AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ

Jothe Jotheyali serial: ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
ಆರ್ಯವರ್ಧನ್​-ಅನು ಸಿರಿಮನೆ ಅದ್ದೂರಿ ಮದುವೆ; ಅಬ್ಬಬ್ಬಾ ಎಂಥ ವೈಭೋಗ
TV9 Web
| Edited By: |

Updated on: Aug 16, 2021 | 1:22 PM

Share

ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲ ಸೀರಿಯಲ್​ಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಹಾಗಾಗಿ ಒಂದಕ್ಕಿಂತ ಮತ್ತೊಂದು ಧಾರಾವಾಹಿ (Kannada serials) ಅದ್ದೂರಿಯಾಗಿ ಮೂಡಿಬರುತ್ತಿದೆ. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅದರಲ್ಲೂ ಮದುವೆ ಸನ್ನಿವೇಶದ ಶೂಟಿಂಗ್​ ಇದ್ದರೆ ಅಲ್ಲಿ ಬಜೆಟ್​ಗೆ ಮಿತಿಯೇ ಇಲ್ಲ! ಈಗ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್​ ಕೂಡ ಒಂದು ಅದ್ದೂರಿ ಮದುವೆ ಸಂಭ್ರಮಕ್ಕೆ ಸಜ್ಜಾಗಿದೆ. ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಈ ಧಾರಾವಾಹಿಯಲ್ಲಿ ಮದುವೆ ಚಿತ್ರೀಕರಣ ಸಡಗರದಿಂದ ಸಾಗುತ್ತಿದೆ.

ಅರೂರು ಜಗದೀಶ್​ ನಿರ್ದೇಶನ ಮಾಡುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಅನು ಸಿರಿಮನೆ ಮತ್ತು ಆರ್ಯವರ್ಧನ್​ ಮದುವೆ ಆಗುತ್ತಾರೋ ಇಲ್ಲವೋ ಎಂಬ ಕುತೂಹಲ ಹಲವು ದಿನಗಳಿಂದ ವೀಕ್ಷಕರನ್ನು ಕಾಡುತ್ತಿತ್ತು. ಅಂತೂ ಇಬ್ಬರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನೆರವೇರುತ್ತಿದೆ. ಅಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್​ ಮನೆಗೆ ಅನು ಸಿರಿಮನೆ ಕಾಲಿಡುತ್ತಿದ್ದಾಳೆ. ಈ ಮದುವೆ ಸಮಾರಂಭವನ್ನು ಜೀ ಕನ್ನಡ ವಾಹಿನಿ ತುಂಬ ವೈಭವದಿಂದ ಚಿತ್ರೀಕರಿಸುತ್ತಿದೆ.

ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆಯ ಸೆಟ್​ ಹಾಕಲಾಗಿದೆ. ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ದಾರಿಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಲಾಗಿದೆ. ನೂರಾರು ವಾದ್ಯಗಳನ್ನು ನುಡಿಸಲಾಗುತ್ತಿದೆ. ನಿಜವಾದ ಮದುವೆಯೂ ಕೂಡ ಇಷ್ಟು ಸಡಗರದಲ್ಲಿ ನಡೆಯುವುದು ಅನುಮಾನ ಎಂಬ ರೀತಿಯಲ್ಲಿ ಅದ್ದೂರಿತನ ಮೆರೆಯಲಾಗುತ್ತಿದೆ. ಅನು ಮತ್ತು ಆರ್ಯವರ್ಧನ್​ ಮದುವೆ ಸಂಚಿಕೆಗಳು ಇಂದಿನಿಂದ (ಆ.16) ಪ್ರಸಾರ ಆಗಲಿವೆ.

ಈಗಾಗಲೇ ಬೇರೆ ಬೇರೆ ಧಾರಾವಾಹಿಗಳು ಮದುವೆ ಸನ್ನಿವೇಶಗಳನ್ನು ತುಂಬ ಭಿನ್ನವಾಗಿ ಚಿತ್ರಿಸಿವೆ. ಅವುಗಳಿಗಿಂತಲೂ ಡಿಫರೆಂಟ್​ ಆಗಿ ಅನು-ಆರ್ಯ ಮದುವೆ ದೃಶ್ಯವನ್ನು ಕಟ್ಟಿಕೊಡಲು ‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ಪ್ರಯತ್ನಿಸುತ್ತಿದೆ. ಇಂಥ ಅದ್ದೂರಿ ಸೆಟ್​ನಲ್ಲಿ ಚಿತ್ರೀಕರಣ ಮಾಡುತ್ತಿರುವುದಕ್ಕೆ ಈ ಧಾರಾವಾಹಿ ಕಲಾವಿದರು ತುಂಬ ಖುಷಿ ಆಗಿದ್ದಾರೆ.

‘ಇಷ್ಟು ದಿನಗಳ ಕಾಲ ಜನರು ನೋಡಿದ್ದು ಬರೀ ಟ್ರೇಲರ್​. ಈಗ ನಾವು ಸಿನಿಮಾ ತೋರಿಸುತ್ತಿದ್ದೇವೆ’ ಎನ್ನುವ ಮೂಲಕ ಜನರ ನಿರೀಕ್ಷೆಯನ್ನು ನಿರ್ದೇಶಕರು ಹೆಚ್ಚಿಸಿದ್ದಾರೆ. ಮುಂಬರುವ ಕೆಲವು ದಿನಗಳ ಕಾಲ ಈ ಮದುವೆ ಎಪಿಸೋಡ್​ಗಳು ಬಿತ್ತರ ಆಗಲಿವೆ. ಇದರ ನಡುವೆಯೂ ಏನಾದರೂ ಟ್ವಿಸ್ಟ್​ ಇರಬಹುದಾ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ. ಶಿವಾಜಿ ರಾವ್​ ಜಾದವ್​, ವಿಜಯ ಲಕ್ಷೀ ಸಿಂಗ್​, ಮಾನಸಾ ಮನೋಹರ್​ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ