AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲ ಆಸ್ತಿಯನ್ನೂ ಭುವಿಗೆ ಬರೆದಿದ್ದೇನೆ’; ಹರ್ಷನ ಎದುರು ನಿಜ ವಿಚಾರ ರಿವೀಲ್ ಮಾಡಿದ ಅಮ್ಮಮ್ಮ

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ತಾಯಿ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಇದನ್ನು ಲಕೋಟೆಯಲ್ಲಿ ಬರೆದು ಇಟ್ಟಿದ್ದಾಳೆ. ಆದರೆ, ಈ ವಿಚಾರ ಸದ್ಯಕ್ಕೆ ರಿವೀಲ್ ಆಗಿರಲಿಲ್ಲ.

‘ಎಲ್ಲ ಆಸ್ತಿಯನ್ನೂ ಭುವಿಗೆ ಬರೆದಿದ್ದೇನೆ’; ಹರ್ಷನ ಎದುರು ನಿಜ ವಿಚಾರ ರಿವೀಲ್ ಮಾಡಿದ ಅಮ್ಮಮ್ಮ
ಹರ್ಷ-ರತ್ನಮಾಲಾ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jul 27, 2022 | 5:17 PM

Share

‘ಕನ್ನಡತಿ’ ಧಾರಾವಾಹಿಯ (Kannadathi Serial) ಕಥೆ ಹೊಸ ರೀತಿಯಲ್ಲಿ ಸಾಗುತ್ತಿದೆ. ಹರ್ಷ ಹಾಗೂ ಭುವಿ ಪರಸ್ಪರ ಪ್ರೀತಿಸಿ ಮದುವೆ ಆದವರು. ಇವರಿಬ್ಬರ ಮದುವೆಯಿಂದ ವಿಲನ್ ಸಾನಿಯಾ ಹಾಗೂ ವರುಧಿನಿ ವಿಚಲಿತಗೊಂಡಿದ್ದಾರೆ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಈ ಮಧ್ಯೆ, ಮಹತ್ವದ ಘಟನೆ ಒಂದು ನಡೆಯುವ ಸೂಚನೆ ಸಿಕ್ಕಿದೆ. ಭುವಿಯ ಹಸರಿಗೆ ಆಸ್ತಿ ಬರೆಯಲಾಗಿದೆ ಎಂಬ ವಿಚಾರವನ್ನು ರತ್ನಮಾಲಾ ರಿವೀಲ್ ಮಾಡಿದ್ದಾಳೆ. ಇದು ಕನಸೋ ಅಥವಾ ನಿಜವೋ ಎಂಬುದಷ್ಟೇ ಸದ್ಯದ ಕುತೂಹಲ.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ತಾಯಿ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಇದನ್ನು ಲಕೋಟೆಯಲ್ಲಿ ಬರೆದು ಇಟ್ಟಿದ್ದಾಳೆ. ಆದರೆ, ಈ ವಿಚಾರ ಸದ್ಯಕ್ಕೆ ರಿವೀಲ್ ಆಗಿರಲಿಲ್ಲ. ರತ್ನಮಾಲಾ ಹಾಗೂ ಅವಳ ಮನೆಯ ವಕೀಲನಿಗೆ ಮಾತ್ರ ಈ ವಿಚಾರ ತಿಳಿದಿದೆ. ಈ ವಿಷಯ ಯಾವಾಗ ರಿವೀಲ್ ಆಗಲಿದೆ ಎಂದು ಫ್ಯಾನ್ಸ್ ಕಾದಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.

ರತ್ನಮಾಲಾ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಳೆ. ಅವಳು ಕಂಬ್ಯಾಕ್ ಮಾಡಬೇಕು ಎಂಬುದು ಕುಟುಂಬದವರು ಹಾಗೂ ಧಾರಾವಾಹಿ ವೀಕ್ಷಕರ ಕೋರಿಕೆ. ಶೀಘ್ರದಲ್ಲೇ ರತ್ನಮಾಲಾ ಮರಳಲಿದ್ದಾಳೆ ಎನ್ನಲಾಗುತ್ತಿದೆ. ಒಂದು ದೊಡ್ಡ ಟ್ವಿಸ್ಟ್ ನೀಡಿ ಆಕೆ ಕಂಬ್ಯಾಕ್ ಮಾಡುವ ಸೂಚನೆ ಸಿಕ್ಕಿದೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಭುವಿಗೆ ತೊಂದರೆ ಕೊಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾಳೆ ಸಾನಿಯಾ. ಭುವಿ ಅವಳ ಕಾಟ ತಾಳಲಾರದೆ ಕೆಲಸವನ್ನೂ ಕೂಡ ಬಿಟ್ಟಿದ್ದಾಳೆ. ಈಗ ಮಾಲಾ ಸಂಸ್ಥೆಗೆ ಭುವಿ ಎಂಡಿ ಆಗುವ ಸೂಚನೆ ಸಿಕ್ಕಿದೆ. ಅಮ್ಮಮ್ಮನ್ನು ಹಿಂಬದಿಯಿಂದ ತೋರಿಸಲಾಗಿದೆ.

ಇದನ್ನೂ ಓದಿ: ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ

‘ಹರ್ಷ ಹೇಗಿದ್ದೀಯಾ? ನಾನು ಬೇಗ ಬಂದು ಬಿಡ್ತೀನಿ. ಒಂದು ಕೆಲಸ ಬೇಗ ಆಗಬೇಕು. ನಾನು ಗಂಭೀರ ವಿಚಾರ ಹೇಳಬೇಕಿತ್ತು. ಭುವಿ ಹತ್ತಿರ ಒಂದು ಲಕೋಟೆ ಇದೆ. ಇಡೀ ಆಸ್ತಿ ಅವಳ ಹೆಸರಿಗೆ ಬರೆದಿದ್ದೇನೆ. ಬೇಸರ ಮಾಡಿಕೊಳ್ಳಬೇಡ. ಇದು ನಿನಗೆ ಬೇಡ. ಎಲ್ಲವನ್ನೂ ಅವಳೇ ನೋಡಿಕೊಂಡು ಹೋಗ್ತಾಳೆ’ ಎಂದು ಅಮ್ಮಮ್ಮನ ಮಾತನ್ನು ತೋರಿಸಲಾಗಿದೆ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ. ಇದು ಕನಸೋ ಅಥವಾ ನನಸೋ ಎಂಬ ಪ್ರಶ್ನೆಯೂ ವೀಕ್ಷಕರ ಮನದಲ್ಲಿದೆ.

Published On - 5:14 pm, Wed, 27 July 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ