AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿ ಪವರ್; ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ

Halli Power New Episode Update: ಹಳ್ಳಿ ಪವರ್ ರಿಯಾಲಿಟಿ ಶೋದ ಎರಡನೇ ದಿನದ ಎಪಿಸೋಡ್‌ನಲ್ಲಿ, ಸ್ಪರ್ಧಿಗಳು ಹಾಲು ಕರೆಯುವ ಕಠಿಣ ಸವಾಲನ್ನು ಎದುರಿಸಿದರು. ಸ್ಥಳೀಯರಿಂದ ತರಬೇತಿ ಪಡೆದ ನಂತರ, ಸ್ಪರ್ಧಿಗಳು 20 ನಿಮಿಷಗಳಲ್ಲಿ ಹಾಲು ಕರೆಯುವಲ್ಲಿ ಸ್ಪರ್ಧಿಸಿದರು. ಗೆದ್ದವರಿಗೆ ಬಹುಮಾನ, ಸೋತವರಿಗೆ ಸಗಣಿ ನೀರಿನ ಸ್ನಾನದ ಶಿಕ್ಷೆ.

ಹಳ್ಳಿ ಪವರ್; ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ
ಹಳ್ಳಿ ಪವರ್
ರಾಜೇಶ್ ದುಗ್ಗುಮನೆ
|

Updated on:Sep 03, 2025 | 9:55 AM

Share

ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ‘ಹಳ್ಳಿ ಪವರ್​’ನ (Halli Power) ಎರಡನೇ ದಿನದ ಎಪಿಸೋಡ್ ಗಮನ ಸೆಳೆದಿದೆ. ಹಳ್ಳಿ ಸೇರಿದ ಪ್ಯಾಟೆ ಮಂದಿಗೆ ಭರ್ಜರಿ ಟಾಸ್ಕ್ ನೀಡಲಾಗಿದೆ. ಅದುವೇ ಹಾಲು ಕರೆಯೋ ಟಾಸ್ಕ್. ಹಳ್ಳಿಗಳಲ್ಲಿ ಎಮ್ಮೆ ಸಾಕುತ್ತಾರೆ. ದಿನ ನಿತ್ಯದ ಬಳಕೆಗೆ, ಮಾರಾಟಕ್ಕೆ ಹಾಲನ್ನು ಕರೆಯಲಾಗುತ್ತದೆ. ಇದರ ಬಗ್ಗೆ ಜ್ಞಾನವೇ ಇಲ್ಲದ ಪ್ಯಾಟೆ ಮಂದಿಗೆ ಈ ರೀತಿಯ ಟಾಸ್ಕ್ ಕೊಟ್ಟರೆ ಹೇಗೆ? ಅಂತಹ ಟಾಸ್ಕ್​ನ ಎದುರಿಸಿರೋ ಪ್ಯಾಟೆ ಮಂದಿ ಸುಸ್ತಾಗಿದ್ದಾರೆ. ಗೆದ್ದವರಿಗೆ ಸಿಹಿ ಹಾಗೂ ಸೋತವರಿಗೆ ಶಿಕ್ಷೆ ಸಿಕ್ಕಿದೆ.

12 ಸ್ಪರ್ಧಿಗಳನ್ನು ಕರೆದು ಬೆಳಿಗ್ಗೆಯೇ ಟಾಸ್ಕ್ ಬಗ್ಗೆ ಹೇಳಲಾಯಿತು. ಅಲ್ಲದೆ, ಸ್ಥಳೀಯರ ಮನೆಗೆ ತೆರಳಿ ಹಾಲು ಕರೆಯೋದರ ತರಬೇತಿ ಪಡೆಯಬೇಕಿತ್ತು. ಈ ಪ್ರ್ಯಾಕ್ಟಿಸ್​​ನ ಪ್ಯಾಟೆ ಹುಡುಗಿಯರು ಮಾಡಿಕೊಂಡರು. ನಂತರ ರಾತ್ರಿ ನಿಜವಾದ ಟಾಸ್ಕ್​ ಶುರುವಾಯಿತು. ಈ ವೇಳೆ ಅನೇಕರು ನಡುಗಿ ಹೋದರೆ, ಇನ್ನೂ ಕೆಲವರು ಯಶಸ್ಸು ಕಂಡರು.

ಇದನ್ನೂ ಓದಿ
Image
‘ಕಿತ್ತೋಗಿರೋ ನನ್ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’; ಸುದೀಪ್ ಕಿವಿಮಾತು
Image
ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷಕ್ಕೆ ಹರಾಜಾಯ್ತು ‘ಒಜಿ’ ಚಿತ್ರದ ಟಿಕೆಟ್
Image
ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ಡಗಾರ್ ಪದ ಬಳಕೆ
Image
ನಿಮ್ಮ ಲೈಫ್ ನಿಧಾನ ಎನಿಸುತ್ತಿದೆಯೇ? ಸುದೀಪ್ ಹೇಳಿದ ಈ ಜೀವನ ಪಾಠ ಕೇಳಿ

12 ಎಮ್ಮೆಗಳನ್ನು ಇಡಲಾಗಿತ್ತು. 20 ನಿಮಿಷ ಸಮಯಾವಕಾಶ ಕೂಡ ನೀಡಲಾಯಿತು. ಈ ವೇಳೆ ಎಲ್ಲರೂ ತಮ್ಮ ಕೈಲಾದಷ್ಟು ಹಾಲು ಕರೆದರು. ಕೆಲವರ ಬಳಿ ಒಂದು ಹನಿ ಕೂಡ ಹಾಲು ಕರೆಯೋಕೆ ಸಾಧ್ಯ ಆಗಲೇ ಇಲ್ಲ. 12 ಮಂದಿಗಳಲ್ಲಿ ಈಗಾಗಲೇ ಇಬ್ಬರಂತೆ ಒಂದು ತಂಡ ಮಾಡಲಾಗಿದೆ. ಹೀಗಾಗಿ, ತಂಡವಾಗಿ ಪರಿಗಣಿಸಿ ಯಾರು ಗೆದ್ದರು ಎಂಬುದನ್ನು ಘೋಷಣೆ ಮಾಡಲಾಯಿತು.

ಹಳ್ಳಿ ಪವರ್ ಪ್ರೋಮೋ

ಕಾವ್ಯಾ ಹಾಗೂ ಗಗನ 135 ಎಂಎಲ್, ಲಲಿತಾ ಹಾಗೂ ಸೋನಿಯಾ 70 ಎಂಎಲ್, ರಶ್ಮಿ ಹಾಗೂ ಟೆಲಿನ್ 55 ಎಂಎಲ್​, ತೇಜಸ್ವಿನಿ ಹಾಗೂ ಆಶ್ ಮೆಲೋ ಸ್ಕೈಲೆರ್‌ 150 ಎಂಎಲ್,  ಯುಕ್ತಾ-ಚಿನ್ಮಯಿ 315 ಎಂಎಲ್, ಮೋನಿಷಾ ಹಾಗೂ ಸ್ನೇಹಾ ಶೆಟ್ಟಿ 400 ಎಂಎಲ್ ಹಾಲನ್ನು ಕರೆದಿದ್ದರು. ಈ ಮೂಲಕ ಮೋನಿಷಾ ಹಾಗೂ ಸ್ನೇಹಾ ವಿನ್ನರ್​ಗಳಾದರು.

ಇದನ್ನೂ ಓದಿ: ‘ಹಳ್ಳಿ ಪವರ್’: ಒಂದೇ ದಿನಕ್ಕೆ ಸುಸ್ತಾದ ಸಿಟಿ ಸುಂದರಿಯರು; ಕೆಲವರು ಅರ್ಧಕ್ಕೆ ವಾಪಸ್?

ವಿನ್ನರ್​ಗಳಿಗೆ ಬೆಳಗಾವಿಯ ಕುಂದ ಗಿಫ್ಟ್ ಆಗಿ ಸಿಕ್ಕಿತು. ಇದನ್ನು ತಿಂದು ಇವರು ಖುಷಿ ಪಟ್ಟರು. ಇನ್ನು, ಸೋತ ರಶ್ಮಿ-ಟೆಲಿನ್ ಹಾಗೂ ಲಲಿತಾ-ಸೋನಿಯಾಗೆ ಸಗಣಿ ನೀರ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂತು. ಈ ವೇಳೆ ಅವರಿಗೆ ವಾಕರಿಕೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Wed, 3 September 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ