AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಯನ್​ ಐಡಲ್​ ನಂತರವೂ ಮುಂದುವರಿದ ಪ್ರೇಮ ಕಥೆ? ಒಂದೇ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ ಖರೀದಿಸಿದ ಪವನ್​ದೀಪ್​-ಅರುಣಿತಾ

ಅರುಣಿತಾ ಹಾಗೂ ಪವನ್​ದೀಪ್​ ಒಂದೇ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ ಖರೀದಿ ಮಾಡಿದ್ದಾರೆ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ನೆರೆಹೊರೆಯವರಾಗಿದ್ದಾರೆ.

ಇಂಡಿಯನ್​ ಐಡಲ್​ ನಂತರವೂ ಮುಂದುವರಿದ ಪ್ರೇಮ ಕಥೆ? ಒಂದೇ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ ಖರೀದಿಸಿದ ಪವನ್​ದೀಪ್​-ಅರುಣಿತಾ
ಇಂಡಿಯನ್​ ಐಡಲ್​ ನಂತರವೂ ಮುಂದುವರಿದ ಪ್ರೇಮ ಕಥೆ? ಒಂದೇ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ ಖರೀದಿಸಿದ ಪವನ್​ದೀಪ್​-ಅರುಣಿತಾ
TV9 Web
| Edited By: |

Updated on: Aug 22, 2021 | 9:12 AM

Share

ಇಂಡಿಯನ್​ ಐಡಲ್​ 12ರ ವಿನ್ನರ್​ ಪಟ್ಟವನ್ನು ಪವನ್​ದೀಪ್ ರಾಜನ್​ ಪಡೆದುಕೊಂಡಿದ್ದಾರೆ.  ಅವರಿಗೆ ಆಕರ್ಷಕ ಟ್ರೋಫಿ ಜತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ. ಇದರ ಜತೆಗೆ  ಅವರಿಗೆ ಅಪಾರ ಖ್ಯಾತಿ ಸಿಕ್ಕಿದೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ಹಾಡೋಕೆ ಆಫರ್​ ಕೂಡ ಬರುತ್ತಿವೆ. ಹೀಗಿರುವಾಗಲೇ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಪವನ್​​ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ವಾಹಿನಿಯವರು ಬಿಂಬಿಸಿದ್ದರು. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಟಿಆರ್​ಪಿಗೋಸ್ಕರ ಈ ರೀತಿ ಮಾಡಲಾಗುತ್ತಿದೆ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು. ಇನ್ನೂ ಕೆಲವರು ಪವನ್​ದೀಪ್​ ಹಾಗೂ ಅರುಣಿತಾ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ಸಬೂಬು ನೀಡಿದ್ದರು. ಆದರೆ, ಇವರ ನಡುವೆ ಪ್ರೀತಿ ಮೊಳೆತಿದ್ದು, ಅದು ಮುಂದುವರಿಯುತ್ತಿದೆಯೇ ಎನ್ನುವ ಅನುಮಾನ ಕಾಡಿದೆ.

ಅರುಣಿತಾ ಹಾಗೂ ಪವನ್​ದೀಪ್​ ಒಂದೇ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ ಖರೀದಿ ಮಾಡಿದ್ದಾರೆ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ನೆರೆಹೊರೆಯವರಾಗಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಕುತೂಹಲಗೊಂಡಿದ್ದಾರೆ. ಅಲ್ಲದೆ, ಈ ನಿರ್ಧಾರ ನೋಡಿ, ಪವನ್​ದೀಪ್​ ಹಾಗೂ ಅರುಣಿತಾ ನಡುವೆ ನಿಜವಾದ ಪ್ರೀತಿ ಹುಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ, ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರ ಹಾಟ್​ ಟಾಪಿಕ್​ ಆಗಿ ಚರ್ಚೆಯಾಗುತ್ತಿದೆ.

ಇನ್ನು, ಪವನ್​ದೀಪ್​, ಅರುಣಿತಾ ಹಾಗೂ ಇಂಡಿಯನ್​ ಐಡಲ್​ 12ರ ಎರಡನೇ ರನ್ನರ್​ ಅಪ್​ ಶಣ್​ಮುಖ್​ ಪ್ರಿಯ ಅವರು ಒಟ್ಟಾಗಿ ಆಲ್ಬಮ್​ ಸಾಂಗ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್​ ಸುರಾನಿ ಅವರು ಈ ಆಲ್ಬಮ್​ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಪವನ್​ದೀಪ್​ ಅವರು ಇಂಡಿಯನ್​ ಐಡಲ್​ 12ರಲ್ಲಿ ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್​​ಗಳ ಗಮನ ಸೆಳೆದಿದ್ದರು ಪವನ್​​ದೀಪ್. ಗಿಟಾರ್​ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್​ದೀಪ್​ಗೆ ಕರಗತವಾಗಿದೆ.ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್​ಗಳಿಗೆ ಇಷ್ಟವಾಗಿದ್ದರು. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ.  ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್​ ಬ್ಯಾಂಡ್​ ಹೊಂದಿದ್ದಾರೆ ಪವನ್​ದೀಪ್​. ಕುಮಾನ್​ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: Pawandeep Rajan: ‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್