ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ

ಸದ್ಯ, ‘ಕನ್ನಡತಿ’ ಧಾರಾವಾಹಿಯ ಕಥೆ ಹಸಿರುಪೇಟೆಯಲ್ಲಿ ನಡೆಯುತ್ತಿದೆ. ಹರ್ಷ, ಅವನ ತಾಯಿ ರತ್ನಮಾಲಾ, ಭುವಿ, ಅವಳ ತಂಗಿ ಬಿಂದು, ವರುಧಿನಿ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ.

ಅಜ್ಜಿಗೆ ನಿಂತ ಜಾಗದಲ್ಲೇ 32 ಲಕ್ಷ ರೂ. ನೀಡಿದ ಹರ್ಷ; ಭುವಿಗೆ ಹೀರೋನ ಬಿಟ್ಟುಕೊಟ್ಟ ವರುಧಿನಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 30, 2022 | 2:43 PM

ಹಲವು ತಿರುವುಗಳನ್ನು ತೆಗೆದುಕೊಂಡು ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹಸಿರುಪೇಟೆಯಲ್ಲಿ ಸಾಗಿದ ಕಥೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಹರ್ಷ ಹಾಗೂ ಭುವಿ ಎಂಗೇಜ್​ಮೆಂಟ್​ ನಡೆಯೋಕೆ ಇದ್ದ ಅಡೆತಡೆಗಳು ಸಂಪೂರ್ಣವಾಗಿ ಶಮನವಾಗುವ ಸೂಚನೆ ಸಿಕ್ಕಿದೆ. ಭುವಿ ಮದುವೆಗೆ ಅಡ್ಡಿಯಾಗಿ ನಿಂತಿದ್ದ ಮಂಗಳಮ್ಮನ ಬಾಯನ್ನು ಹರ್ಷ ಮುಚ್ಚಿಸಿದ್ದಾನೆ! ವಿಶೇಷ ಎಂದರೆ ಭುವಿಗೆ ಹೀರೋನ (ಹರ್ಷ) ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ ವರು. ಬುಧವಾರದ (ಮಾರ್ಚ್​ 30) ಎಪಿಸೋಡ್ ಈ ರೀತಿಯ ಹಲವು ಅಚ್ಚರಿಗೆ ಕಾರಣವಾಗಿದೆ.

ಸದ್ಯ, ‘ಕನ್ನಡತಿ’ ಧಾರಾವಾಹಿಯ ಕಥೆ ಹಸಿರುಪೇಟೆಯಲ್ಲಿ ನಡೆಯುತ್ತಿದೆ. ಹರ್ಷ, ಅವನ ತಾಯಿ ರತ್ನಮಾಲಾ, ಭುವಿ, ಅವಳ ತಂಗಿ ಬಿಂದು, ವರುಧಿನಿ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ. ಭುವಿಯನ್ನು ನೋಡೋಕೆ ಅದೇ ಊರಿನ ಸಾಹುಕಾರನ ಮಗ ಬಂದಿದ್ದ. ಅವನ ಬಳಿ ನಾಲ್ಕು ಗುಂಟೆ ಜಮೀನನ್ನು ಅಡ ಇಟ್ಟು 5 ಲಕ್ಷ ಪಡೆದಿದ್ದಳು ಭುವಿಯ ಅಜ್ಜಿ ಮಂಗಳಮ್ಮ. ಸಾಲದಿಂದಾಗಿ ಬೇರೆಯವರ ಕೈಯಲ್ಲಿರುವ ಭುವಿಯ ತಂದೆ ಮನೆಯನ್ನು ಮರಳಿ ಪಡೆಯುವ ಆಲೋಚನೆ ಮಂಗಳಮ್ಮನದ್ದು. ಆದರೆ, ಹಣವನ್ನು ಭುವಿ ಮರಳಿ ಅವನಿಗೆ ನೀಡಿದ್ದಾಳೆ. ಇದರಿಂದ ಸಿಟ್ಟಾದ ಸಾಹುಕಾರರ ಕುಟುಂಬ ಮರಳಿ ನಡೆದಿದೆ. ದುಡ್ಡು ಹೋಯಿತಲ್ಲ ಎಂದು ಮಂಗಳಮ್ಮ ರಂಪಾಟ ಮಾಡಿದ್ದಾಳೆ.

ಈ ಘಟನೆ ನಂತರದಲ್ಲಿ ಅಜ್ಜಿಯ ಬಾಯಿ ಮುಚ್ಚಿಸಿದ್ದಾನೆ ಹರ್ಷ. ನೇರವಾಗಿ ಕಾರಿನ ಬಳಿ ನಡೆದ ಹರ್ಷ ಅಲ್ಲಿಂದ ಚೆಕ್​ಬುಕ್​ ತಂದಿದ್ದಾನೆ. ಭುವಿಯ ತಂದೆಯ ಮನೆಯನ್ನು ಬಿಡಿಸಿಕೊಳ್ಳಲು 32 ಲಕ್ಷ ರೂಪಾಯಿ ಚೆಕ್​ಅನ್ನು ಮಂಗಳಮ್ಮನಿಗೆ ನೀಡಿದ್ದಾನೆ. ಇದನ್ನು ನೋಡಿ ಮಂಗಳಮ್ಮ ಅಚ್ಚರಿಗೊಂಡಿದ್ದಾಳೆ. ಇಷ್ಟುದಿನ ಹರ್ಷ ಬಾಡಿಗೆ ಕಾರಿನ ಡ್ರೈವರ್​ ಎಂದುಕೊಂಡಿದ್ದಳು. ಆದರೆ, ಅದು ಸುಳ್ಳು ಅನ್ನೋದು ಆಕೆಗೆ ಗೊತ್ತಾಗಿದೆ. ಇದರಿಂದ ಹರ್ಷ-ಭುವಿ ಮದುವೆಗೆ ಇದ್ದ ಒಂದು ಅಡ್ಡಿ ಶಮನವಾಗಿದೆ.

ಇನ್ನು, ಹರ್ಷನ ಬಳಿ ವರು ಮಾತನಾಡಿದ್ದಾಳೆ. ‘ಏನೇ ಮಾಡಿದರೂ ನಾನು ಭುವಿಯನ್ನು ಬಿಟ್ಟುಕೊಡುವುದಿಲ್ಲ, ನಿನ್ನ ಮೇಲೆ ಪ್ರೀತಿ ಹುಟ್ಟುವುದಿಲ್ಲ’ ಎನ್ನುವ ಮಾತನ್ನು ಹೇಳಿದ್ದಾನೆ. ಇದರಿಂದ ಹರ್ಷನನ್ನು ಭುವಿಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದಾಳೆ ವರುಧಿನಿ. ಇದರಿಂದ, ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಕ್ಕಂತೆ ಆಗಿದೆ.

ಇದನ್ನೂ ಓದಿ:ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​ 

ಕನ್ನಡತಿ ಅಪ್​ಡೇಟ್​: ಹಸಿರುಪೇಟೆಗೆ ಬಂದು ಹೆಣ್ಣು ಕೇಳಿದ ಹರ್ಷ; ಮಂಗಳಮ್ಮನ ಉತ್ತರ ಏನು?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ