AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali: ಆರ್ಯವರ್ಧನ್ ನಡೆಯ ಬಗ್ಗೆ ಎಲ್ಲರಿಗೂ ಮೂಡಿದೆ ಅನುಮಾನ; ಹೊರ ಬರಲಿದೆ ಅಸಲಿ ವಿಚಾರ?

Jothe Jotheyali Serial Update: ಅನು ರೇಗಿದ್ದು ನೋಡಿ ಸಂಜುಗೆ ಬೇಸರ ಆಗಿದೆ. ಈ ಕಾರಣಕ್ಕೆ ಆತ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಆಗ ಆತನಿಗೆ ಅನು ಎದುರಾಗಿದ್ದಾಳೆ.

Jothe Jotheyali: ಆರ್ಯವರ್ಧನ್ ನಡೆಯ ಬಗ್ಗೆ ಎಲ್ಲರಿಗೂ ಮೂಡಿದೆ ಅನುಮಾನ; ಹೊರ ಬರಲಿದೆ ಅಸಲಿ ವಿಚಾರ?
ಜೊತೆ ಜೊತೆಯಲಿ ಧಾರಾವಾಹಿ
TV9 Web
| Edited By: |

Updated on: Dec 09, 2022 | 6:30 AM

Share

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ವೈದ್ಯರನ್ನು ಭೇಟಿ ಮಾಡಿದ್ದಾಳೆ. ಈ ವೇಳೆ ಆರ್ಯವರ್ಧನ್ ಸಾವಿನ ವಿಚಾರ ಸಾಕಷ್ಟು ಅನುಮಾನ ಮೂಡಿಸಿದೆ. ಆರ್ಯವರ್ಧನ್ ಸತ್ತಿಲ್ಲ ಎನ್ನುವ ಬಗ್ಗೆ ಆಕೆಗೆ ಸಾಕಷ್ಟು ಗೊಂದಲಗಳು ಮೂಡಿವೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯವರು ಮರಣಪತ್ರ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಇದರಿಂದ ಅನುಗೆ ಹುಟ್ಟಿರುವ ಅನುಮಾನ ಹೆಚ್ಚಿದೆ. ಮತ್ತೊಂದು ಕಡೆ ಅನುನ ಹುಡುಕಿ ಸಂಜು ಹೋಗಿದ್ದಾನೆ. ಸಂಜುನ ಹುಡುಕಿ ಆರಾಧನಾ ಹೋಗಿದ್ದಾಳೆ.

ಸಂಜು ನಡೆಯ ಬಗ್ಗೆಯೇ ಮೂಡಿದೆ ಅನುಮಾನ:

ರಾಜ ನಂದಿನಿ ವಿಲಾಸಕ್ಕೆ ಸಂಜು ಬಂದಿದ್ದು, ಆತ ಎಲ್ಲರ ಜತೆ ಬೆರೆತಿದ್ದು, ಇದೇ ಸಂದರ್ಭದಲ್ಲಿ ಪ್ರಿಯದರ್ಶಿನಿ ಬೇರೆ ರೀತಿಯಲ್ಲಿ ನಡೆದುಕೊಂಡಿದ್ದು ಎಲ್ಲವೂ ಅನುಮಾನ ಹುಟ್ಟು ಹಾಕಿದೆ. ಅನು ಸಿರಿಮನೆಗೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿವೆ. ಹರ್ಷವರ್ಧನ್ ಪತ್ನಿ ಮಾನ್ಸಿ ಕೂಡ ಅನುಮಾನದಲ್ಲಿ ಇದ್ದಾಳೆ. ಸಂಜು ಇಲ್ಲಿಗೆ ಬಂದಿರುವ ಬಗ್ಗೆ ಆಸ್ತಿ ಹೊಡೆಯುವ ಆಲೋಚನೆ ಇರಬಹುದು ಎಂಬುದು ಆಕೆಯ ಅನುಮಾನ.

ಶಾರದಾದೇವಿ ಬಳಿ ಬಂದು ದುಃಖ ತೋಡಿಕೊಂಡ ಝೇಂಡೆ:

ವರ್ಧನ್ ಕಂಪನಿ ಒಳಗೆ ಬರಬೇಕು ಎಂಬುದು ಝೇಂಡೆ ಪ್ಲ್ಯಾನ್. ಇದಕ್ಕಾಗಿ ಮೀರಾ ಹೆಗಡೆಯನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಆರ್ಯವರ್ಧನ್ ಬದುಕಿದ್ದಾನೆ ಎಂದು ಆಕೆಯ ಬಳಿ ಹೇಳಿದ್ದಾನೆ. ಈ ವಿಚಾರವನ್ನು ಮಾತನಾಡಲು ರಾಜ ನಂದಿನಿ ವಿಲಾಸಕ್ಕೆ ಬಂದಿದ್ದಾನೆ. ಶಾರದಾದೇವಿ ಒಪ್ಪಿಗೆ ಪಡೆಯಬೇಕು ಎಂಬುದು ಆತನ ಉದ್ದೇಶ.

ಇದನ್ನೂ ಓದಿ: Jothe Jotheyali: ಸಂಜುಗೆ ಹಳೇ ನೆನಪು ಮರಳಿಸಲು ಝೇಂಡೆ ಪ್ರಯತ್ನ; ಆರ್ಯನ ಸಾವಿನ ರಹಸ್ಯ ಬೆನ್ನತ್ತಿ ಹೊರಟ ಅನು

ದಾರಿ ಮಧ್ಯದಲ್ಲಿ ಹರ್ಷ ಭೇಟಿ ಆಗಿದ್ದಾನೆ. ಇಲ್ಲಿಗೆ ಬಂದಿರುವ ಹಿಂದಿನ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದ್ದಾನೆ ಹರ್ಷ. ‘ಶಾರದಾದೇವಿ ಅವರನ್ನು ಭೇಟಿ ಆಗಬೇಕಿತ್ತು. ಮತ್ತೆ ಕಚೇರಿಗೆ ಬರುತ್ತೀರಾ ಎಂದು ಮೀರಾ ಹೆಗಡೆ ಕೇಳಿದ್ದಾಳೆ. ಕೆಲಸ ಮಾಡುವ ಜೀವ. ಸುಮ್ಮನೆ ಕುಳಿತು ನನಗೂ ಬೇಸರ ಆಗಿದೆ. ಈ ಕಾರಣಕ್ಕೆ ಶಾರದಾ ದೇವಿ ಒಪ್ಪಿಗೆ ಕೇಳಲು ಬಂದಿದ್ದೇನೆ’ ಎಂದು ಹೇಳಿದ್ದಾನೆ. ಜತೆಗೆ ಹರ್ಷನಿಗೆ ಬೈದುಕೊಂಡಿದ್ದಾನೆ. ‘ನನ್ನನ್ನು ಏಕವಚನದಲ್ಲಿ ಬಯ್ಯುತ್ತೀರಾ? ನಾನು ಒಮ್ಮೆ ವರ್ಧನ್ ಕಂಪನಿ ಒಳಗೆ ಸೇರಲಿ. ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದಾನೆ.

ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್

ಶಾರದಾ ದೇವಿ ಬಳಿ ಬಂದ ಝೇಂಡೆ ತನ್ನ ಮನದ ಮಾತನ್ನು ಹೇಳಿಕೊಂಡಿದ್ದಾನೆ. ಆರ್ಯನನ್ನು ಕಳೆದುಕೊಂಡು ತಾನೂ ಬೇಸರಕ್ಕೆ ಒಳಗಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದಾನೆ. ವರ್ಧನ್ ಕಂಪನಿಯ ಎಲ್ಲ ಆಸ್ತಿಯನ್ನು ತಾನೇ ಹೊಡೆಯಬೇಕು ಎಂಬ ಆಲೋಚನೆಯಲ್ಲಿ ಝೇಂಡೆ ಇದ್ದಾನೆ. ಇದಕ್ಕಾಗಿ ಆತ ಪ್ಲ್ಯಾನಿಂಗ್ ಮಾಡುತ್ತಿದ್ದಾನೆ.

ಸಂಜು ವಿರುದ್ಧ ರೇಗಿದ ಅನು

ಸಂಜುಗೆ ಅನು ಬಗ್ಗೆ ಕಾಳಜಿ ಹೆಚ್ಚಿದೆ. ಆಕೆ ಎಲ್ಲಿ ಹೋಗುತ್ತಾಳೋ ಅಲ್ಲೆಲ್ಲ ಹಿಂಬಾಲಿಸುಕೊಂಡು ಸಂಜು ಹೋಗುತ್ತಿದ್ದಾನೆ. ಆಗಲೂ ಹಾಗೆಯೇ ಆಗಿದೆ. ಅನು ಪತಿಯ ಸಾವಿನ ರಹಸ್ಯ ಹುಡುಕಿ ಸವದತ್ತಿಗೆ ಹೋಗಿದ್ದಳು. ಅಲ್ಲಿಗೂ ಸಂಜು ಬಂದಿದ್ದಾನೆ. ಆಕೆಗೆ ಕರೆ ಮಾಡಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಅನು ಸಿಟ್ಟಾಗಿದ್ದಾಳೆ. ಜತೆಗೆ ಸಂಜುಗೆ ಬಾಯಿಗೆ ಬಂದಂತೆ ಬೈದಿದ್ದಾಳೆ.

ಅನು ರೇಗಿದ್ದು ನೋಡಿ ಸಂಜುಗೆ ಬೇಸರ ಆಗಿದೆ. ಈ ಕಾರಣಕ್ಕೆ ಆತ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಆಗ ಆತನಿಗೆ ಅನು ಎದುರಾಗಿದ್ದಾಳೆ. ಸಂಜು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ ಅನುಗೆ ಶಾಕ್ ಆಗಿದೆ. ಆಕೆ ಕರೆದು ಸಂಜುಗೆ ಬೈದಿದ್ದಾಳೆ. ಅಲ್ಲಿಗೆ ಆರಾಧನಾ ಕೂಡ ಬಂದಿದ್ದಾಳೆ. ಸಂಜು ಹಾಗೂ ಅನು ನಿಂತು ಮಾತನಾಡುವುದನ್ನು ನೋಡಿ ಆರಾಧನಾ ಬೈದಿದ್ದಾಳೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ