AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷದ ಅಕೌಂಟ್​ನ ಒಂದೇ ದಿನದಲ್ಲಿ ನೋಡಿ ಮುಗಿಸಿದ ಸಂಜು; ಮೀರಾಗೆ ಹೆಚ್ಚಿತು ಅನುಮಾನ

ಬಿಸ್ನೆಸ್ ಮಾಡೋಕೆ ಏನು ಮುಖ್ಯ ಎಂದು ಕೇಳಿದಾಗ ಸಂಜು ‘ನಂಬಿಕೆ’ ಎಂದು ಹೇಳಿದ್ದ. ಆರ್ಯವರ್ಧನ್ ಕೂಡ ಇದೇ ರೀತಿ ಮಾತನಾಡುತ್ತಿದ್ದ. ಈ ವಿಚಾರ ಅನುನ ಅತಿಯಾಗಿ ಕಾಡಿದೆ. ಕನಸಿನಲ್ಲೂ ಸಂಜು ಬಂದಿದ್ದಾನೆ.

22 ವರ್ಷದ ಅಕೌಂಟ್​ನ ಒಂದೇ ದಿನದಲ್ಲಿ ನೋಡಿ ಮುಗಿಸಿದ ಸಂಜು; ಮೀರಾಗೆ ಹೆಚ್ಚಿತು ಅನುಮಾನ
ಆರ್ಯವರ್ಧನ್
TV9 Web
| Edited By: |

Updated on: Oct 19, 2022 | 7:30 AM

Share

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ (Jothe Jotheyali Serial) ಹೊಸ ಆರ್ಯವರ್ಧನ್ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನ ಮುಖಚರ್ಯೆ ಸಂಪೂರ್ಣವಾಗಿ ಬದಲಾಗಿದ್ದು, ಆತನೇ ಆರ್ಯವರ್ಧನ್ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಆತ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ವಿಚಿತ್ರ ಎನಿಸುತ್ತಿದೆ. ಆರ್ಯವರ್ಧನ್ (Aryavardhan) ರೀತಿಯೇ ಸಂಜು ನಡೆದುಕೊಳ್ಳುತ್ತಿರುವುದು ಹಲವರಿಗೆ ಅನುಮಾನ ಹುಟ್ಟಿಸಿದೆ. ಈಗ ಸಂಜು ನಡೆದುಕೊಂಡ ರೀತಿಗೆ ಪ್ರಮುಖರೇ ಬೆಚ್ಚಿ ಬಿದ್ದಿದ್ದಾರೆ. ಸೆಪ್ಟೆಂಬರ್ 18ರ ಎಪಿಸೋಡ್​ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಮೀರಾಗೆ ಅಚ್ಚರಿ ಮೂಡಿಸಿದ ಸಂಜು

ಆರ್ಯವರ್ಧನ್ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಸಂಜು ನೇಮಕಗೊಂಡಿದ್ದಾನೆ. ಸ್ವತಃ ಅನು ಸಂದರ್ಶನ ಮಾಡಿ ಆತನನ್ನು ಕಂಪನಿಗೆ ಸೇರ್ಪಡೆ ಮಾಡಿಕೊಂಡಿದ್ದಾಳೆ. ಮೊದಲ ದಿನವೇ ಸಂಜು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಕಂಪನಿಯ 22 ವರ್ಷದ ಅಕೌಂಟ್ ಅನ್ನು ಸಂಜುಗೆ ನೀಡಲಾಗಿತ್ತು. ಈ ಕಂಪನಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಕೇವಲ ಒಂದೇ ದಿನದಲ್ಲಿ ಸಂಜು ಇದನ್ನು ಪತ್ತೆ ಹಚ್ಚಿದ್ದಾನೆ. ಅಷ್ಟೇ ಅಲ್ಲ, 22 ವರ್ಷಗಳ ಅಕೌಂಟ್​ ಅನ್ನು ಸಂಪೂರ್ಣವಾಗಿ ನೋಡಿ ಮುಗಿಸಿದ್ದಾನೆ.

ಇದನ್ನೂ ಓದಿ
Image
ಸಂಜು ಉತ್ತರ ಕೇಳಿ ಅನು ಸಿರಿಮನೆಗೆ ನೆನಪಾದ ಆರ್ಯವರ್ಧನ್​; ಸಂದರ್ಶನದ ವೇಳೆ ಬಂತು ಅಚ್ಚರಿಯ ಉತ್ತರ
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ

ಈ ವಿಚಾರ ಆರ್ಯವರ್ಧನ್​ ಪಿ.ಎ. ಆಗಿದ್ದ ಮೀರಾ ಹೆಗಡೆಗೆ ಅಚ್ಚರಿ ಮೂಡಿಸಿದೆ. ಒಂದೇ ದಿನದಲ್ಲಿ ಈ ರೀತಿ ಮಾಡೋಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೀರಾಗೆ ಮೂಡಿದೆ. ಈ ವಿಚಾರವನ್ನು ಆಕೆ ಹರ್ಷ ಹಾಗೂ ಮಾನ್ಸಿ ಬಳಿಯೂ ಚರ್ಚೆ ಮಾಡಿದ್ದಾಳೆ. ಈ ಮಾತನ್ನು ಕೇಳಿ ಹರ್ಷ ಶಾಕ್ ಆಗಿದ್ದಾನೆ. ಅಲ್ಲದೆ, ಸಂಜು ಬಗ್ಗೆ ಆತನಿಗೆ ವಿಶೇಷ ಗೌರವ ಮೂಡಿದೆ. ‘ಆತ ಸಾಮಾನ್ಯದವನಲ್ಲವೇ ಅಲ್ಲ’ ಎಂದು ಆತ ಮೆಚ್ಚುಗೆಯ ಮಾತನ್ನು ಆಡಿದ್ದಾನೆ.

ಅನುಗೆ ಬೀಳುತ್ತಿದೆ ಸಂಜು ಕನಸು

ಆರ್ಯವರ್ಧನ್​ನ ಅನು ಅತಿಯಾಗಿ ಪ್ರೀತಿಸಿದ್ದಳು. ಈಗ ಆತ ಇಲ್ಲ ಎಂಬ ನೋವು ಆಕೆಯನ್ನು ಅತಿಯಾಗಿ ಕಾಡುತ್ತಿದೆ. ಹೀಗಿರುವಾಲೇ ಅನುನ ಸಂಜು ಪದೇಪದೇ ಕಾಡುತ್ತಿದ್ದಾನೆ. ಆತ ಆರ್ಯವರ್ಧನ್ ರೀತಿಯೇ ನಡೆದುಕೊಳ್ಳುತ್ತಿದ್ದಾನೆ ಎಂಬುದು ಅನುಗೆ ಖಚಿತವಾಗಿದೆ. ಆತನ ಸಂದರ್ಶನ ಮಾಡುವಾಗ ಬಿಸ್ನೆಸ್ ಮಾಡೋಕೆ ಏನು ಮುಖ್ಯ ಎಂದು ಕೇಳಿದಾಗ ಸಂಜು ‘ನಂಬಿಕೆ’ ಎಂದು ಹೇಳಿದ್ದ. ಆರ್ಯವರ್ಧನ್ ಕೂಡ ಇದೇ ರೀತಿ ಮಾತನಾಡುತ್ತಿದ್ದ. ಈ ವಿಚಾರ ಅನುನ ಅತಿಯಾಗಿ ಕಾಡಿದೆ. ಕನಸಿನಲ್ಲೂ ಸಂಜು ಬಂದಿದ್ದಾನೆ. ಆ ಬಳಿಕ ಅನು ಭಯದಿಂದ ಎಚ್ಚೆತ್ತುಕೊಂಡಿದ್ದಾಳೆ. ಇನ್ಮುಂದೆ ಸಂಜುವಿನಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಅನು ಬಂದಿದ್ದಾಳೆ. ಈ ಮಧ್ಯೆ ಸಂಜುಗೆ ಆರ್ಯವರ್ಧನ್ ಕನಸು ಬೀಳುತ್ತಿದೆ. ರಾತ್ರಿ ವೇಳೆ ಸಂಜು ಎದ್ದು ಆರ್ಯವರ್ಧನ್ ರೂಂಗೆ ಹೋಗಿ ಬಂದಿದ್ದಾನೆ.

ಝೇಂಡೆಗೆ ಮೂಡಿದೆ ಅನುಮಾನ

ಸಂಜು ತಾಯಿ ಪ್ರಿಯಾ ಮನೆಗೆ ಝೇಂಡೆ ತೆರಳಿದ್ದಾನೆ. ಆತನನ್ನು ಪ್ರಿಯಾ ಅದ್ದೂರಿಯಾಗಿ ಸ್ವಾಗತಿಸಿದ್ದಾಳೆ. ಸಂಜು ಎಂದು ಹೇಳಿಕೊಂಡು ಬಂದ ವ್ಯಕ್ತಿ ಹಿಂದೆ ಏನೋ ಅಡಗಿದೆ ಎಂಬ ಅನುಮಾನ ಝೇಂಡೆಯನ್ನು ಅತಿಯಾಗಿ ಕಾಡಿತ್ತು. ಈ ಕಾರಣಕ್ಕೆ ಅದರ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದಲೇ ಈ ಮನೆಗೆ ಬಂದಿದ್ದಾನೆ. ಝೇಂಡೆ ಹಾಗೂ ಆರ್ಯವರ್ಧನ್ ಒಟ್ಟಾಗಿ ಬೆಳೆದವರು. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಈ ಕಾರಣಕ್ಕೆ ಝೇಂಡೆಯನ್ನು ಕಂಡು ಪ್ರಿಯಾ ಭಾವುಕಳಾಗಿದ್ದಾಳೆ. ಆತನಿಗೆ ಎಲ್ಲಾ ಸತ್ಯವನ್ನು ಹೇಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ, ಇದನ್ನು ಸಂಜು ತಂದೆ ತಡೆದಿದ್ದಾರೆ.

ಶ್ರೀಲಕ್ಷ್ಮಿ ಎಚ್.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?