AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ

Honganasu Serial Update: ಒಬ್ಬನೇ ನಿಂತಿದ್ದ ರಿಷಿಯ ಬಳಿ ಬಂದಳು ವಸು. ‘ಇಲ್ಲಿಗೆ ಯಾಕೆ ಬಂದೆ, ಕಾಲ್ ಮಾಡಿ ಬರಬೇಕು ಎನ್ನುವ ಪರಿಜ್ಞಾನ ಇಲ್ವಾ’ ಎಂದು ವಸು ಮೇಲೆ ರಿಷಿ ಕೂಗಾಡಿದ.

Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ
ಹೊಂಗನಸು ಸೀರಿಯಲ್
TV9 Web
| Edited By: |

Updated on: Dec 02, 2022 | 5:42 PM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯನ್ನು ಹೇಗಾದರೂ ಮಾಡಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಹಠ ಹಿಡಿದಿದ್ದಾಳೆ ಸಾಕ್ಷಿ. ಸಾಕ್ಷಿಯನ್ನು ಮುಂದಿಟ್ಟುಕೊಂಡು ದೇವಯಾನಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ. ರಿಷಿ ಮನೆಗೆ ಬಂದಿರುವ ಸಾಕ್ಷಿ ಮದುವೆ ವಿಚಾರ ಎತ್ತಿದ್ದಾಳೆ. ವಸುಧರಾ ಜೊತೆ ಪ್ರೀತಿಯಲ್ಲಿ ಇರುವುದರಿಂದ ತನ್ನನ್ನು ದೂರ ಇಡುತ್ತಿದ್ದೀಯಾ ಎಂದು ಸಾಕ್ಷಿ ಕೂಗಾಡಿದಳು.

ವಸುಧರಾಳಿಂದ ರಿಷಿಯನ್ನು ದೂರ ಮಾಡುವ ದೇವಯಾನಿ ಪ್ಲಾನ್ ವರ್ಕೌಟ್ ಆಗುತ್ತಿದೆ. ಸಾಕ್ಷಿಯನ್ನು ಮುಂದಿಟ್ಟುಕೊಂಡು ವಸುಧರಾಳನ್ನು ದೂರ ಮಾಡುತ್ತಿದ್ದಾಳೆ ದೇವಯಾನಿ. ಮನೆಯವರ ಮುಂದೆ ರಿಷಿಯನ್ನು ಮದುವೆಯಾಗುವ ವಿಚಾರ ಪ್ರಸ್ತಾಪ ಮಾಡಿದಳು ಸಾಕ್ಷಿ. ರಿಷಿ ತನ್ನ ಕೈಗೆ ಸಿಗುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಕೂಗಾಡಿದಳು. ರಿಷಿಯ ಮೊದಲ ಆದ್ಯತೆ ವಸುಧರಾ ಆಗಿದ್ದಾಳೆ, ವಸುಧರಾಳನ್ನು ಪ್ರೀತಿ ಮಾಡುತ್ತಿದ್ದಾನೆ ಎಂದು ಸಾಕ್ಷಿ ಎಲ್ಲರ ಮುಂದೆ ಬಹಿರಂಗ ಪಡಿಸಿದಳು. ಸಾಕ್ಷಿಯ ಮಾತಿನಿಂದ ಸಿಟ್ಟಿಗೆದ್ದ ರಿಷಿ ಕೂಡ ಜೋರಾಗಿ ಕೂಗಾಡಿ ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ವಸುಧರಾ ಜೊತೆಗಿದ್ದ ರಿಷಿ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನೆ ಮಾಡಿದಳು ಸಾಕ್ಷಿ. ರಿಷಿ ಮತ್ತು ಸಾಕ್ಷಿ ಜಗಳದ ಮುಂದೆ ಸೈಲೆಂಟ್ ಆಗಿ ನಿಂತಿದ್ದ ಜಗತಿ ಎಂಟ್ರಿ ಕೊಟ್ಟಳು.

ರಿಷಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಬೇಡ ಎಂದು ಸಾಕ್ಷಿಗೆ ಖಡಕ್ ಎಚ್ಚರಿಕೆ ನೀಡಿದಳು ಜಗತಿ. ರಿಷಿ ಮನಸ್ಸಲ್ಲಿ ನೀನಿಲ್ಲ ಅಂತ ಗೊತ್ತಾದ ಮೇಲೆ ಹೀಗೆಲ್ಲ ಅನುಮಾನ ಪಡೋದು ಸರಿಯಲ್ಲ ಎಂದು ಸಾಕ್ಷಿಗೆ ಕಿವಿ ಮಾತು ಹೇಳಿದಳು. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತು ಅಂತ ದೇವಯಾನಿಗೆ ಪರೋಕ್ಷವಾಗಿ ತಿವಿದಳು ಜಗತಿ. ಮನೆ ರಣರಂಗ ಆಗಿರುವಾಗಲೇ ವಸುಧರಾ ಎಂಟ್ರಿ ಕೊಟ್ಟಳು. ‘ರಿಷಿ ಸರ್ ಜೊತೆ ಕೆಲಸವಿದೆ ಅದಕ್ಕೆ ಬಂದೆ’ ಎಂದಳು ವಸು. ಇದು ಸಾಕ್ಷಿಯನ್ನು ಮತ್ತಷ್ಟು ಕೆರಳಿಸಿತು. ಇನ್ನೇನಿದೆ ಹೇಳೋಕೆ ಈಗಲಾದರೂ ಎಲ್ಲರಿಗೂ ಗೊತ್ತಾಯಿತಾ ಎಂದು ತಂದೆಯನ್ನು ಕರ್ಕೊಂಡು ಹೊರಟಳು ಸಾಕ್ಷಿ.

ಒಬ್ಬನೇ ನಿಂತಿದ್ದ ರಿಷಿಯ ಬಳಿ ಬಂದಳು ವಸು. ಇಲ್ಲಿಗೆ ಯಾಕೆ ಬಂದೆ, ಕಾಲ್ ಮಾಡಿ ಬರಬೇಕು ಎನ್ನುವ ಪರಿಜ್ಞಾನ ಇಲ್ವಾ ಎಂದು ವಸು ಮೇಲೆ ಕೂಗಾಡಿದ ರಿಷಿ. ಸರ್‌ಗೆ ಏನಾಯಿತು ಎಂದು ವಸು ಗಾಬರಿಯಾದಳು. ಅಷ್ಟೊತ್ತಿಗೆ ಜಗತಿ ಫೋನ್ ಮಾಡಿ ‘ರಿಷಿ ಬಳಿ ಏನೂ ಮಾತನಾಡ ಬೇಡ ಅಲ್ಲಿಂದ ಬಾ’ ಎಂದು ಹೇಳಿದಳು. ರಿಷಿ ಬೀಳಿಸಿಕೊಂಡಿದ್ದ ಪರ್ಸ್ ಅನ್ನು ಕೊಟ್ಟು ವಸುಧರಾ ಹೊರಟಳು. ವಸುಧರಾಳನ್ನು ಪ್ರೀತಿಸುತ್ತಿದ್ದೀನಾ ಎಂದು ರಿಷಿ ಯೋಚನೆ ಶುರುವಾಯಿತು.

ಎಕ್ಸಾಮ್‌ ಹಾಲ್ ಟಿಕೆಟ್‌ ಅನ್ನು ತಾನೆ ವಸುಗೆ ಕೊಡುವ ಬದಲು ಜಗತಿ ಕೈಯಲ್ಲಿ ಕೊಡಿಸಿದ ರಿಷಿ. ಹಾಲ್ ಟಿಕೆಟ್ ಪಡೆದು ಖುಷಿಯಿಂದ ರಿಷಿ ಚೇಂಬರ್‌ಗೆ ಬಂದ ವಸು ಸಂತಸವನ್ನು ಹೇಳಿದಳು. ಆದರೆ ವಸು ಜೊತೆ ಸರಿಯಾಗಿ ಮಾತನಾಡದೆ ದೂರ ಇಡಲು ಪ್ರಯತ್ನಿಸಿದ ರಿಷಿ. ಎಕ್ಸಾಮ್ ಹಾಲ್​ವರೆಗೂ ಬನ್ನಿ ಸರ್ ಎಂದು ಕರೆದಳು ವಸು. ‘ಎಲ್ಲಾ ಸಮಯದಲ್ಲೂ ಜೊತೆಯಲ್ಲೇ ಇರಲು ಆಗಲ್ಲ, ನೀನೇನು ಚಿಕ್ಕ ಮಗುನಾ’ ಎಂದು ವಸು ಮೇಲೆ ರೇಗಿದ. ರಿಷಿಯ ಮಾತುಗಳು ವಸುಗೆ ಅಚ್ಚರಿ ಜೊತೆಗೆ ಬೇಸರ ಮೂಡಿಸಿತು. ಅಳುತ್ತಲೇ ಬಂದ ವಸು ನೋಡಿ ಶಾಕ್ ಆದ ಜಗತಿ ಮತ್ತು ಮಹೇಂದ್ರ ಏನಾಯಿತು ಎಂದು ಕೇಳಿದಳು. ‘ರಿಷಿ ಬಂದಿಲ್ಲ ಅಂದರೆ ನೀನು ಹೋಗಿ ಎಕ್ಸಾಮ್ ಬರಿ’ ಎಂದು ವಸುಗೆ ಧೈರ್ಯ ತುಂಬಿದಳು ಜಗತಿ. ಸಾಕ್ಷಿ ಮಾತಿನಿಂದ ವಸುಧರಾಳಿಂದ ದೂರ ಇರಲು ಪ್ರಯತ್ನಿಸುತ್ತಿರುವ ರಿಷಿ ವಸುಧರಾಳನ್ನು ಎಕ್ಸಾಮ್‌ಗೆ ಕರೆದುಕೊಂಡು ಹೋಗುತ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ