AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಗನಸು: ಗೌತಮ್ ಪ್ರಪೋಸ್ ಪ್ಲಾನ್ ಮತ್ತೆ ಠುಸ್; ಕೊನೆಗೂ ವಸುಗೆ ರೋಸ್ ಕೊಟ್ಟ ರಿಷಿ

Honganasu Serial Update: ರಿಷಿ ದಿಢೀರ್ ಎಂಟ್ರಿ ನೀಡಿದ್ದರಿಂದ ಗೌತಮ್‌ಗೆ ಶಾಕ್ ಆಯಿತು. ವಸುಗೆ ತಿಳಿಯದ ಹಾಗೆ ಗೌತಮ್‌ನನ್ನು ರಿಷಿ ಹೊರಗೆ ಕಳುಹಿಸಿದ.

ಹೊಂಗನಸು: ಗೌತಮ್ ಪ್ರಪೋಸ್ ಪ್ಲಾನ್ ಮತ್ತೆ ಠುಸ್; ಕೊನೆಗೂ ವಸುಗೆ ರೋಸ್ ಕೊಟ್ಟ ರಿಷಿ
ಹೊಂಗನಸು ಸೀರಿಯಲ್
TV9 Web
| Edited By: |

Updated on: Oct 14, 2022 | 7:12 PM

Share

ವಸುಧರಾಳಿಗೆ ಪ್ರಪೋಸ್ ಮಾಡಲು ಗೌತಮ್ ಭರ್ಜರಿ ತಯಾರಿ ಮಾಡಿದ್ದ. ಆದರೆ ಗೌತಮ್ ಪ್ಲಾನ್‌ ಅನ್ನು ರಿಷಿ ಠುಸ್ ಮಾಡಿದ. ಗೌತಮ್ ಇನ್ನೇನು ವಸುಗೆ ಪ್ರಪೋಸ್ ಮಾಡೇ ಬಿಟ್ಟ ಎನ್ನುವಷ್ಟೊತ್ತಿಗೆ ರಿಷಿ ಅಡ್ಡ ಬಂದ. ವಸುಧರಾ ಎಜುಕೇಶನ್ ಪ್ರಾಜೆಕ್ಟ್ ರೆಡಿ ಮಾಡಿ ರಿಷಿಗೆ ವಿವರಣೆ ನೀಡಲು ತಯಾರಿ ನಡೆಸುತ್ತಿದ್ದಳು. ವಸು ಒಬ್ಬಳೇ ಇದ್ದಾಳೆ, ಪ್ರಪೋಸ್ ಮಾಡಲು ಸರಿಯಾದ ಸಮಯವೆಂದು ಪ್ಲಾನ್ ಮಾಡಿ ಗೌತಮ್ ಎಂಟ್ರಿ ಕೊಟ್ಟ. ಅಲ್ಲೇ ಇದ್ದ ರೋಸ್ ಹಿಡಿದು ವಸುಗೆ ಕೊಟ್ಟು ಐ ಲವ್ ಯು ಹೇಳಲು ಮುಂದಾದ. ರೋಸ್ ಎತ್ತಿ ವಸುಗೆ ಕೊಡುವಾಗ ರಿಷಿ ಬಂದು ತಡೆದ. ರಿಷಿ ದಿಢೀರ್ ಎಂಟ್ರಿ ಗೌತಮ್‌ಗೆ ಶಾಕ್ ನೀಡಿದು. ವಸುಗೆ ತಿಳಿಯದ ಹಾಗೆ ಗೌತಮ್‌ನನ್ನು ಹೊರ ಕಳುಹಿಸಿದ. ನಿನಗೇನು ಕೆಲಸ ಇಲ್ಲಿ ಎಂದು ಗೌತಮ್‌ಗೆ ಹೊರ ಹೋಗುವಂತೆ ಹೇಳಿದ. ಪದೇ ಪದೇ ರಿಷಿ ಅಡ್ಡ ಬರ್ತಿದ್ದಾನೆ ಎಂದು ಬೈಯ್ದು ಕೊಳ್ಳುತ್ತಾ ಗೌತಮ್ ಅಲ್ಲಿಂದ ಹೊರಟ.

ವಸು ತಾನು ರೆಡಿ ಮಾಡಿದ್ದ ಪ್ರಾಜೆಕ್ಟ್ ಅನ್ನು ರಿಷಿಗೆ ಒಪ್ಪಿಸಿದಳು. ರಿಷಿ ಇಂಪ್ರೆಸ್ ಆಗಿ ಗೌತಮ್ ಬೀಳಿಸಿದ್ದ ರೋಸ್‌ ತೆಗೆದು ವಸುಗೆ ನೀಡಿದ. ರಿಷಿ ಕೊಟ್ಟ ರೋಸ್ ಹಿಡಿದು ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತೀನಿ ಎಂದು ವಸು ಮನಸ್ಸಲ್ಲೇ ಅಂದುಕೊಂಡಳು. ಬಳಿಕ ಇಬ್ಬರೂ ಒಟ್ಟಿಗೆ ಹೊರಬರುತ್ತಿರುವುದನ್ನು ನೋಡಿದ ಗೌತಮ್. ವಸು ಕೈಯಲ್ಲಿದ್ದ ರೋಸ್ ನೋಡಿ ಶಾಕ್ ಆದ.

ಜಗತಿ ಮತ್ತು ಮಹೇಂದ್ರ ಇಬ್ಬರೂ ಒಟ್ಟಿಗೆ ತೀರಾ ಆತ್ಮೀಯವಾಗಿ ಮಾತನಾಡುತ್ತಿರುವುದನ್ನು ಗೌತಮ್ ಗಮನಿಸಿದ. ಜಗತಿ ಬಳಿ ಮಾತನಾಡಬೇಕೆಂದು ಬಂದಿದ್ದ ಗೌತಮ್‌ಗೆ ಇಬ್ಬರ ಆಪ್ತತೆ ಅಚ್ಚರಿ ಮೂಡಿಸಿತು. ಇಬ್ಬರೂ ಸಹೋದ್ಯೋಗಿಗಳ ಹಾಗೆ ಇಲ್ಲ ಅಂತ ಯೋಚಿಸಿದ. ಗೌತಮ್‌ಗೆ ಮಹೇಂದ್ರ ಮತ್ತು ಜಗತಿ ಇಬ್ಬರು ಗಂಡ ಹೆಂಡತಿ, ಜಗತಿ ಮೇಡಮ್ ರಿಷಿಯ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಿಷಿ ಕೂಡ ಗೌತಮ್ ಬಳಿ ಯಾವುದೇ ಸತ್ಯ ಬಾಯ್ಬಿಟ್ಟಿಲ್ಲ. ರಿಷಿ ಬಳಿ ಬಂದು ಮಹೇಂದ್ರ ಮತ್ತು ಜಗತಿ ನಡುವಿನ ಸಂಬಂಧದ ಬಗ್ಗೆ ಗೌತಮ್ ಪ್ರಶ್ನೆ ಮಾಡಿದ. ಇದರಿಂದ ಕೋಪಗೊಂಡ ರಿಷಿ ಏನು ಮಾತನಾಡದೇ ‘ನನಗೆ ಕೆಲಸವಿದೆ’ ಎಂದು ಹೇಳಿ ಹೊರಟ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ರಿಷಿ ಮತ್ತು ವಸು ಇಬ್ಬರೂ ಪ್ರಾಜೆಕ್ಟ್ ವರ್ಕ್ ಮೇಲೆ ಹಳ್ಳಿಗೆ ಹೊರಟರು. ದಾರಿಯಲ್ಲಿ ರಿಷಿ ತನ್ನ ತಂದೆಯಿಂದ ಜಗತಿ ಮೇಡಮ್‌ನ ದೂರ ಇರುವಂತೆ ಹೇಳು ಎಂದು ವಸುಗೆ ಹೇಳಿದ. ಆದರೆ ವಸು ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ರಿಷಿಗೆ ಸಂಬಂಧದ ಪಾಠ ಮಾಡಿದಳು. ತಾಯಿ ಅಂತ ನೀವು ಒಪ್ಪಿಕೊಳ್ಳದಿದ್ದರೂ ಮಹೇಂದ್ರ ಸರ್ ಮತ್ತು ಜಗತಿ ಮೇಡಮ್ ಗಂಡ-ಹೆಂಡತಿ ಎನ್ನುವ ಸತ್ಯ ಬದಲಾಗಲ್ಲ. ಇಬ್ಬರದ್ದು ಪವಿತ್ರವಾದ ಸಂಬಂಧ. ಇದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ ಎಂದು ದೀರ್ಘವಾದ ವಿವರಣೆ ನೀಡಿದಳು.

ಬಳಿಕ ರಿಷಿ ಮತ್ತು ವಸು ಇಬ್ಬರೂ ಹಳ್ಳಿಗೆ ಎಂಟ್ರಿ ಕೊಟ್ಟರು. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ನೀರು ಕೊಡುತ್ತಿದ್ದ ರಿಷಿಗೆ ಬೈಕ್ ಸವಾರನೊಬ್ಬ ಮೈ ಮೇಲೆ ಕೊಚ್ಚೆ ಹಾರಿಸಿ ಹೋದ. ರಿಷಿ ಬಟ್ಟೆ ಗಲೀಜಾಯಿತು. ಬಳಿಕ ವಸು ತಾನೆ ರಿಷಿ ಕೋಟ್ ಅನ್ನು ಕ್ಲೀನ್ ಮಾಡಿದಳು. ರಿಷಿ ಬೇಡ ಎಂದರೂ ನಾನಿರುವಾಗ ನೀವು ಇಂಥ ಕೆಲಸ ಮಾಡಬಾರದು ಎಂದು ಹೇಳುತ್ತಾ ಕ್ಲೀನ್ ಮಾಡಿದಳು. ವಸುಧರಾಳ ಪ್ರೀತಿ, ಕಾಳಜಿಗೆ ರಿಷಿ ಮೌನಿಯಾದ. ವಸು ಮೇಲೆ ಲವ್ ಆಗಿರುವ ವಿಚಾರವನ್ನು ರಿಷಿ ಒಪ್ಪಿಕೊಳ್ಳುತ್ತಾನಾ? ಇತ್ತ ಗೌತಮ್ ತನ್ನ ಪ್ರೀತಿಯನ್ನು ವಸುಗೆ ಹೇಳ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ