AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್

ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ.

‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್
ಪ್ರತಾಪ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 15, 2024 | 11:50 AM

Share

ಕಿಚ್ಚ ಸುದೀಪ್ (Kichcha Sudeep) ಅವರು ನಿರೂಪಣೆಗೆ ನಿಂತರೆ ಯಾರನ್ನೂ ಲೆಕ್ಕಿಸೋದಿಲ್ಲ. ಅವರಿಗೆ ಸರಿ ಎನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಕೂಲ್ ಆಗಿದ್ದರೆ ಅವರು ನಗುತ್ತಲೇ ಉತ್ತರಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ಸಿಟ್ಟಾದರೆ ಅವರ ಬಾಯಿಂದ ಖಡಕ್ ಮಾತುಗಳು ಬರುತ್ತವೆ. ಈಗ ಕಿಚ್ಚ ಸುದೀಪ್ ಅವರು ನೇರವಾಗಿ ಪ್ರತಾಪ್​ ಸೇರಿ ಮನೆಯ ಅನೇಕರಿಗೆ ಬೈದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 14ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಇಬ್ಬರ ಫ್ರೆಂಡ್​ಶಿಪ್​ನಲ್ಲಿ ಒಬ್ಬರ ಫ್ರೆಂಡ್​ಶಿಪ್​ನ ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಸುದೀಪ್ ಅವಕಾಶ ನೀಡಿದ್ದರು. ಯಾರ ಜೊತೆಗಿನ ಫ್ರೆಂಡ್​ಶಿಪ್​ನ ಉಳಿಸಿಕೊಳ್ಳುತ್ತೀರಿ, ಯಾರ ಜೊತೆಗಿನ ಫ್ರೆಂಡ್​ಶಿಪ್​ನ ಬಿಟ್ಟು ಹೋಗುತ್ತಿರಿ ಎಂದು ಕೇಳಲಾಯಿತು. ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ. ‘ಬಿಗ್ ಬಾಸ್ ಹೇಳಿದರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದ ಸುದೀಪ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿನಯ್ ಹಾಗೂ ಕಾರ್ತಿಕ್​ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಂಗೀತಾಗೆ ಇತ್ತು. ಆದರೆ ಇಬ್ಬರ ಜೊತೆಗೂ ಫ್ರೆಂಡ್​ಶಿಪ್ ಮುಂದುವರಿಸಲ್ಲ ಎಂದು ಸಂಗೀತಾ ನೇರ ಮಾತುಗಳಲ್ಲಿ ಹೇಳಿದರು. ಸಂಗೀತಾ ಅವರು ಮುಕ್ತವಾಗಿ ಮಾತನಾಡಿದ್ದನ್ನು ಸುದೀಪ್ ಮೆಚ್ಚಿಕೊಂಡರು. ಆದರೆ, ಉಳಿದ ಎಲ್ಲರೂ ಆ ರೀತಿ ಮಾತನಾಡಲಿಲ್ಲ. ಇದು ಸುದೀಪ್ ಸಿಟ್ಟಿಗೆ ಕಾರಣ ಆಗಿದೆ.

ಇದನ್ನೂ ಓದಿ: ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು

‘ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀನಿ ಎನ್ನುವಾಗ ಕೊಡುವ ಸ್ಪಷ್ಟತೆ ಯಾಕೆ ರಿಜೆಕ್ಟ್ ಮಾಡ್ತೀನಿ ಎನ್ನುವಾಗ ಕೊಡಲ್ಲ. ಸಂಗೀತಾ ಸರಿಯಾಗಿ ಕೊಟ್ಟರು. ಪ್ರತಾಪ್ ಬಂದು ಶುಗರ್ ಕೋಟ್ ಮಾಡಿ  ಮಾತನಾಡಿದ್ರಿ. ಇಂಟಲಿಜೆಂಟ್ ಪ್ರತಾಪ್​ ಆ್ಯಂಡ್ ಡಂಬ್ ಸುದೀಪ್ ಅಲ್ಲವೇ? ತನಿಷಾ ಬಂದು ನಗುತ್ತಾ ಮ್ಯಾನ್ಯುಪ್ಯುಲೇಟ್ ಮಾಡಿದ್ರಿ. ಬಿಗ್ ಬಾಸ್ ಹೇಳಿದ್ರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದರು ಸುದೀಪ್. ನಂತರ ಎಲ್ಲರೂ ಸೈಲೆಂಟ್ ಆದರು. ಆ ಬಳಿಕ ಬಂದು ಎಲ್ಲರೂ ಸರಿಯಾದ ಕಾರಣ ನೀಡಿದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ