AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

Bigg Boss: ತೆಲುಗು ಬಿಗ್​ಬಾಸ್ ಸೀಸನ್ 7 ಇತ್ತೀಚೆಗಷ್ಟೆ ಮುಗಿದಿದೆ, ರೈತ ಯುವಕ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಅಂದಹಾಗೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?
Follow us
ಮಂಜುನಾಥ ಸಿ.
|

Updated on: Dec 19, 2023 | 5:44 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಚಾಲ್ತಿಯಲ್ಲಿದೆ. ಫಿನಾಲೆಗೆ ಇನ್ನು ಸುಮಾರು 30 ದಿನಗಳು ಬಾಕಿ ಇದೆ. ತೆಲುಗು ಬಿಗ್​ಬಾಸ್ ಕಳೆದ ಶನಿವಾರವಷ್ಟೆ ಮುಗಿದಿದ್ದು, ಯುವ ರೈತ ಪಲ್ಲವಿ ಪ್ರಶಾಂತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸೀಸನ್ ಪ್ರಾರಂಭವಾದಾಗಿನಿಂದಲೂ ಜನರನ್ನು ರಂಜಿಸುತ್ತಾ, ಟಾಸ್ಕ್​ಗಳಲ್ಲಿ ಜೀವವನ್ನೇ ಒತ್ತೆ ಇಟ್ಟು ಆಡುತ್ತಿದ್ದ ಪಲ್ಲವಿ ಪ್ರಶಾಂತ್​ ವೀಕ್ಷಕರ ಮನ ಗೆದ್ದಿದ್ದರು, ಕೋಟ್ಯಂತರ ಮಂದಿ ರೈತರು, ರೈತರ ಮಕ್ಕಳು ಪಲ್ಲವಿ ಪ್ರಶಾಂತ್ ಅನ್ನು ತಮ್ಮ ಪ್ರತಿನಿಧಿ ಎಂದೇ ನಂಬಿದ್ದರು, ಕೊನೆಗೆ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ.

ಫಿನಾಲೆ ದಿನ ಬರೋಬ್ಬರಿ ಆರು ಮಂದಿ ಉಳಿದುಕೊಂಡಿದ್ದರು. ಅವರಲ್ಲಿ ಇಬ್ಬರು ಮೊದಲಿಗೆ ಎಲಿಮಿನೇಟ್ ಆದರು. ಬಳಿಕ ನಾಲ್ಕು ಮಂದಿ ಉಳಿದಿದ್ದರು. ಅವರಲ್ಲಿ ಒಬ್ಬರು ಗೋಲ್ಡನ್ ಸೂಟ್​ಕೇಸ್​ ತೆಗೆದುಕೊಂಡು ಶೋನಿಂದ ಹೊರಗೆ ಬಂದರು. ಉಳಿದ ಮೂವರಲ್ಲಿ, ಶಿವಾಜಿ ಸಹ ಎಲಿಮಿನೇಟ್ ಆದರು. ಕೊನೆಗೆ ಅಮರ್​ದೀಪ್ ಹಾಗೂ ಪ್ರಶಾಂತ್ ಉಳಿದಿದ್ದು, ಪಲ್ಲವಿ ಪ್ರಶಾಂತ್ ವಿಜೇತ ಎನಿಸಿಕೊಂಡರು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ

ಫಿನಾಲೆ ಗೆದ್ದ ಪಲ್ಲವಿ ಪ್ರಶಾಂತ್​ಗೆ ಬರೋಬ್ಬರಿ 35 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯ್ತು. ಅಸಲಿಗೆ ಪ್ರೈಜ್ ಮನಿ 50 ಲಕ್ಷ ರೂಪಾಯಿಗಳಾಗಿತ್ತು. ಆದರೆ ಗೋಲ್ಡನ್ ಸೂಟ್​ಕೇಸ್​ನಲ್ಲಿ ಯಾವರ್​ಗೆ 15 ಲಕ್ಷ ಹಣ ನೀಡಲಾಯ್ತು. ಹಾಗಾಗಿ 50 ಲಕ್ಷ ರೂಪಾಯಿ ಹಣದ ಬದಲಿಗೆ ಪಲ್ಲವಿ ಪ್ರಶಾಂತ್​ಗೆ 35 ಲಕ್ಷ ರೂಪಾಯಿ ನೀಡಲಾಯ್ತು.

ರನ್ನರ್ ಅಪ್ ಅಮರ್​ದೀಪ್​ಗೆ ಯಾವುದೇ ಬಹುಮಾನದ ಹಣ ನೀಡಲಾಗಲಿಲ್ಲ ಆದರೆ ಆತನಿಗೆ ಅವರ ಅತ್ಯಂತ ಅಚ್ಚುಮೆಚ್ಚಿನ ನಟ ರವಿತೇಜ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಸ್ವತಃ ರವಿತೇಜ ವೇದಿಕೆ ಮೇಲೆ ಬಂದು ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದರು. ಎರಡನೇ ರನ್ನರ್ ಅಪ್ ಆದ ಶಿವಾಜಿ ಅವರಿಗೆ ಯಾವುದೇ ಬಹುಮಾನದ ಹಣ ಸಿಗಲಿಲ್ಲವಾದರೂ, ಇಡೀ ಬಿಗ್​ಬಾಸ್​ನಲ್ಲಿ ಅತಿ ಹಚ್ಚು ಸಂಭಾವನೆ ಶಿವಾಜಿ ಅವರಿಗೆ ದೊರಕಿತು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ