AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಹರ್ಷನ ಮಾತು ಕೇಳಿ ಕೋಮಾಗೆ ಹೋದ ರತ್ನಮಾಲಾ; ಅಮ್ಮಮ್ಮನ ಮಾತು ಮನಸ್ಸಲ್ಲೇ ಉಳಿದಯೋಯ್ತು

ತಾನು ಸಾಯುವುದಕ್ಕೂ ಮೊದಲು ಎಲ್ಲಾ ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿರುವ ವಿಚಾರವನ್ನು ಹರ್ಷನಿಗೆ ಹೇಳಬೇಕು ಎಂದು ಆಕೆ ಅಂದುಕೊಂಡಿದ್ದಳು. ಅಂತೆಯೇ ಆಕೆ ಹೇಳೋಕೆ ಪ್ರಯತ್ನ ಮಾಡಿದಳು. ಅಷ್ಟರಲ್ಲಾಗಲೇ ಹರ್ಷ ತನ್ನ ನಿರ್ಧಾರವನ್ನು ಹೇಳಲು ಶುರು ಮಾಡಿದ.

 ಹರ್ಷನ ಮಾತು ಕೇಳಿ ಕೋಮಾಗೆ ಹೋದ ರತ್ನಮಾಲಾ; ಅಮ್ಮಮ್ಮನ ಮಾತು ಮನಸ್ಸಲ್ಲೇ ಉಳಿದಯೋಯ್ತು
ಹರ್ಷ-ರತ್ನಮಾಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 27, 2022 | 6:19 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಬೇಕು ಎಂದು ವರು ಪ್ಲ್ಯಾನ್ ರೂಪಿಸಿದ್ದಳು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಳು. ಇದು ಯಶಸ್ಸು ಕಂಡಿದೆ. ಭುವಿ ಬಳಿ ಡಿವೋರ್ಸ್ ಪತ್ರಕ್ಕೆ ಸಹಿ ಹಾಕಿಸಿದ್ದಾಳೆ.

ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ತನ್ನ ಎಲ್ಲಾ ಆಸ್ತಿಯನ್ನು ಮಗ ಹರ್ಷನಿಗೆ ಬರೆಯದೇ ಸೊಸೆ ಭುವಿಗೆ ಬರೆದಿದ್ದಾಳೆ. ಇದು ಆಕೆಯ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಹೇಳಲೂ ಆಗದೇ ಬಿಡಲೂ ಆಗದೆ ಆಕೆ ಒದ್ದಾಡುತ್ತಿದ್ದಾಳೆ. ಈಗ ಹರ್ಷನ ಎದುರು ಎಲ್ಲವನ್ನೂ ಹೇಳಬೇಕು ಎಂದುಕೊಂಡಿದ್ದಳು. ಆಗಲೇ ಹರ್ಷ ತನ್ನ ನಿಲುವು ಹೇಳಿದ್ದ. ಇದನ್ನು ಕೇಳಿ ರತ್ನಮಾಲಾ ಕೋಮಾಗೆ ಹೋಗಿದ್ದಾಳೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಹರ್ಷನಿಗೆ ಹೇಳಬೇಕು ಎಂದುಕೊಂಡಿದ್ದ ಆಸ್ತಿ ವಿಚಾರ ಮಾತು ರತ್ನಮಾಲಾ ಮನಸ್ಸಲ್ಲೇ ಉಳಿದಿದೆ.

ಮಾಲಾ ಸಂಸ್ಥೆಗೆ ರತ್ನಮಾಲಾ ಎಂ.ಡಿ. ಆಗಿದ್ದಳು. ತನಗೆ ಮರೆವಿನ ಕಾಯಿಲೆ ಶುರುವಾಗಿದೆ ಎಂಬುದು ಆಕೆಗೆ ಈ ಮೊದಲೇ ಗೊತ್ತಾಗಿದೆ. ಹೀಗಾಗಿ, ತಾನು ಸಾಯುವುದಕ್ಕೂ ಮೊದಲು ಎಲ್ಲಾ ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿರುವ ವಿಚಾರವನ್ನು ಹರ್ಷನಿಗೆ ಹೇಳಬೇಕು ಎಂದು ಆಕೆ ಅಂದುಕೊಂಡಿದ್ದಳು. ಅಂತೆಯೇ ಆಕೆ ಹೇಳೋಕೆ ಪ್ರಯತ್ನ ಮಾಡಿದಳು. ಅಷ್ಟರಲ್ಲಾಗಲೇ ಹರ್ಷ ತನ್ನ ನಿರ್ಧಾರವನ್ನು ಹೇಳಲು ಶುರು ಮಾಡಿದ.

ಸಾನಿಯಾಳಿಗೆ ಬುದ್ಧಿ ಕಲಿಸಬೇಕು ಎಂಬುದು ಹರ್ಷನ ಆಲೋಚನೆ. ಹರ್ಷನನ್ನು ಕೊಲೆ ಮಾಡಲು ಸಾನಿಯಾ ಈ ಮೊದಲು ಪ್ರಯತ್ನಿಸಿದ್ದಳು. ವರುಧಿನಿಗೂ ತೊಂದರೆ ಆಗಿತ್ತು. ಈಗ ಹರ್ಷನನ್ನು ಜೈಲಿಗೆ ಕಳುಹಿಸುವ ಆಲೋಚನೆಯಲ್ಲಿ ಸಾನಿಯಾ ಇದ್ದಾಳೆ. ಹೀಗಿರುವಾಗಲೇ ಆಕೆಯನ್ನು ಕೆಲಸದಿಂದ ತೆಗೆದು ತಾನೇ ಎಂಡಿ ಪಟ್ಟಕ್ಕೆ ಏರಿದ್ದಾನೆ ಹರ್ಷ. ಈ ವಿಚಾರವನ್ನು ಅಮ್ಮಮ್ಮನ ಎದುರು ಹರ್ಷ ಹೇಳಿಕೊಂಡಿದ್ದಾನೆ. ಒಂದೊಂದಾಗಿ ಎಲ್ಲಾ ವಿಚಾರ ಹೇಳುತ್ತಿದ್ದಂತೆ ರತ್ನಮಾಲಾಗೆ ಶಾಕ್ ಆಗಿದೆ. ಹರ್ಷ ಅಧಿಕಾರಕ್ಕಾಗಿ ಸಾಕಷ್ಟು ಆಸೆಪಟ್ಟಿದ್ದ ಎಂಬುದು ರತ್ನಮಾಲಾಗೆ ಅರಿವಾಗಿದೆ. ಈ ಶಾಕ್​ನಿಂದ ಆಕೆ ಕೋಮಾಗೆ ಹೋಗಿದ್ದಾಳೆ. ಸದ್ಯದ ಪರಿಸ್ಥಿತಿಯಲ್ಲಿ ಆಕೆ ಚೇತರಿಕೆ ಕಾಣೋದು ಅನುಮಾನವೇ. ಈಗಾಗಲೇ ಭುವಿಯ ಹೆಸರಿಗೆ ಎಲ್ಲಾ ಆಸ್ತಿ ಬರೆದಿಟ್ಟಿರುವುದರಿಂದ ಮುಂದಿನ ಎಂಡಿಯಾಗಿ ಆಕೆಯೇ ಅಧಿಕಾರ ವಹಿಸಿಕೊಳ್ಳಲಿದ್ದಾಳೆ. ಇದು ಗೊತ್ತಾಗೋದು ಯಾವಾಗ ಅನ್ನೋದು ಸದ್ಯದ ಕುತೂಹಲ.

ವರು ಬಳಿ ಸಹಾಯ ಕೇಳಿದ ಹರ್ಷ

ಹರ್ಷನ ವಿರುದ್ಧ ದೂರು ನೀಡಲು ಸಾನಿಯಾ ಪ್ಲ್ಯಾನ್ ರೂಪಿಸಿದ್ದಾಳೆ. ಆತ ಗನ್ ಎತ್ತಿ ಶೂಟ್ ಮಾಡಿದ್ದ. ಹೀಗಾಗಿ, ಈ ಸಂಬಂಧ ಸಾನಿಯಾ ಕೇಸ್ ದಾಖಲಿಸಿದರೆ ಹರ್ಷನನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿ ಮಾಧ್ಯಮದವರ ಬಳಿ ವಿಡಿಯೋ ಕೂಡ ಇದೆ. ಇದನ್ನು ಪ್ರಮುಖ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು  ಸಾನಿಯಾ ಪ್ಲ್ಯಾನ್ ರೂಪಿಸಿದ್ದಾಳೆ. ಈ ಕಾರಣಕ್ಕೆ ಹರ್ಷ ನೇರವಾಗಿ ವರುಧಿನಿ ಬಳಿ ತೆರಳಿ ಸಹಾಯ ಕೇಳಿದ್ದಾನೆ.

ಸಾನಿಯಾಗೆ ಅಚ್ಚರಿ ತಂದ ವರು ಹೇಳಿಕೆ  

ಹರ್ಷನಿಗೆ ಸಹಾಯ ಮಾಡೋಕೆ ವರು ಒಪ್ಪಿದ್ದಾಳೆ. ಹೀಗಾಗಿ, ಆಕೆ ನೇರವಾಗಿ ಸಾನಿಯಾ ಬಳಿ ತೆರಳಿ ಆಕೆಗೆ ಎಚ್ಚರಿಕೆ ನೀಡಿದ್ದಾಳೆ. ‘ಹರ್ಷ ನಿಮ್ಮ ಮೇಲೆ ಗನ್ ಎತ್ತಿದ್ದಕ್ಕೆ ಸಾಕ್ಷಿ ಇದೆ. ಆದಾಗ್ಯೂ ಅವರು ಅಷ್ಟು ಕೂಲ್ ಆಗಿದ್ದಾರೆ ಎಂದರೆ ನಿಮ್ಮ ವಿರುದ್ಧ ಯಾವುದೋ ದೊಡ್ಡ ಸಾಕ್ಷ್ಯ ಇದೆ ಎಂದೇ ಅರ್ಥವಲ್ಲವೇ’ ಎಂದು ಸಾನಿಯಾ ತಲೆಗೆ ವರು ಹುಳ ಬಿಟ್ಟಿದ್ದಾಳೆ. ಇದನ್ನು ಕೇಳಿ ಸಾನಿಯಾಗೆ ಶಾಕ್ ಆಗಿದೆ. ಈ ಮೊದಲು ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಪ್ರಯತ್ನಿಸಿದ್ದಳು. ಈ ವಿಚಾರದಲ್ಲಿ ಆಕೆಗೆ ಭಯ ಇದೆ. ಹೀಗಾಗಿ, ಸೈಲೆಂಟ್ ಆಗುವ ಸೂಚನೆ ನೀಡಿದ್ದಾಳೆ.

ಶ್ರೀಲಕ್ಷ್ಮಿ ಎಚ್.

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ