AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್

ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ.

‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್
ಪ್ರತಾಪ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 15, 2024 | 11:50 AM

Share

ಕಿಚ್ಚ ಸುದೀಪ್ (Kichcha Sudeep) ಅವರು ನಿರೂಪಣೆಗೆ ನಿಂತರೆ ಯಾರನ್ನೂ ಲೆಕ್ಕಿಸೋದಿಲ್ಲ. ಅವರಿಗೆ ಸರಿ ಎನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಕೂಲ್ ಆಗಿದ್ದರೆ ಅವರು ನಗುತ್ತಲೇ ಉತ್ತರಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ಸಿಟ್ಟಾದರೆ ಅವರ ಬಾಯಿಂದ ಖಡಕ್ ಮಾತುಗಳು ಬರುತ್ತವೆ. ಈಗ ಕಿಚ್ಚ ಸುದೀಪ್ ಅವರು ನೇರವಾಗಿ ಪ್ರತಾಪ್​ ಸೇರಿ ಮನೆಯ ಅನೇಕರಿಗೆ ಬೈದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 14ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಇಬ್ಬರ ಫ್ರೆಂಡ್​ಶಿಪ್​ನಲ್ಲಿ ಒಬ್ಬರ ಫ್ರೆಂಡ್​ಶಿಪ್​ನ ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಸುದೀಪ್ ಅವಕಾಶ ನೀಡಿದ್ದರು. ಯಾರ ಜೊತೆಗಿನ ಫ್ರೆಂಡ್​ಶಿಪ್​ನ ಉಳಿಸಿಕೊಳ್ಳುತ್ತೀರಿ, ಯಾರ ಜೊತೆಗಿನ ಫ್ರೆಂಡ್​ಶಿಪ್​ನ ಬಿಟ್ಟು ಹೋಗುತ್ತಿರಿ ಎಂದು ಕೇಳಲಾಯಿತು. ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ. ‘ಬಿಗ್ ಬಾಸ್ ಹೇಳಿದರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದ ಸುದೀಪ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿನಯ್ ಹಾಗೂ ಕಾರ್ತಿಕ್​ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಂಗೀತಾಗೆ ಇತ್ತು. ಆದರೆ ಇಬ್ಬರ ಜೊತೆಗೂ ಫ್ರೆಂಡ್​ಶಿಪ್ ಮುಂದುವರಿಸಲ್ಲ ಎಂದು ಸಂಗೀತಾ ನೇರ ಮಾತುಗಳಲ್ಲಿ ಹೇಳಿದರು. ಸಂಗೀತಾ ಅವರು ಮುಕ್ತವಾಗಿ ಮಾತನಾಡಿದ್ದನ್ನು ಸುದೀಪ್ ಮೆಚ್ಚಿಕೊಂಡರು. ಆದರೆ, ಉಳಿದ ಎಲ್ಲರೂ ಆ ರೀತಿ ಮಾತನಾಡಲಿಲ್ಲ. ಇದು ಸುದೀಪ್ ಸಿಟ್ಟಿಗೆ ಕಾರಣ ಆಗಿದೆ.

ಇದನ್ನೂ ಓದಿ: ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು

‘ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀನಿ ಎನ್ನುವಾಗ ಕೊಡುವ ಸ್ಪಷ್ಟತೆ ಯಾಕೆ ರಿಜೆಕ್ಟ್ ಮಾಡ್ತೀನಿ ಎನ್ನುವಾಗ ಕೊಡಲ್ಲ. ಸಂಗೀತಾ ಸರಿಯಾಗಿ ಕೊಟ್ಟರು. ಪ್ರತಾಪ್ ಬಂದು ಶುಗರ್ ಕೋಟ್ ಮಾಡಿ  ಮಾತನಾಡಿದ್ರಿ. ಇಂಟಲಿಜೆಂಟ್ ಪ್ರತಾಪ್​ ಆ್ಯಂಡ್ ಡಂಬ್ ಸುದೀಪ್ ಅಲ್ಲವೇ? ತನಿಷಾ ಬಂದು ನಗುತ್ತಾ ಮ್ಯಾನ್ಯುಪ್ಯುಲೇಟ್ ಮಾಡಿದ್ರಿ. ಬಿಗ್ ಬಾಸ್ ಹೇಳಿದ್ರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದರು ಸುದೀಪ್. ನಂತರ ಎಲ್ಲರೂ ಸೈಲೆಂಟ್ ಆದರು. ಆ ಬಳಿಕ ಬಂದು ಎಲ್ಲರೂ ಸರಿಯಾದ ಕಾರಣ ನೀಡಿದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ