ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ

Jothe Jotheyali serial: ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
Follow us
| Updated By: ಮದನ್​ ಕುಮಾರ್​

Updated on: Aug 16, 2021 | 1:22 PM

ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲ ಸೀರಿಯಲ್​ಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಹಾಗಾಗಿ ಒಂದಕ್ಕಿಂತ ಮತ್ತೊಂದು ಧಾರಾವಾಹಿ (Kannada serials) ಅದ್ದೂರಿಯಾಗಿ ಮೂಡಿಬರುತ್ತಿದೆ. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅದರಲ್ಲೂ ಮದುವೆ ಸನ್ನಿವೇಶದ ಶೂಟಿಂಗ್​ ಇದ್ದರೆ ಅಲ್ಲಿ ಬಜೆಟ್​ಗೆ ಮಿತಿಯೇ ಇಲ್ಲ! ಈಗ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್​ ಕೂಡ ಒಂದು ಅದ್ದೂರಿ ಮದುವೆ ಸಂಭ್ರಮಕ್ಕೆ ಸಜ್ಜಾಗಿದೆ. ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಈ ಧಾರಾವಾಹಿಯಲ್ಲಿ ಮದುವೆ ಚಿತ್ರೀಕರಣ ಸಡಗರದಿಂದ ಸಾಗುತ್ತಿದೆ.

ಅರೂರು ಜಗದೀಶ್​ ನಿರ್ದೇಶನ ಮಾಡುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಅನು ಸಿರಿಮನೆ ಮತ್ತು ಆರ್ಯವರ್ಧನ್​ ಮದುವೆ ಆಗುತ್ತಾರೋ ಇಲ್ಲವೋ ಎಂಬ ಕುತೂಹಲ ಹಲವು ದಿನಗಳಿಂದ ವೀಕ್ಷಕರನ್ನು ಕಾಡುತ್ತಿತ್ತು. ಅಂತೂ ಇಬ್ಬರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನೆರವೇರುತ್ತಿದೆ. ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆಯ ಸೆಟ್​ ಹಾಕಲಾಗಿದೆ. ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ದಾರಿಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಲಾಗಿದೆ. ನೂರಾರು ವಾದ್ಯಗಳನ್ನು ನುಡಿಸಲಾಗುತ್ತಿದೆ. ನಿಜವಾದ ಮದುವೆಯೂ ಕೂಡ ಇಷ್ಟು ಸಡಗರದಲ್ಲಿ ನಡೆಯುವುದು ಅನುಮಾನ ಎಂಬ ರೀತಿಯಲ್ಲಿ ಅದ್ದೂರಿತನ ಮೆರೆಯಲಾಗುತ್ತಿದೆ. ಅನು ಮತ್ತು ಆರ್ಯವರ್ಧನ್​ ಮದುವೆ ಸಂಚಿಕೆಗಳು ಇಂದಿನಿಂದ (ಆ.16) ಪ್ರಸಾರ ಆಗಲಿವೆ.

ಈಗಾಗಲೇ ಬೇರೆ ಬೇರೆ ಧಾರಾವಾಹಿಗಳು ಮದುವೆ ಸನ್ನಿವೇಶಗಳನ್ನು ತುಂಬ ಭಿನ್ನವಾಗಿ ಚಿತ್ರಿಸಿವೆ. ಅವುಗಳಿಗಿಂತಲೂ ಡಿಫರೆಂಟ್​ ಆಗಿ ಅನು-ಆರ್ಯ ಮದುವೆ ದೃಶ್ಯವನ್ನು ಕಟ್ಟಿಕೊಡಲು ‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ಪ್ರಯತ್ನಿಸುತ್ತಿದೆ. ಇಂಥ ಅದ್ದೂರಿ ಸೆಟ್​ನಲ್ಲಿ ಚಿತ್ರೀಕರಣ ಮಾಡುತ್ತಿರುವುದಕ್ಕೆ ಈ ಧಾರಾವಾಹಿ ಕಲಾವಿದರು ತುಂಬ ಖುಷಿ ಆಗಿದ್ದಾರೆ.

‘ಇಷ್ಟು ದಿನಗಳ ಕಾಲ ಜನರು ನೋಡಿದ್ದು ಬರೀ ಟ್ರೇಲರ್​. ಈಗ ನಾವು ಸಿನಿಮಾ ತೋರಿಸುತ್ತಿದ್ದೇವೆ’ ಎನ್ನುವ ಮೂಲಕ ಜನರ ನಿರೀಕ್ಷೆಯನ್ನು ನಿರ್ದೇಶಕರು ಹೆಚ್ಚಿಸಿದ್ದಾರೆ. ಮುಂಬರುವ ಕೆಲವು ದಿನಗಳ ಕಾಲ ಈ ಮದುವೆ ಎಪಿಸೋಡ್​ಗಳು ಬಿತ್ತರ ಆಗಲಿವೆ. ಇದರ ನಡುವೆಯೂ ಏನಾದರೂ ಟ್ವಿಸ್ಟ್​ ಇರಬಹುದಾ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ. ಶಿವಾಜಿ ರಾವ್​ ಜಾದವ್​, ವಿಜಯ ಲಕ್ಷೀ ಸಿಂಗ್​, ಮಾನಸಾ ಮನೋಹರ್​ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ