AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಡದ ಕ್ಯಾಪ್ಟನ್ ಆದ ಡ್ರೋನ್​ ಪ್ರತಾಪ್​ಗೆ ಸತತ ಗೆಲುವು, ಆದರೆ ಸಂಕಷ್ಟ ಬೆಟ್ಟದಷ್ಟು

ಡ್ರೋನ್ ಪ್ರತಾಪ್ ಈಗ ಬಿಗ್​ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿದ್ದಾರೆ. ಆರಂಭದ ಕೆಲವು ವಾರ ಮನೆಯ ನಿರ್ಲಕ್ಷಿತ ಸದಸ್ಯನಾಗಿದ್ದ ಪ್ರತಾಪ್ ಈಗ ಮನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವುದು ಮಾತ್ರವೇ ಅಲ್ಲದೆ, ಈಗ ತಂಡದ ಕ್ಯಾಪ್ಟನ್ ಸಹ ಆಗಿದ್ದಾರೆ. ಕ್ಯಾಪ್ಟನ್ ಆದ ಕೂಡಲೇ ಒಂದರ ಹಿಂದೊಂದು ಟಾಸ್ಕ್​ಗಳನ್ನು ಸಹ ಗೆದ್ದಿದ್ದಾರೆ. ಆದರೆ ಪ್ರತಾಪ್​ಗೆ ಕಷ್ಟಗಳು ಸಹ ಸಾಕಷ್ಟಿವೆ.

ತಂಡದ ಕ್ಯಾಪ್ಟನ್ ಆದ ಡ್ರೋನ್​ ಪ್ರತಾಪ್​ಗೆ ಸತತ ಗೆಲುವು, ಆದರೆ ಸಂಕಷ್ಟ ಬೆಟ್ಟದಷ್ಟು
Follow us
ಮಂಜುನಾಥ ಸಿ.
|

Updated on:Nov 08, 2023 | 12:02 AM

ಡ್ರೋನ್ ಪ್ರತಾಪ್ (Drone Prathap) ಈಗ ಬಿಗ್​ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿದ್ದಾರೆ. ಆರಂಭದ ಕೆಲವು ವಾರ ಮನೆಯ ನಿರ್ಲಕ್ಷಿತ ಸದಸ್ಯನಾಗಿದ್ದ ಪ್ರತಾಪ್ ಈಗ ಮನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವುದು ಮಾತ್ರವೇ ಅಲ್ಲದೆ, ಈಗ ತಂಡದ ಕ್ಯಾಪ್ಟನ್ ಸಹ ಆಗಿದ್ದಾರೆ. ಕ್ಯಾಪ್ಟನ್ ಆದ ಕೂಡಲೇ ಒಂದರ ಹಿಂದೊಂದು ಟಾಸ್ಕ್​ಗಳನ್ನು ಸಹ ಗೆದ್ದಿದ್ದಾರೆ. ಆದರೆ ಪ್ರತಾಪ್​ಗೆ ಕಷ್ಟಗಳು ಸಹ ಸಾಕಷ್ಟಿವೆ.

ಕಳೆದ ವಾರ ಮಾಡಿದ್ದ ತಂಡಗಳನ್ನೇ ಈ ವಾರವೂ ಮುಂದುವರೆಸುವಂತೆ ಬಿಗ್​ಬಾಸ್ ಅನುಮತಿ ನೀಡಿದರು. ಆದರೆ ತಂಡದ ಕ್ಯಾಪ್ಟನ್​ಗಳನ್ನು ಬದಲು ಮಾಡಬೇಕು ಹಾಗೂ ಬೇರೆ ತಂಡಗಳಿಗೆ ಹೋಗಲು ಇಚ್ಛೆಯಿದ್ದ ಸದಸ್ಯರಿಗೆ ಅವಕಾಶ ನೀಡಬೇಕು ಎಂಬ ಷರತ್ತು ಇಟ್ಟರು. ಸಂಗೀತಾರ ತಂಡದಲ್ಲಿ ಮೈಖಲ್, ಕಾರ್ತಿಕ್ ತಾವು ಕ್ಯಾಪ್ಟನ್ ಆಗುವ ಇಚ್ಛೆ ವ್ಯಕ್ತಪಡಿಸಿದರು. ಡ್ರೋನ್ ಪ್ರತಾಪ್ ಸಹ ಕ್ಯಾಪ್ಟನ್ ಆಗುವೆ ಎಂದರು. ಕೊನೆಗೆ ಎಲ್ಲರೂ ಸೇರಿ ಪ್ರತಾಪ್ ಅನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದರು. ಎದುರಾಳಿ ತಂಡದವರು ಸಿರಿ ಅವರನ್ನು ಆಯ್ಕೆ ಮಾಡಿದರು.

ಆದರೆ ಆ ನಂತರ ಪ್ರತಾಪ್​ಗೆ ಸವಾಲು ಎದುರಾಯ್ತು, ಸಂಗೀತಾ ಹಾಗೂ ಕಾರ್ತಿಕ್ ನಡುವೆ ಜಗಳ ಶುರುವಾಯ್ತು. ಸಂಗೀತಾ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ಇವರಿಬ್ಬರ ಜಗಳ ಪ್ರತಾಪ್​ರ ತಂಡದ ಈಕ್ವೇಷನ್ ಕೆಡಿಸಿತು. ಆ ಬಳಿಕ ಮೈಖಲ್ ಸಹ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ಎದುರಾಳಿ ತಂಡದವರು ಸಹ ಮೈಖಲ್​ಗೆ ಕಿವಿ ಊದಿದರು. ಆದರೆ ಎಲ್ಲರನ್ನೂ ಸಂಭಾಳಿಸಿ ಸಂಗೀತಾ ಹಾಗೂ ಮೈಖಲ್ ಇಬ್ಬರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಪ್ರತಾಪ್ ಸಫಲರಾದರು. ಈ ಸಂದರ್ಭದಲ್ಲಿ ಹಳ್ಳಿಕಾರ್​ ಸಂತೋಷ್​ ಜೊತೆ ಮಾತನಾಡುತ್ತಾ, ”ಒಂದೇ ಒಂದು ಗೆಲುವು ಇಡೀ ತಂಡದಲ್ಲಿರುವ ಅಸಮಾಧಾನವನ್ನು ತೊಳೆದು ಹಾಕುತ್ತದೆ, ಆ ಒಂದು ಗೆಲುವು ನಮಗೆ ಈಗಲೇ ಬೇಕು” ಎಂದರು.

ಅದಾದ ಬಳಿಕ ಎರಡೂ ತಂಡಗಳ ನಡುವೆ ಮೊದಲ ಟಾಸ್ಕ್​ ನಡೆದು ಆ ಟಾಸ್ಕ್​ನಲ್ಲಿ ಪ್ರತಾಪ್ ತಂಡ ಉತ್ತಮವಾಗಿ ಆಡಿತು. ಗೆಲುವಿನ ಖುಷಿಯಲ್ಲಿ ತಂಡದ ಸದಸ್ಯರು ಮನಸ್ಥಾಪಗಳನ್ನು ಮರೆತು ಬಿಟ್ಟರು. ಆದರೆ ಅದಾದ ಬಳಿಕ ನಾಮಿನೇಷನ್ ಮಾಡಲು ನೀಡಿದ ಕಾರಣವನ್ನು ಗೆಸ್ ಮಾಡುವ ಆಟ ಶುರುವಾಯ್ತು. ನಾಮಿನೇಟ್ ಮಾಡಲು ನೀಡಿದ ಕಾರಣವನ್ನು ಯಾರು ಹೇಳಿರಬಹುದು ಎಂದು ಗೆಸ್ ಮಾಡಿ ಅವರ ಮುಖಕ್ಕೆ ಫೋಮ್ ಅನ್ನು ಬಳಿಯಬೇಕಿತ್ತು. ಆ ಟಾಸ್ಕ್​ನಲ್ಲಿ ಸಹ ಪ್ರತಾಪ್ ತಂಡ ಗೆದ್ದಿತಾದರೂ ಆ ಟಾಸ್ಕ್​ ಬಳಿಕ ಮನೆಯ ವಾತಾವರಣ ಮತ್ತೆ ಕೆಟ್ಟಿತು. ವಿಶೇಷವಾಗಿ, ಪ್ರತಾಪ್, ತನಿಷಾರನ್ನು ನಾಮಿನೇಟ್ ಮಾಡಿರುವ ವಿಷಯ ತನಿಷಾಗೆ ಗೊತ್ತಾಗಿ, ಪ್ರತಾಪ್ ಮೇಲೆ ತನಿಷಾ ರಾಂಗ್ ಆಗಿದ್ದಾರೆ. ಈಗ ತಂಡ ಮತ್ತೆ ಒಡೆದಿದೆ. ಮತ್ತೆ ತಂಡವನ್ನು ಹೇಗೆ ಪ್ರತಾಪ್ ಒಂದು ಗೂಡಿಸುತ್ತಾರೆ ಎಂಬುದು ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 pm, Tue, 7 November 23

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ