AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಲ್ಲಿ ಶಮಿತಾ ಶೆಟ್ಟಿಗೆ ಕಾದಿದೆ ಬಿಗ್​ ಸರ್​ಪ್ರೈಸ್​; ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆ ಸೇರುವವರು ಯಾರು?

ಬಿಗ್​ ಬಾಸ್ ಪ್ರತಿ ಸೀಸನ್​ನಲ್ಲೂ ಕೆಲವರನ್ನು ವೈಲ್ಡ್​ ಕಾರ್ಡ್​ ಮೂಲಕ ತರಲಾಗುತ್ತದೆ. ಈ ರೀತಿ ಅರ್ಧದಲ್ಲಿ ಬಿಗ್​ ಬಾಸ್​ ಪ್ರವೇಶಿಸುವವರು ಮೊದಲೇ ಖ್ಯಾತಿ ಪಡೆದುಕೊಂಡಿದ್ದರೆ ವೀಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುತ್ತಾರೆ.

ಬಿಗ್​ ಬಾಸ್​ನಲ್ಲಿ ಶಮಿತಾ ಶೆಟ್ಟಿಗೆ ಕಾದಿದೆ ಬಿಗ್​ ಸರ್​ಪ್ರೈಸ್​; ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆ ಸೇರುವವರು ಯಾರು?
ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿ
TV9 Web
| Edited By: |

Updated on: Oct 20, 2021 | 6:22 PM

Share

‘ಬಿಗ್​ ಬಾಸ್​ ಸೀಸನ್​ 15’ ಆರಂಭವಾಗಿ ಕೆಲವು ವಾರಗಳು ಕಳೆದಿವೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಸೇರಿ ಸಾಕಷ್ಟು ಮಂದಿ ಇಲ್ಲಿ ಹೈಲೈಟ್​ ಆಗುತ್ತಿದ್ದಾರೆ. ಇದರ ಜತೆಗೆ ಮನೆಯಲ್ಲಿ ಕಿತ್ತಾಟಗಳು ಕೂಡ ಹೈಲೈಟ್​ ಆಗುತ್ತಿವೆ. ಈ ಮಧ್ಯೆ ಬಿಗ್​​ ಬಾಸ್​ನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಸರ್​ಪ್ರೈಸ್​ ಒಂದು ಕಾದಿದೆ ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಹಾಗಾದರೆ, ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಮನೆ ಸೇರುವ ಸ್ಪರ್ಧಿ ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಒಟಿಟಿಯಲ್ಲಿ ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ತುಂಬ ಆಪ್ತವಾಗಿದ್ದರು. ಪರಸ್ಪರ ಕಿಸ್​ ಮಾಡಿಕೊಳ್ಳುವ ಮಟ್ಟಕ್ಕೆ ಅವರ ನಡುವೆ ಆಪ್ತತೆ ಬೆಳೆದಿತ್ತು. ಬಿಗ್​ ಬಾಸ್​ ಶೋ ಮುಗಿದ ಬಳಿಕವೂ ಅವರು ತಮ್ಮ ಲವ್ವಿ-ಡವ್ವಿ ಮುಂದುವರಿಸಿದ್ದರು. ರಾಕೇಶ್​ ಮತ್ತು ಶಮಿತಾ ಜೊತೆಯಾಗಿ ಸುತ್ತಾಡಿದ್ದರು. ಆದರೆ, ಬಿಗ್​ ಬಾಸ್​ 15ರಲ್ಲಿ ಶಮಿತಾ ಮಾತ್ರ ಎಂಟ್ರಿ ಕೊಟ್ಟಿದ್ದರು. ರಾಕೇಶ್​ ಮಿಸ್​ ಆಗಿದ್ದರು. ಈಗ ರಾಕೇಶ್​ ವೈಲ್ಡ್​ ಕಾರ್ಡ್​​ ಮೂಲಕ ಬಿಗ್​ ಬಾಸ್​ ಪ್ರವೇಶಿಸಲಿದ್ದಾರೆ. ಈ ಮೂಲಕ ಶಮಿತಾ ಅವರನ್ನು ಸೇರಲಿದ್ದಾರೆ.

ಬಿಗ್​ ಬಾಸ್ ಪ್ರತಿ ಸೀಸನ್​ನಲ್ಲೂ ಕೆಲವರನ್ನು ವೈಲ್ಡ್​ ಕಾರ್ಡ್​ ಮೂಲಕ ತರಲಾಗುತ್ತದೆ. ಈ ರೀತಿ ಅರ್ಧದಲ್ಲಿ ಬಿಗ್​ ಬಾಸ್​ ಪ್ರವೇಶಿಸುವವರು ಮೊದಲೇ ಖ್ಯಾತಿ ಪಡೆದುಕೊಂಡಿದ್ದರೆ ವೀಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುತ್ತಾರೆ. ಈ ಕಾರಣಕ್ಕೆ ರಾಕೇಶ್​ ಅವರನ್ನು ಕರೆತರಲು ವಾಹಿನಿ ನಿರ್ಧರಿಸಿದೆ.

ರಾಕೇಶ್​ ಅವರು ಬಿಗ್​ ಬಾಸ್​ ಒಟಿಟಿ ಮೂಲಕ ಹೆಸರು ಮಾಡಿದ್ದಾರೆ. ಅವರನ್ನು ವೈಲ್ಡ್​ ಕಾರ್ಡ್​ ಮೂಲಕ ಕರೆ ತರಬೇಕು ಎಂಬ ಆಲೋಚನೆ ವಾಹಿನಿಯದ್ದಾಗಿತ್ತು. ಈ ಕಾರಣಕ್ಕೆ ಆರಂಭದಲ್ಲಿ ಅವರನ್ನು ಮನೆ ಒಳಗೆ ಕಳುಹಿಸಿರಲಿಲ್ಲ. ಈ ವಾರಾಂತ್ಯದಲ್ಲಿ ಅವರು ದೊಡ್ಮನೆ ಸೇರಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Shamita Shetty: ಇಂಗ್ಲೀಷ್​ನಲ್ಲಿ ಮಾತನಾಡಿದ್ದಕ್ಕೆ ನಾಮಿನೇಟ್ ಆದ ಶಮಿತಾ; ಇದೆಂಥಾ ಕಾರಣ ಎಂದು ಕಿಡಿಕಾರಿದ ನೆಟ್ಟಿಗರು

ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ