AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್ಯವರ್ಧನ್​ ಇತಿಹಾಸ ಸಂಪೂರ್ಣವಾಗಿ ಗೊತ್ತು’; ಮೋಸದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅನು ಸಿರಿಮನೆ

ಸಂಜು ಕಚೇರಿಯಲ್ಲಿರುವ ಫೈಲ್​ಗಳನ್ನು ಪರಿಶೀಲಿಸುತ್ತಿದ್ದಾನೆ. 22 ವರ್ಷದ ಅಕೌಂಟ್​ ಅನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದಾನೆ ಸಂಜು. ಇದು ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖರಿಗೆ ಅಚ್ಚರಿ ಮೂಡಿಸಿದೆ.

‘ಆರ್ಯವರ್ಧನ್​ ಇತಿಹಾಸ ಸಂಪೂರ್ಣವಾಗಿ ಗೊತ್ತು’; ಮೋಸದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅನು ಸಿರಿಮನೆ
ಅನು-ಸಂಜು
TV9 Web
| Edited By: |

Updated on:Oct 20, 2022 | 9:07 AM

Share

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್​​ಗೆ ನೆನಪೆಲ್ಲವೂ ಸಂಪೂರ್ಣವಾಗಿ ಮರೆತು ಹೋಗಿದೆ. ತನಿಖೆ ದೃಷ್ಟಿಯಿಂದ ಆತ ಯಾರು ಎಂಬ ವಿಚಾರವನ್ನು ಮುಚ್ಚಿಡಲಾಗಿದೆ. ಸಂಜು ತಾಯಿ, ಪೊಲೀಸರು ಹಾಗೂ ವೈದ್ಯರಿಗೆ ಬಿಟ್ಟು ಮತ್ಯಾರಿಗೂ ಸಂಜುನೇ ಆರ್ಯವರ್ಧನ್ ಎಂಬ ವಿಚಾರ ಗೊತ್ತಿಲ್ಲ. ಆದರೆ, ಸಂಜು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಅನುಮಾನ ಮೂಡಿಸುತ್ತಿದೆ. ಆರ್ಯವರ್ಧನ್ (Aryavardhan) ರೀತಿಯಲ್ಲೇ ಸಂಜು ನಡೆದುಕೊಳ್ಳುತ್ತಿದ್ದಾನೆ. ಈ ವಿಚಾರದಲ್ಲಿ ಅನೇಕರಿಗೆ ಡೌಟ್ ಶುರುವಾಗಿದೆ. ರಾಜ ನಂದಿನಿ ವಿಲಾಸಕ್ಕೆ ಸಂಜು ಬಂದಿದ್ದೇಕೆ ಎಂಬ ಬಗ್ಗೆಯೂ ಕೆಲವರಲ್ಲಿ ಪ್ರಶ್ನೆ ಮೂಡಿದೆ.

ಸಂಜು ಕಚೇರಿಗೆ ಕೆಲಸಕ್ಕೆ ತೆರಳುತ್ತಿದ್ದಾನೆ. ಅದೂ ಆರ್ಯವರ್ಧನ್ ಬಾಸ್ ಆಗಿದ್ದ ಕಚೇರಿಗೆ. ಈ ಕಾರಣಕ್ಕೆ ಒಂದಷ್ಟು ನೆನಪುಗಳು ಆತನಿಗೆ ಬಿಟ್ಟೂ ಬಿಡದೇ ಕಾಡುತ್ತಿವೆ. ಈ ಕಂಪನಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತೆ, ಅಲ್ಲಿರುವ ಎಲ್ಲರೂ ಪರಿಚಯವಿದ್ದಂತೆ ಸಂಜುಗೆ ಭಾಸವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಜುಗೆ ಅನುನ ಕಂಡರೆ ಸಾಕಷ್ಟು ಅಕ್ಕರೆ ಹಾಗೂ ಪ್ರೀತಿ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೂ ತಿಳಿಯುತ್ತಿಲ್ಲ.

ಅನುನ ಭೇಟಿ ಮಾಡಿದಾಗೆಲ್ಲ ಸಂಜುಗೆ ಮೈಯಲ್ಲಿ ಪುಳಕವಾಗುತ್ತಿದೆ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೂ ತಿಳಿದಿಲ್ಲ. ಇತ್ತೀಚೆಗೆ ಅನುಗೆ ಉಡಿ ತುಂಬುವ ಕಾರ್ಯ ನಡೆದಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಸಂಜು ಆಗಮಿಸಿ ಅನುಗೆ ಅಕ್ಷತೆ ಹಾಕಿ ಹಾರೈಸಿದ್ದಾನೆ. ಮತ್ತೊಂದು ಅಚ್ಚರಿ ಕೂಡ ನಡೆದಿದೆ.

ಸಂಜು ಕಚೇರಿಯಲ್ಲಿರುವ ಫೈಲ್​ಗಳನ್ನು ಪರಿಶೀಲಿಸುತ್ತಿದ್ದಾನೆ. 22 ವರ್ಷದ ಅಕೌಂಟ್​ ಅನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದಾನೆ ಸಂಜು. ಇದು ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖರಿಗೆ ಅಚ್ಚರಿ ಮೂಡಿಸಿದೆ. ಸಂಜು ಬಳಿಯಿಂದ ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಸಂಜು ಕೆಲ ಫೈಲ್ ಹಿಡಿದು ಅನು ಇರುವ ಕಮಲಮ್ಮನ ವಠಾರಕ್ಕೆ ಬಂದಿದ್ದಾನೆ. ಆಗ ಅನುಗೆ ಲೇಡಿ ಆರ್ಯವರ್ಧನ್ ಎಂದು ಕರೆದಿದ್ದಾನೆ. ಆರ್ಯವರ್ಧನ್ ಕೂಡ ಅನುಗೆ ಲೇಡಿ ಆರ್ಯವರ್ಧನ್ ಎಂದೇ ಕರೆಯುತ್ತಿದ್ದ.

ಆ ಬಳಿಕ ಸಂಜು ಕಂಪನಿಯಲ್ಲಾದ ಮೋಸಗಳ ಬಗ್ಗೆ ಹೇಳಿದ್ದಾನೆ. ‘ಕಳೆದ 22 ವರ್ಷಗಳಿಂದ ಕಂಪನಿಯಲ್ಲಿ ಸಾಕಷ್ಟು ಮೋಸಗಳು ನಡೆದಿವೆ. ಲೆಕ್ಕದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಗೊತ್ತಿದ್ದೂ ಎಲ್ಲರೂ ಸುಮ್ಮನಿದ್ದಿದ್ದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಸಂಜು ಹೇಳುತ್ತಿದ್ದಂತೆ ಅನು ಸಿಟ್ಟಾಗಿದ್ದಾಳೆ. ಇನ್ಮುಂದೆ ಈ ವಿಚಾರ ಹೇಳದಂತೆ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾಳೆ.

ಆತ ಹೊರ ಹೋಗುತ್ತಿದ್ದಂತೆ ಅನುಗೆ ಪುಷ್ಪಾ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ‘ಅದೇ ಸತ್ಯ ಅಮ್ಮ. ಆರ್ಯ ಸರ್​ ಇದೆಲ್ಲವನ್ನೂ ಮಾಡಿದ್ದರು. ಅವರ ಇತಿಹಾಸ ನನಗೆ ಮಾತ್ರ ಗೊತ್ತು. ಅವರ ಒಳ್ಳೆಯ ಹಾಗೂ ಕೆಟ್ಟ ಮುಖ ಎರಡೂ ನನಗೆ ಗೊತ್ತು. ಇದನ್ನು ನಾನೇ ಹ್ಯಾಂಡಲ್​ ಮಾಡಬೇಕಿದೆ’ ಎಂದು ಅನು ಹೇಳಿದ್ದಾಳೆ.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಭಾರೀ ಅಪಾಯದ ಮುನ್ಸೂಚನೆ ನೀಡಿದ ಆರ್ಯವರ್ಧನ್​

ಅನುಗೆ ಪ್ರತೀ ಹಂತದಲ್ಲೂ ಸಂಜುನ ನೋಡಿದಾಗ ಆರ್ಯವರ್ಧನ್​ನ ನೆನಪಾಗುತ್ತಿದೆ. ಇತ್ತೀಚೆಗೆ ಸಂಜುನ ಸಂದರ್ಶನ ಮಾಡುವಾಗ ಬಿಸ್ನೆಸ್ ಮಾಡೋಕೆ ಮುಖ್ಯವಾಗಿ ಬೇಕಾಗಿದ್ದು ಏನು ಎಂದು ಕೇಳಲಾಗಿತ್ತು. ಇದಕ್ಕೆ ಆತನ ಬಾಯಿಂದ ‘ನಂಬಿಕೆ’ ಎಂಬ ಉತ್ತರ ಬಂತು. ಆರ್ಯವರ್ಧನ್ ಕೂಡ ಇದೇ ಮಾತನ್ನು ಹೇಳುತ್ತಿದ್ದ. ಸಂಜು ಹಾಗೂ ಆರ್ಯವರ್ಧನ್​ಗೆ ಹೋಲಿಕೆ ಹಾಗೂ ಸಾಮ್ಯತೆ ಕಾಣುತ್ತಿರುವುದರಿಂದ ಅನುಗೆ ಶಾಕ್​ ಆಗಿದೆ. ಸಂಜು ಕನಸಿನಲ್ಲೂ ಬಂದು ಕಾಡುತ್ತಿದ್ದಾನೆ.

ಶ್ರೀಲಕ್ಷ್ಮಿ ಎಚ್.

Published On - 7:30 am, Thu, 20 October 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್