AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್

ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಒಂದೊಂದು ಹಾಡು ಪ್ಲೇ ಆಗುತ್ತದೆ. ಹಲವು ನಟರ ಸಿನಿಮಾದ ಹಾಡುಗಳು ಕೇಳಿಸುತ್ತವೆ. ಆದರೆ ದರ್ಶನ್ ನಟನೆಯ ಸಿನಿಮಾಗಳ ಹಾಡು ಕೇಳಿಸುತ್ತಿಲ್ಲ. ಪ್ರತಿ ಸೀಸನ್​ನಲ್ಲೂ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ಈಗ 11ನೇ ಸೀಸನ್ ನಡೆಯುತ್ತಿದೆ. ಈ ಬಾರಿ ದರ್ಶನ್ ಸಾಂಗ್ ಕೇಳಿಸಿದೆ. ಆದರೆ ಒಂದು ಟ್ವಿಸ್ಟ್​ ಇದೆ.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್
ರಜತ್, ದರ್ಶನ್
ಮದನ್​ ಕುಮಾರ್​
|

Updated on: Nov 25, 2024 | 11:25 PM

Share

ದೊಡ್ಮನೆಯ ಸದಸ್ಯರಿಗೆ ಬೆಳಗಾಗುವುದೇ ಸಿನಿಮಾ ಹಾಡುಗಳ ಮೂಲಕ. ಅಲಾರ್ಮ್​ ರೀತಿಯಲ್ಲಿ ಪ್ರತಿ ದಿನವೂ ಒಂದೊಂದು ಹಾಡು ಕೇಳಿಸುತ್ತಿದೆ. ಹಾಡು ಪ್ಲೇ ಆದಾಗ ಎಲ್ಲರೂ ಎಚ್ಚರಗೊಳ್ಳುತ್ತಾರೆ. ತಮ್ಮಿಷ್ಟದ ಹಾಡು ಬಂದರೆ ಸ್ಪರ್ಧಿಗಳ ಜೋಶ್ ಜೋರಾಗಿ ಇರುತ್ತದೆ. ಕನ್ನಡ ಚಿತ್ರರಂಗದ ಬೇರೆ ಬೇರೆ ಹೀರೋಗಳ ಹಾಡು ಕೇಳಿಸುತ್ತದೆ. ಅಗತ್ಯವಿದ್ದರೆ ಟಾಸ್ಕ್​ ಸಂದರ್ಭದಲ್ಲಿಯೂ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಇಷ್ಟೆಲ್ಲ ಆದರೂ ಕೂಡ ದರ್ಶನ್ ನಟನೆಯ ಸಿನಿಮಾಗಳ ಹಾಡುಗಳು ಬರುವುದಿಲ್ಲ! ಪ್ರತಿ ಸೀಸನ್​ ಆರಂಭ ಆಗಾಗಲೂ ಜನರು ಈ ಬಗ್ಗೆ ಮಾತನಾಡುತ್ತಾರೆ. ಬಿಗ್ ಬಾಸ್​ ಕಾರ್ಯಕ್ರಮದ ನವೆಂಬರ್​ 25ರ ಎಪಿಸೋಡ್​ನಲ್ಲಿ ದರ್ಶನ್ ಅವರ ಹಾಡು ಕೇಳಿಸಿದೆ! ಆದರೆ ಅದು ಮುಂಜಾನೆ ಕೇಳಿಬರುವ ಸಾಂಗ್ ಅಲ್ಲ.

ಬಿಗ್ ಬಾಸ್​ ಆಟದಲ್ಲಿ ರಾಜಾಡಳಿತದ ಟಾಸ್ಕ್​ ನೀಡಲಾಗಿದೆ ಕ್ಯಾಪ್ಟನ್ ಮಂಜು ಅವರು ಮಹಾರಾಜ ಆಗಿದ್ದಾರೆ. ತ್ರಿವಿಕ್ರಮ್​ ಮತ್ತು ರಜತ್ ಅವರು ಸೇನಾಧಿಪತಿಗಳಾಗಿದ್ದಾರೆ. ಗೋಲ್ಡ್​ ಸುರೇಶ್ ಅವರು ಸಲಹಗಾರನಾಗಿದ್ದಾರೆ. ಇನ್ನುಳಿದವರು ಪ್ರಜೆಗಳಾಗಿದ್ದಾರೆ. ಮಹಾರಾಜ ಮಂಜು ಹೇಳಿದಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಒಂದು ಹಾಡು ಹೇಳಿ ಎಂದು ರಜತ್​ಗೆ ಮಂಜು ಆಜ್ಞೆ ಮಾಡಿದರು. ಆಗ ರಜತ್ ಅವರು ‘ಕರಿಯ’ ಸಿನಿಮಾದ ಹಾಡು ಹೇಳಿದರು.

ರಜತ್ ಅವರು ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ ಹೆಂಗವ್ಳಾ ನಿನ್​ ಡವ್​ಗಳು..’ ಹಾಡನ್ನು ಹೇಳಿದರು. ಪುನಃ ಅದೇ ಹಾಡನ್ನು ಹೇಳುತ್ತಾ ಡ್ಯಾನ್ಸ್ ಮಾಡುವಂತೆ ಮಂಜು ಆದೇಶಿಸಿದರು. ಎರಡನೇ ಬಾರಿ ರಜತ್ ಅವರು ಡ್ಯಾನ್ಸ್ ಮಾಡುತ್ತಾ ಆ ಸಾಂಗ್ ಹೇಳಿದರು. ರಜತ್ ಡ್ಯಾನ್ಸ್ ಮಾಡಿದ ಪರಿ ಕಂಡು ಎಲ್ಲರೂ ನಗುತ್ತಾ ಎಂಜಾಯ್ ಮಾಡಿದರು. ಈ ಮೂಲಕವಾದರೂ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ನಟನೆಯ ಸಿನಿಮಾದ ಹಾಡು ಕಿವಿಗೆ ಬೀಳುವಂತಾಗಿದೆ.

ಇದನ್ನೂ ಓದಿ: ‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಜಿ. ಪರಮೇಶ್ವರ್

‘ಕರಿಯ’ ಸಿನಿಮಾ 2003ರಲ್ಲಿ ತೆರೆಕಂಡಿತ್ತು. ದರ್ಶನ್​ ನಟನೆಯ ಆ ಸಿನಿಮಾಗೆ ಪ್ರೇಮ್​ ನಿರ್ದೇಶನ ಮಾಡಿದ್ದರು. ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ವಿ. ನಾಗೇಂದ್ರ ಪ್ರಸಾದ್​ ಅವರು ಬರೆದ ‘ಕೆಂಚಾಲೋ ಮಂಚಾಲೋ..’ ಹಾಡಿಗೆ ಸಿ. ಅಶ್ವತ್, ಗುರುರಾಜ್​ ಹೊಸಕೋಟೆ, ಮುರಳಿ ಮೋಹನ್ ಧ್ವನಿ ನೀಡಿದ್ದರು. ಈ ವರ್ಷ ಕೂಡ ‘ಕರಿಯ’ ಸಿನಿಮಾ ಮರು ಬಿಡುಗಡೆ ಆದಾಗ ದರ್ಶನ್​ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದರು. ‘ಕೆಂಚಾಲೋ ಮಂಚಾಲೋ..’ ಹಾಡು ಚಿತ್ರಮಂದಿರದಲ್ಲಿ ಬಂದಾಗ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದರು. ಆ ಹಾಡಿಗೆ ಇರುವ ತಾಕತ್ತು ಅಂಥದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ