AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಆರ್​ಪಿಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’ ಧಾರಾವಾಹಿ

ಕರ್ಣ ಧಾರಾವಾಹಿಯು ತನ್ನ ಮೊದಲ ವಾರದಲ್ಲೇ ಎರಡಂಕಿಯ ಟಿಆರ್‌ಪಿ ರೇಟಿಂಗ್ ಪಡೆದು ನಂಬರ್ 1 ಸ್ಥಾನವನ್ನು ಗಳಿಸಿದೆ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅವರ ಅಭಿನಯ ಮೆಚ್ಚುಗೆ ಪಡೆದಿದೆ. ದಾಖಲೆಗಳನ್ನು ಮುರಿದು ಈ ಯಶಸ್ಸು ಸಾಧಿಸಿರುವ ಧಾರಾವಾಹಿ ತಂಡಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಟಿಆರ್​ಪಿಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’ ಧಾರಾವಾಹಿ
ಕರ್ಣ ಧಾರಾವಾಹಿ
ರಾಜೇಶ್ ದುಗ್ಗುಮನೆ
|

Updated on:Jul 11, 2025 | 12:13 PM

Share

ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅವರು ಒಟ್ಟಾಗಿ ನಟಿಸಿರೋ ‘ಕರ್ಣ’ ಧಾರಾವಾಹಿ (Karna Serial) ಟಿಆರ್​ಪಿಯಲ್ಲಿ ದಾಖಲೆ ಬರೆದಿದೆ. ಇತ್ತೀಚಿಗೆ ಯಾರೂ ಮಾಡಿರದ ಸಾಧನೆಯನ್ನು ಈ ಧಾರಾವಾಹಿ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ವಿಚಾರ ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಇದೇ ರೀತಿಯ ಟಿಆರ್​ಪಿಯನ್ನು ಕಾಯ್ದುಕೊಂಡು ಹೋಗಬೇಕಾದ ಚಾಲೆಂಜ್ ಇದೆ.

ಕಿರಣ್ ರಾಜ್, ನಮ್ರತಾ ಹಾಗೂ ಭವ್ಯಾ ಈ ಮೂವರಿಗೂ ಒಳ್ಳೆಯ ಮಾರುಕಟ್ಟೆ ಇದೆ. ಇವರನ್ನು ಒಂದೆಡೆ ಸೇರಿಸೋದು ಎಂದರೆ ಬಜೆಟ್ ವಿಷಯದಲ್ಲಿ ದೊಡ್ಡ ಚಾಲೆಂಜ್. ಈ ಚಾಲೆಂಜ್​ನ ಸ್ವೀಕರಿಸಿ ಧಾರಾವಾಹಿಯನ್ನು ಮಾಡಲಾಗಿದೆ. ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ಪ್ರಸೂತಿ ವೈದ್ಯನಾಗಿ ಕಾಣಿಸಿಕೊಂಡರೆ, ಭವ್ಯಾ ಗೌಡ ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ರತಾ ಅವರದ್ದು ಭವ್ಯಾ ಸಹೋದರಿಯ ಪಾತ್ರ.

ಇದನ್ನೂ ಓದಿ
Image
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
Image
ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
Image
ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ತಿಂಗಳೇ ಈ ಧಾರಾವಾಹಿ ಪ್ರಸಾರ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲೇ ಇಲ್ಲ. ‘ಕರ್ಣ’ನ ಎಂಟ್ರಿ ತಡವಾದರೂ ಟಿಆರ್​ಪಿಯಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದಾನೆ. ಈ ಧಾರಾವಾಹಿಗೆ ಬರೋಬ್ಬರಿ 11 ಟಿವಿಆರ್ ಸಿಕ್ಕಿದೆ. ಈ ಮೂಲಕ ಧಾರಾವಾಹಿಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ.

ಜೀ ಕನ್ನಡ ವಾಹಿನಿ ಮಾಡಿದ ಪೋಸ್ಟ್

View this post on Instagram

A post shared by Zee Kannada (@zeekannada)

ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 13.5 ಟಿವಿಆರ್ ಪಡೆದು ದಾಖಲೆ ಬರೆದಿತ್ತು. ನಂತರದ ಸ್ಥಾನದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (11.8 ಟಿವಿಆರ್​) ಹಾಗೂ ‘ನಾಗಿಣಿ 2’ (11.2 ಟಿವಿಆರ್​) ಧಾರಾವಾಹಿಗಳು ಇವೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ   

‘ಕರ್ಣನ ದಾರಿಯಲ್ಲಿ ಸಾವಿರ ಅಡೆತಡೆಗಳು ಎದುರಾದರೂ ಅವನು ಗುರಿ ತಪ್ಪಲಿಲ್ಲ. ಕರ್ಣ ಬರುವುದು ತಡವಾದರೂ ನೀವು ಅವನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ. ಸವಾಲುಗಳನ್ನೆಲ್ಲಾ ಬದಿಗೊತ್ತಿ ಹೊತ್ತು ಮೀರಿ ಬಂದ ಮನೆ ಮಗನಿಗೆ ಕೈ ತುತ್ತು ನೀಡಿ ಉಪಚರಿಸಿದ್ದೀರಿ. ಹುಟ್ಟಿನಿಂದಲೂ ಪ್ರೀತಿ ಕಾಣದ ಕರ್ಣನನ್ನ ಅಪ್ಪಿ ಮುದ್ದಾಡಿದ್ದೀರಿ. ಕನ್ನಡಿಗರ ಈ ಪ್ರೀತಿ ಇಂದು ಕರ್ಣನನ್ನು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಿಸಿದೆ. ನಿಮ್ಮ ಬೆಂಬಲಕ್ಕೆ ಸದಾ ಋಣಿಯಾಗಿರುತ್ತೇವೆ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 am, Fri, 11 July 25

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..