AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  

ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಿತ್ಯಾ ಪಾತ್ರದಲ್ಲಿ ನಟಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭಾಗಿ ಆಗಿದ್ದ ಅವರು ಅಪಾರ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಯಾವುದೇ ಆಫರ್​ನ ಒಪ್ಪಿಕೊಂಡಿರಲಿಲ್ಲ. ಈಗ ಅವರು ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದಾರೆ.

‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  
ನಮ್ರತಾ ಗೌಡ
ರಾಜೇಶ್ ದುಗ್ಗುಮನೆ
|

Updated on:Jul 08, 2025 | 12:32 PM

Share

ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ (Karna Serial) ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯಲ್ಲಿ ಕಿರಣ್ ರಾಜ್​, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ನಮ್ರತಾ ಅವರು ಈ ಧಾರಾವಾಹಿಯಲ್ಲಿ ನಿತ್ಯಾ ಹೆಸರಿನ ಪಾತ್ರ ಮಾಡಿದ್ದಾರೆ. ಈ ಧಾರಾವಾಹಿಯ ಕೆಲವು ಎಪಿಸೋಡ್​ಗಳು ಪ್ರಸಾರ ಕಂಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಧಾರಾವಾಹಿಯಲ್ಲಿ ವಿವಿಧ ಭಾವನೆಗಳನ್ನು ತೋರಿಸಲಾಗುತ್ತಿದೆ. ‘ಕರ್ಣ’ ಇಷ್ಟ ಆಗಲು ಕಾರಣ ಏನು ಎಂಬುದನ್ನು ನಮ್ರತಾ ಗೌಡ ಅವರು ವಿವರಿಸಿದ್ದಾರೆ. ಅವರು ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಎರಡು ವರ್ಷದ ಹಿಂದೇ ಬಂದಿತ್ತು ಆಫರ್..

‘ಬಿಗ್ ಬಾಸ್ ಆದಮೇಲೆ ಸಾಕಷ್ಟು ಆಫರ್​ಗಳು ಬಂದವು. ಯಾವುದೂ ಇಷ್ಟ ಆಗಿಲ್ಲ. ಒಳ್ಳೆಯ ಪಾತ್ರ ಹಾಗೂ ಕಥೆ ಹುಡುಕುವಾಗ ಸಿಕ್ಕಿದ್ದೇ ಕರ್ಣ’ ಎಂದಿದ್ದಾರೆ ನಮ್ರತಾ ಗೌಡ. ಇಲ್ಲೊಂದು ಟ್ವಿಸ್ಟ್ ಇದೆ. ಈ ಧಾರಾವಾಹಿಯ ಆಫರ್​ ನಮ್ರತಾಗೆ ಎರಡು ವರ್ಷಗಳ ಹಿಂದೇ ಬಂದಿತ್ತಂತೆ. ‘ಬಿಗ್ ಬಾಸ್​ಗೆ ಹೋಗುವ ಮೊದಲೇ ನನಗೆ ನಿತ್ಯಾ ಪಾತ್ರದ ಆಫರ್ ಬಂದಿತ್ತು. ಆದರೆ, ಧಾರಾವಾಹಿ ಸೆಟ್ಟೇರಲಿಲ್ಲ. ಈಗ ಮತ್ತೆ ನನ್ನನ್ನು ಅಪ್ರೋಚ್ ಮಾಡಿದರು. ನಾನು ಓಕೆ ಎಂದೆ. ಆರಂಭದ ಎಪಿಸೋಡ್​ನಲ್ಲಿ ನಾನು ಹೆಚ್ಚು ತೆರೆಮೇಲೆ ಕಾಣಿಸಿಕೊಳ್ಳೋದಿಲ್ಲ. ಆದಾಗ್ಯೂ ಜನರು ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ’ ಎಂದಿದ್ದಾರೆ ಅವರು.

ಭವ್ಯಾ ಜೊತೆ ಬಾಂಡಿಂಗ್..

ಈ ಧಾರಾವಾಹಿಯಲ್ಲಿ ನಮ್ರತಾ ಅವರು ಭವ್ಯಾ ಗೌಡನ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ತೆರೆಮೇಲೆ ನೋಡಿದಾಗ ಇವರು ನಿಜವಾದ ಸಹೋದರಿಯರು ಎನ್ನುವ ಫೀಲ್ ಬರುತ್ತದೆ. ‘ನಾನು ಭವ್ಯಾ ಈ ಮೊದಲು ಒಂದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕೆಲಸ ಮಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಪರಿಚಯ ಇದೆ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಒಡನಾಟ ಇದ್ದಿದ್ದರಿಂದ ಆ ಕೆಮಿಸ್ಟ್ರಿ ತರೋಕೆ ಸುಲಭ ಆಯ್ತು’ ಎನ್ನುತ್ತಾರೆ ನಮ್ರತಾ.

ಇದನ್ನೂ ಓದಿ
Image
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ
Image
PHOTOS: ನಟ ವಿಷ್ಣು ವಿಶಾಲ್-ಜ್ವಾಲಾ ದಂಪತಿ ಮಗಳಿಗೆ ಹೆಸರಿಟ್ಟ ಆಮಿರ್
Image
ರಿಲೀಸ್​ಗೆ ಒಂದು ತಿಂಗಳಿರುವಾಗ ಶೂಟ್ ಮುಗಿಸಿದ ‘ವಾರ್ 2’

ಧಾರಾವಾಹಿ ಇಷ್ಟ ಆಗೋಕೆ ಒಂದು ಕಾರಣ..

ಈ ಧಾರಾವಾಹಿಯಲ್ಲಿ ನಿತ್ಯಾ ಹೆಸರಿನ ಕ್ಯಾರೆಕ್ಟರ್ ನೋಡಿ ನಮ್ರತಾ ನಿಜಕ್ಕೂ ಖುಷಿಪಟ್ಟರಂತೆ. ‘ನಾನು ನಿಜ ಜೀವನದಲ್ಲಿ ತುಂಬಾನೇ ಪ್ರ್ಯಾಕ್ಟಿಕಲ್ ಆಗಿ ಆಲೋಚಿಸುತ್ತೇನೆ. ಭಾವನೆಗಳನ್ನು ತೋರಿಸಿಕೊಳ್ಳೋದಿಲ್ಲ. ಆ ಪಾತ್ರ ಕೂಡ ಹಾಗೆಯೇ ಇದೆ. ಕೆಲವು ಧಾರಾವಾಹಿಗಳಲ್ಲಿ ಕಥಾ ನಾಯಕಿ ಸ್ವಲ್ಪ ಅಳುಮುಂಜಿ ಆಗಿರುತ್ತಾಳೆ ಅಥವಾ ಸಾಫ್ಟ್ ಆಗಿರುತ್ತಾಳೆ. ಆದರೆ, ನಿತ್ಯಾ ಪಾತ್ರ ಇದಕ್ಕೆ ಸಂಪೂರ್ಣ ಭಿನ್ನವಾಗಿದೆ. ಈ ಕಾರಣಕ್ಕೆ ನನಗೆ ಪಾತ್ರ ಸಖತ್ ಇಷ್ಟ ಆಯ್ತು. ಹೀಗಾಗಿ ಧಾರಾವಾಹಿ ಒಪ್ಪಿಕೊಂಡೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Tue, 8 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ