AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

Bigg Boss: ತೆಲುಗು ಬಿಗ್​ಬಾಸ್ ಸೀಸನ್ 7 ಇತ್ತೀಚೆಗಷ್ಟೆ ಮುಗಿದಿದೆ, ರೈತ ಯುವಕ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಅಂದಹಾಗೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?
ಮಂಜುನಾಥ ಸಿ.
|

Updated on: Dec 19, 2023 | 5:44 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಚಾಲ್ತಿಯಲ್ಲಿದೆ. ಫಿನಾಲೆಗೆ ಇನ್ನು ಸುಮಾರು 30 ದಿನಗಳು ಬಾಕಿ ಇದೆ. ತೆಲುಗು ಬಿಗ್​ಬಾಸ್ ಕಳೆದ ಶನಿವಾರವಷ್ಟೆ ಮುಗಿದಿದ್ದು, ಯುವ ರೈತ ಪಲ್ಲವಿ ಪ್ರಶಾಂತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸೀಸನ್ ಪ್ರಾರಂಭವಾದಾಗಿನಿಂದಲೂ ಜನರನ್ನು ರಂಜಿಸುತ್ತಾ, ಟಾಸ್ಕ್​ಗಳಲ್ಲಿ ಜೀವವನ್ನೇ ಒತ್ತೆ ಇಟ್ಟು ಆಡುತ್ತಿದ್ದ ಪಲ್ಲವಿ ಪ್ರಶಾಂತ್​ ವೀಕ್ಷಕರ ಮನ ಗೆದ್ದಿದ್ದರು, ಕೋಟ್ಯಂತರ ಮಂದಿ ರೈತರು, ರೈತರ ಮಕ್ಕಳು ಪಲ್ಲವಿ ಪ್ರಶಾಂತ್ ಅನ್ನು ತಮ್ಮ ಪ್ರತಿನಿಧಿ ಎಂದೇ ನಂಬಿದ್ದರು, ಕೊನೆಗೆ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ.

ಫಿನಾಲೆ ದಿನ ಬರೋಬ್ಬರಿ ಆರು ಮಂದಿ ಉಳಿದುಕೊಂಡಿದ್ದರು. ಅವರಲ್ಲಿ ಇಬ್ಬರು ಮೊದಲಿಗೆ ಎಲಿಮಿನೇಟ್ ಆದರು. ಬಳಿಕ ನಾಲ್ಕು ಮಂದಿ ಉಳಿದಿದ್ದರು. ಅವರಲ್ಲಿ ಒಬ್ಬರು ಗೋಲ್ಡನ್ ಸೂಟ್​ಕೇಸ್​ ತೆಗೆದುಕೊಂಡು ಶೋನಿಂದ ಹೊರಗೆ ಬಂದರು. ಉಳಿದ ಮೂವರಲ್ಲಿ, ಶಿವಾಜಿ ಸಹ ಎಲಿಮಿನೇಟ್ ಆದರು. ಕೊನೆಗೆ ಅಮರ್​ದೀಪ್ ಹಾಗೂ ಪ್ರಶಾಂತ್ ಉಳಿದಿದ್ದು, ಪಲ್ಲವಿ ಪ್ರಶಾಂತ್ ವಿಜೇತ ಎನಿಸಿಕೊಂಡರು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ

ಫಿನಾಲೆ ಗೆದ್ದ ಪಲ್ಲವಿ ಪ್ರಶಾಂತ್​ಗೆ ಬರೋಬ್ಬರಿ 35 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯ್ತು. ಅಸಲಿಗೆ ಪ್ರೈಜ್ ಮನಿ 50 ಲಕ್ಷ ರೂಪಾಯಿಗಳಾಗಿತ್ತು. ಆದರೆ ಗೋಲ್ಡನ್ ಸೂಟ್​ಕೇಸ್​ನಲ್ಲಿ ಯಾವರ್​ಗೆ 15 ಲಕ್ಷ ಹಣ ನೀಡಲಾಯ್ತು. ಹಾಗಾಗಿ 50 ಲಕ್ಷ ರೂಪಾಯಿ ಹಣದ ಬದಲಿಗೆ ಪಲ್ಲವಿ ಪ್ರಶಾಂತ್​ಗೆ 35 ಲಕ್ಷ ರೂಪಾಯಿ ನೀಡಲಾಯ್ತು.

ರನ್ನರ್ ಅಪ್ ಅಮರ್​ದೀಪ್​ಗೆ ಯಾವುದೇ ಬಹುಮಾನದ ಹಣ ನೀಡಲಾಗಲಿಲ್ಲ ಆದರೆ ಆತನಿಗೆ ಅವರ ಅತ್ಯಂತ ಅಚ್ಚುಮೆಚ್ಚಿನ ನಟ ರವಿತೇಜ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಸ್ವತಃ ರವಿತೇಜ ವೇದಿಕೆ ಮೇಲೆ ಬಂದು ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದರು. ಎರಡನೇ ರನ್ನರ್ ಅಪ್ ಆದ ಶಿವಾಜಿ ಅವರಿಗೆ ಯಾವುದೇ ಬಹುಮಾನದ ಹಣ ಸಿಗಲಿಲ್ಲವಾದರೂ, ಇಡೀ ಬಿಗ್​ಬಾಸ್​ನಲ್ಲಿ ಅತಿ ಹಚ್ಚು ಸಂಭಾವನೆ ಶಿವಾಜಿ ಅವರಿಗೆ ದೊರಕಿತು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ