AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ

ಬಿಗ್ ಬಾಸ್ ಕನ್ನಡದಲ್ಲಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾಧವ್ ಅವರ ಗೆಳೆತನದಲ್ಲಿ ಮಂಜು ಕಾರಣದಿಂದ ಬಿರುಕು ಉಂಟಾಗಿತ್ತು. ಆದರೆ ಈಗ ಅವರು ಮತ್ತೆ ಒಂದಾಗಿದ್ದಾರೆ. ಮಂಜು ಮತ್ತು ಗೌತಮಿ ನಡುವಿನ ವೈಮನಸ್ಸಿನಿಂದಾಗಿ ಮೋಕ್ಷಿತಾ, ಗೌತಮಿಯನ್ನು ಬೆಂಬಲಿಸಿದ್ದಾರೆ. ತಂಡ ರಚನೆಯಲ್ಲಿ ಮೋಕ್ಷಿತಾ ಗೌತಮಿಯ ತಂಡವನ್ನು ಆಯ್ಕೆ ಮಾಡಿದ್ದಾರೆ.

ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ
ಗೌತಮಿ-ಮೋಕ್ಷಿತಾ
ರಾಜೇಶ್ ದುಗ್ಗುಮನೆ
|

Updated on: Dec 12, 2024 | 6:57 AM

Share

ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡಿದವರು. ಒಂದೇ ವಾಹಿನಿ ಎಂಬ ಕಾರಣದಿಂದಲೇ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಮಂಜು ಕಾರಣದಿಂದ ಮೋಕ್ಷಿತಾ ಅವರು ಗೆಳೆತನ ಮುರಿದುಕೊಂಡು ಹೊರಕ್ಕೆ ಬಂದರು. ಈಗ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಒಂದಾಗಿದ್ದಾರೆ. ಯಾವಾಗ ಗೌತಮಿ ಅವರು ಮಂಜು ಅವರಿಂದ ದೂರ ಆದರೋ ಆಗಲೇ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಒಂದಾಗಿದ್ದಾರೆ.

ಮೋಕ್ಷಿತಾ, ಗೌತಮಿ ಹಾಗೂ ಮಂಜು ಮೊದಲು ಒಂದಾಗಿದ್ದರು. ಇವರು ಏನೇ ಮಾಡೋದಾದರೂ ಪ್ಲ್ಯಾನ್ ಮಾಡಿಯೇ ಮಾಡುತ್ತಿದ್ದರು. ಆದರೆ, ದಿನ ಕಳೆದಂತೆ ಮಂಜು ಬಗ್ಗೆ ಮೋಕ್ಷಿತಾಗೆ ಅಸಮಾಧಾನ ಮೂಡಿತು. ಸ್ವಲ್ಪ ದಿನಗಳ ಹಿಂದೆ ಮೋಕ್ಷಿತಾ ಅವರು ಗೌತಮಿ ಹಾಗೂ ಮಂಜುನ ವೈರಿ ನೋಡಿದಂತೆ ನೋಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ.

ಗೌತಮಿ ಹಾಗೂ ಮಂಜು ಮಧ್ಯೆ ವೈಮನಸ್ಸು ಮೂಡುತ್ತಿದೆ. ಎಲ್ಲಾ ವಿಚಾರಗಳಲ್ಲೂ ಮಂಜು ಅವರೇ ಮೇಲುಗೈ ತೋರಿಸಲು ಪ್ರಯತ್ನಿಸುತ್ತಾರೆ ಎನ್ನುವುದು ಗೌತಮಿಗೆ ಸ್ಪಷ್ಟವಾಗಿದೆ. ಈ ಕಾರಣದಿಂದಲೇ, ಮಂಜು ಬಗ್ಗೆ ಗೌತಮಿ ಅಸಮಾಧಾನ ಹೊರಹಾಕಿದ್ದು, ನಿಮ್ಮಜೊತೆ ಇನ್ಮುಂದೆ ಗೆಳೆತನ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಮೋಕ್ಷಿತಾಗೆ ಸ್ಪಷ್ಟವಾದಂತಿದೆ. ಈ ಕಾರಣಕ್ಕೆ ಅವರು ಗೌತಮಿ ತಂಡ ಸೇರಿಕೊಂಡಿದ್ದಾರೆ.

ತಂಡ ರಚನೆ ಮಾಡುವ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದರು. ಒಂದು ತಂಡಕ್ಕೆ ಗೌತಮಿ ಕ್ಯಾಪ್ಟನ್ ಆದರೆ, ಮತ್ತೊಂದು ತಂಡಕ್ಕೆ ಹನುಮಂತ ನಾಯಕ. ಹನುಮಂತ ಹಾಗೂ ಗೌತಮಿ ಇಬ್ಬರೂ ಮೋಕ್ಷಿತಾನ ತಮ್ಮ ತಂಡಕ್ಕೆ ಸೇರಿಸಬೇಕು ಎಂದು ಬಯಸಿದರು. ಮೋಕ್ಷಿತಾ ಅವರು ಹನುಮಂತನ ತಂಡ ಸೇರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ಅವರು ಗೌತಮಿಯನ್ನು ಆಯ್ಕೆ ಮಾಡಿಕೊಂಡರು.

ಇದನ್ನೂ ಓದಿ: ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ

ಮೋಕ್ಷಿತಾ ಹಾಗೂ ಗೌತಮಿ ಒಂದಾದರೆ ಮಂಜು ಅವರಿಗೆ ಹಿನ್ನಡೆ ಉಂಟಾಗುವುದು ಪಕ್ಕಾ ಆಗಿದೆ. ಮಂಜು ಅವರು ಗೌತಮಿ ಇಲ್ಲದೆ ಒಬ್ಬಂಟಿ ಭಾವನೆ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!