Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದೆ ತಿನ್ನಲ್ಲು ಉಗುರು ಬಳಸ್ತಾರೆ ನಿವೇದಿತಾ ಗೌಡ; ಈ ಸ್ಟೈಲ್​ಗೆ ಶಾಕ್ ಆದ ಶ್ರುತಿ

ನಟಿ ನಿವೇದಿತಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ತಮ್ಮ ಮುದ್ದೆ ತಿನ್ನುವ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಉಗುರು ಬಳಸಿ ಮುದ್ದೆ ತಿನ್ನುತ್ತಾರೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ. ಇದಕ್ಕೂ ಮುನ್ನ ಸ್ಪೂನ್ ಮತ್ತು ಫೋರ್ಕ್ ಬಳಸಿ ಮುದ್ದೆ ತಿನ್ನುವ ವಿಡಿಯೋ ವೈರಲ್ ಆಗಿತ್ತು. ನಿವೇದಿತಾ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುದ್ದೆ ತಿನ್ನಲ್ಲು ಉಗುರು ಬಳಸ್ತಾರೆ ನಿವೇದಿತಾ ಗೌಡ; ಈ ಸ್ಟೈಲ್​ಗೆ ಶಾಕ್ ಆದ ಶ್ರುತಿ
ನಿವೇದಿತಾ-ಶ್ರುತಿ
Follow us
ರಾಜೇಶ್ ದುಗ್ಗುಮನೆ
|

Updated on: Feb 03, 2025 | 10:03 AM

ನಟಿ ನಿವೇದಿತಾ ಗೌಡ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ವಿಡಿಯೋಗಳು ಹಲ್​ಚಲ್ ಎಬ್ಬಿಸುತ್ತವೆ. ಇದಕ್ಕೆ ಸಾಕಷ್ಟು ಲೈಕ್ಸ್​ಗಳು ಕೂಡ ಬರುತ್ತವೆ. ಈಗ ನಿವೇದಿತಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಬಂದು ಗಮನ ಸೆಳೆದಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಅವರು ಹೇಳಿದ ಒಂದು ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.

ನಿವೇದಿತಾ ಗೌಡ ಅವರಿಗೆ ಮುದ್ದೆ ತಿನ್ನೋಕೆ ಸರಿಯಾಗಿ ಬರೋದಿಲ್ಲ. ಈ ಮೊದಲು ಅವರು ಸ್ಪೂನ್ ಹಾಗೂ ಪೋರ್ಕ್​ ಬಳಸಿ ಮುದ್ದೆ ತಿಂದಿದ್ದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಈ ವಿಡಿಯೋ ವೈರಲ್ ಆಗಿ ಅವರು ಟೀಕೆ ಎದುರಿಸಿದ್ದರು. ಈಗ ಗೊತ್ತಾಗಿರೋ ಮತ್ತೊಂದು ವಿಚಾರ ಎಂದರೆ ಅವರು ಮುದ್ದೆ ತಿನ್ನೋಕೆ ಉಗುರನ್ನು ಬಳಸೋದಾಗಿ ಹೇಳಿದ್ದಾರೆ.

‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ಶ್ರುತಿ ಅವರು ನಿವೇದಿತಾಗೆ ಪ್ರಶ್ನೆ ಮಾಡಿದರು. ‘ಯಾರಾದರೂ ನಿಮಗೆ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ? ಉಗುರಿನಿಂದ ತೊಂದರೆ ಆಗಲ್ವ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಿವೇದಿತಾ, ‘ನಾನು ಮುದ್ದೆ ತಿನ್ನೋಕೆ ಸ್ಪೂನ್ ಹಾಗೂ ಪೋರ್ಕ್ ಬಳಸುತ್ತಿದ್ದೆ. ಈಗ  ಉಗುರನ್ನೇ ಚಮಚ ಹಾಗೂ ಪೋರ್ಕ್​ ರೀತಿ ಬಳಸುತ್ತೇನೆ. ಒಂದರಲ್ಲಿ ಕಟ್​ ಮಾಡ್ತೀನಿ, ಮತ್ತೊಂದರಲ್ಲಿ ತಿನ್ನುತ್ತೇನೆ’ ಎಂದರು ನಿವೇದಿತಾ. ಅವರ ಉತ್ತರ ಕೇಳಿ ಶ್ರುತಿ ಶಾಕ್ ಆಗಿ ಹೋದರು.

ಇದನ್ನೂ ಓದಿ: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ

ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಪ್ರಸಾರ ಆರಂಭಿಸಿದೆ. ಪ್ರತಿ ವೀಕೆಂಡ್​​ ಈ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತದೆ. ಈ ಮೊದಲು ಬಿಗ್ ಬಾಸ್​ನಲ್ಲಿ ಇದ್ದವರೇ ಈ ಶೋನ ಭಾಗವಾಗುತ್ತಿದ್ದಾರೆ. ಇನ್ನು ನಿವೇದಿತಾ ವಿಚಾರಕ್ಕೆ ಬರೋದಾದರೆ, ಅವರು ಪತಿ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಈ ವಿಚಾರ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಹೊಂದಾಣಿಕೆ ಸಾಧ್ಯವಾಗದ ಕಾರಣ ಇವರು ಬೇರೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ
ಕರ್ನಾಟಕ ಲೋಕಸೇವಾ ಆಯೋಗದ ಪ್ರಮಾದಗಳನ್ನು ಅಂಗೀಕರಿಸಿದ ಸಿದ್ದರಾಮಯ್ಯ
ಕರ್ನಾಟಕ ಲೋಕಸೇವಾ ಆಯೋಗದ ಪ್ರಮಾದಗಳನ್ನು ಅಂಗೀಕರಿಸಿದ ಸಿದ್ದರಾಮಯ್ಯ
ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೊದಲ ಪ್ರಧಾನಿ ಮೋದಿ
ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೊದಲ ಪ್ರಧಾನಿ ಮೋದಿ
ಮಾರ್ಚ್ 22 ರಂದು ತಮಿಳುನಾಡು ನಡೆಸುವ ಸಭೆಯಲ್ಲಿ ಭಾಗವಹಿಸಲು ಆಹ್ವಾನ
ಮಾರ್ಚ್ 22 ರಂದು ತಮಿಳುನಾಡು ನಡೆಸುವ ಸಭೆಯಲ್ಲಿ ಭಾಗವಹಿಸಲು ಆಹ್ವಾನ
ಬಲೂಚ್ ದಂಗೆಕೋರರು ಪಾಕ್ ರೈಲನ್ನು ಹೈಜಾಕ್ ಮಾಡಿದ್ದು ಹೇಗೆಂದು ನೋಡಿ
ಬಲೂಚ್ ದಂಗೆಕೋರರು ಪಾಕ್ ರೈಲನ್ನು ಹೈಜಾಕ್ ಮಾಡಿದ್ದು ಹೇಗೆಂದು ನೋಡಿ