೇಳಿದ ಅಡುಗೆ ಮಾಡಿ ಕೊಡಬೇಕಿತ್ತು. ಶನಿವಾರ ಎಪಿಸೋಡ್​ಗೆ ಬಂದಿದ್ದ ಸುದೀಪ್, ಭವ್ಯಾ ತಂಡದವರು ಸಿಬ್ಬಂದಿ ಆಗಿದ್ದಾಗ ಅತಿಥಿಗಳಿಗೆ ಮಾಡಿಕೊಟ್ಟ ಊಟವನ್ನು ಮೊದಲು ಅವರು ತಿಂದು ಆ ನಂತರವೇ ಅತಿಥಿಗಳಿಗೆ ಕೊಟ್ಟರು, ಭಾರಿ ಆತುರದಲ್ಲಿ ತಿಂಡಿಗಳನ್ನು ತಿಂದರು, ಆ ವೇಳೆ ಧನರಾಜ್, ಮಿಸ್ ಆಗಿ ಮಾಂಸಾಹಾರ ತಿಂದು ಬಿಟ್ಟರು ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಈ ಬಾರಿ ಯಾರಿಗೆ ಸಿಕ್ತು ಕಿಚ್ಚನ ಚಪ್ಪಾಳೆ?

ಅದನ್ನು ಧನರಾಜ್ ಸಹ ಒಪ್ಪಿಕೊಂಡರು. ಚಿಕನ್ ಪಾಪ್​ಕಾರ್ನ್​ ಅನ್ನು ತಪ್ಪಿ ಬಾಯಿಗೆ ಹಾಕಿಕೊಂಡೆ ನಂತರ ಹಾಗೆಯೇ ಅದನ್ನು ಉಗಿದು ಬಿಟ್ಟೆ ಎಂದರು. ಆಗ ಚೈತ್ರಾ, ಪರವಾಗಿಲ್ಲ ಸರ್, ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇರುತ್ತದೆ ಎಂದರು. ಆಗ ಸುದೀಪ್ ಹಾಗಿದ್ದರೆ ನಿಮಗೂ ಕ್ಷಮೆ ಇರುತ್ತದೆ ಬಿಡಿ ಎಂದರು. ಚೈತ್ರಾ ಶಾಕ್ ಆದರು. ಇಲ್ಲ ಸಾರ್ ನಾನು ನಾನ್​ವೆಜ್ ತಿಂದಿಲ್ಲ, ಕ್ಯಾಪ್ಸಿಕಮ್ ಮೋಮೋಸ್ ತಿಂದೆ ಅಷ್ಟೆ ಎಂದರು. ನಿಮ್ಮ ಗೆಳೆಯರು ನಿಮಗೆ ನಾನ್​ ವೆಜ್ ತಿನ್ನಿಸಿಲ್ಲ ಎಂಬ ಭರವಸೆ ನಿಮಗೆ ಇದೆಯೇ? ಎಂದು ಸುದೀಪ್ ಕೇಳಿದರು. ಸುದೀಪ್​ರ ಪ್ರಶ್ನೆಗೆ ಆಘಾತಕ್ಕೆ ಒಳಗಾದರು ಚೈತ್ರಾ.

‘ನನಗೆ ನಾನ್​ ವೆಜ್ ತಿನ್ನಿಸಿದ್ದೀರಾ? ನಿಮಗೆ ಒಳ್ಳೆಯದಾಗುತ್ತಾ?’ ಎಂದು ಭವ್ಯಾ ತಂಡದ ವಿರುದ್ಧ ಚೈತ್ರಾ ಗುಡುಗಿದರು. ಆದರೂ ಸುದೀಪ್ ಬಳಿ ಇಲ್ಲ ಸಾರ್ ನಾನು ನಾನ್​ ವೆಜ್ ತಿಂದಿಲ್ಲ ಎಂದೇ ವಾದಿಸಿದರು. ಆಗ ಸುದೀಪ್ ನಗುತ್ತಾ, ದೋಸೆ ತಿಂದಿರಿ, ಅದರ ಜೊತೆ ಏನು ತಿಂದಿರಿ ಎಂದರು. ಆಗ ಚೈತ್ರಾ ದೋಸೆ ಜೊತೆ ಪಲ್ಯ ತಿಂದೆ ಎಂದರು. ಅದು ಆಲೂಗಡ್ಡೆ ಪಲ್ಯೆ ಅದರಲ್ಲಿ ಏನೂ ಬೆರೆತಿರಲಿಲ್ಲ ಎಂದರು. ಆಗ ಸುದೀಪ್, ಆಲೂಗಡ್ಡೆ ಪಲ್ಯೆ ಮಾಡಲು ಆಲೂಗಡ್ಡೆಯನ್ನು ಬೇಯಿಸಿದರಲ್ಲ, ಆಲೂಗಡ್ಡೆ ಬೇಯಿಸಲು ಬಳಸಿದ್ದು, ಚಿಕನ್ ಬೇಯಿಸಿದ ನೀರನ್ನು ಎಂದರು. ಅದೇ ಕಾರಣಕ್ಕೆ ನಿಮಗೆ ಆಲೂಗಡ್ಡೆ ಪಲ್ಯೆ ಉಪ್ಪು ಹೆಚ್ಚಾಗಿದೆ ಅನಿಸಿದ್ದು’ ಎಂದರು ಸುದೀಪ್. ಆದರೆ ಈ ವಿಷಯವನ್ನು ಸುದೀಪ್ ತಮಾಷೆಯಾಗಿ ಹೇಳಿದರು. ನಿಜವಾಗಿಯೂ ಚಿಕನ್ ಬೇಯಿಸಿದ ನೀರಲ್ಲೇ ಆಲೂಗಡ್ಡೆ ಬೇಯಿಸಿದರಾ ಎಂಬುದರ ಬಗ್ಗೆ ಸ್ಪಷ್ಟನೆ ಸಿಗಲಿಲ್ಲ. ಎಲ್ಲರೂ ನಕ್ಕು ಆ ವಿಷಯವನ್ನು ಅಲ್ಲಿಗೆ ಕೈಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ