AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawandeep Rajan: ‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ

Indian Idol 12 Winner: ‘ಇಂಡಿಯನ್​ ಐಡಲ್​ 12’ ವಿನ್ನರ್​ ಆಗಿರುವ ಪವನ್​ದೀಪ್​ ರಾಜನ್​ ಅವರಿಗೆ 12 ಲಕ್ಷ ರೂ. ಬಹುಮಾನ ಸಿಕ್ಕಿದೆ. ಮೊದಲ ಮತ್ತು ಎರಡನೇ ರನ್ನರ್​ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು.

Pawandeep Rajan: ‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ
‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​
TV9 Web
| Edited By: |

Updated on: Aug 16, 2021 | 8:06 AM

Share

ವಿವಾದಗಳ ನಡುವೆಯೂ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದ ಇಂಡಿಯನ್​ ಐಡಲ್​ (Indian Idol 12) ಸಿಂಗಿಂಗ್​ ರಿಯಾಲಿಟಿ ಶೋ 12ನೇ ಸೀಸನ್​ ಅಂತ್ಯವಾಗಿದೆ. ಈ ಸೀಸನ್​ನ ವಿನ್ನರ್​ ಆಗಿ ಪವನ್​ದೀಪ್​ ರಾಜನ್​  (Pawandeep Rajan) ಹೊರಹೊಮ್ಮಿದ್ದಾರೆ. ಬರೋಬ್ಬರಿ 9 ತಿಂಗಳ ಕಾಲ ಪ್ರಸಾರವಾದ ಈ ರಿಯಾಲಿಟಿ ಶೋಗೆ ಆ.15ರಂದು ಫಿನಾಲೆ ನಡೆಯಿತು. ಆರು ಗಾಯಕರು ಫಿನಾಲೆ ಪ್ರವೇಶಿಸಿದ್ದರು. ಅಂತಿಮವಾಗಿ ಉತ್ತರಾಖಂಡ್​ ಮೂಲದ ಪವನ್​ದೀಪ್​ ರಾಜನ್​ ಅವರು ಜಯಶಾಲಿ ಆದರು. ಅರುಣಿತಾ ಕಂಜಿಲಾಲ್ (Arunita Kanjilal) ಹಾಗೂ ಸಾಯಿಲಿ ಕಾಂಬಳೆ (Sayli Kamble) ಅವರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು.

ಇಂಡಿಯನ್​ ಐಡಲ್​ 12ರ ವಿನ್ನರ್​ ಪಟ್ಟ ಪಡೆದ ಪವನ್​ದೀಪ್​ ಅವರಿಗೆ ಆಕರ್ಷಕ ಟ್ರೋಫಿ ಜೊತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ. ಟ್ರೋಫಿ ಮತ್ತು ಚೆಕ್​ ಜೊತೆಗೆ ಅವರು ನಿಂತು ಪೋಸ್​ ನೀಡಿರುವ ಫೋಟೋ ವೈರಲ್​ ಆಗಿದ್ದು, ಎಲ್ಲರಿಂದಲೂ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.

‘ಇಂಡಿಯಲ್​ ಐಡಲ್​ ವೇದಿಕೆಯಲ್ಲಿ ಗಾಯಕರಿಗೆ ತುಂಬ ಗೌರವ ಸಿಗುತ್ತದೆ. ಇಲ್ಲಿ ಸಿಗುವಂತಹ ಅವಕಾಶಗಳಿಗೆ ಹೋಲಿಕೆಯೇ ಇಲ್ಲ. ಹಲವು ಗೀತೆಗಳನ್ನು ಹಾಡುವ ನಮಗೆ ಬೆಸ್ಟ್​ ನಿರ್ಣಾಯಕರು ಮತ್ತು ಅತಿಥಿಗಳಿಂದ ಸೂಕ್ತ ಮಾರ್ಗದರ್ಶನ ಸಿಕ್ಕಿತು. ಗೆಲುವಿಗಾಗಿ ನಾನು ಇಲ್ಲಿಗೆ ಬಂದವನಲ್ಲ. ಕಲಿಕೆಯ ಹಂಬಲದಿಂದ ಈ ಶೋನಲ್ಲಿ ಭಾಗವಹಿಸಿದ್ದೆ’ ಎಂದು ಪವನ್​ದೀಪ್​ ರಾಜನ್​ ಹೇಳಿದ್ದಾರೆ.

ಮೊದಲ ಮತ್ತು ಎರಡನೇ ರನ್ನರ್​ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಕಿಯಾರಾ ಅಡ್ವಾಣಿ, ಸಿದ್ಧಾರ್ಥ್​ ಮಲ್ಹೋತ್ರಾ ಮುಂತಾದವರು ಫಿನಾಲೆಗೆ ಅತಿಥಿಗಳಾಗಿ ಆಗಮಿಸಿದ್ದರು. ಹಿಮೇಶ್​ ರೇಷಮ್ಮಿಯಾ, ಸೋನು ಕಕ್ಕರ್​, ವಿಶಾಲ್ ದದ್ಲಾನಿ, ಅನು ಮಲಿಕ್​ ಜಡ್ಜ್​ ಆಗಿದ್ದರು. ಆದಿತ್ಯ ನಾರಾಯಣ್​, ಭಾರತಿ ಸಿಂಗ್​, ಹರ್ಷಾ ಲಿಂಬಾಚಿಯಾ ಅವರು ಫಿನಾಲೆ ಸಂಚಿಕೆಯ ನಿರೂಪಣೆ ಮಾಡಿದರು.

ಪವನ್​ದೀಪ್​ ಅವರು ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್​​ಗಳ ಗಮನ ಸೆಳೆದಿದ್ದರು ಪವನ್​​ದೀಪ್. ಗಿಟಾರ್​ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್​ದೀಪ್​ಗೆ ಕರಗತವಾಗಿದೆ. ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್​ಗಳಿಗೆ ಇಷ್ಟವಾಗಿದ್ದಾರೆ. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ. ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್​ ಬ್ಯಾಂಡ್​ ಹೊಂದಿದ್ದಾರೆ ಪವನ್​ದೀಪ್​. ಕುಮಾನ್​ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.

ಇದನ್ನೂ ಓದಿ:

‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ