AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾ, ಸಿಹಿ ಇಬ್ಬರೇ ಇದ್ದ ಜೀವನದಲ್ಲಿ ರಾಮನ ಆಗಮನವಾಗುತ್ತಾ?

Seetha Raama Serial: ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಸೀತಾ ಬದುಕಿನಲ್ಲಿ ಮುಂದುವರಿಯಲಿ ಎಂಬುದು ಪ್ರೀಯಾಳ ಆಸೆ. ಆದರೆ ಸೀತಾಳ ನಿರ್ಧಾರ ಮಾತ್ರ ಎಂದಿಗೂ ಬದಲಾಗದು. ಅವರಿಬ್ಬರ ಪ್ರಪಂಚದಲ್ಲಿ ರಾಮನ ಆಗಮನವಾಗುತ್ತಾ?...

Seetha Raama Serial: ಸೀತಾ, ಸಿಹಿ ಇಬ್ಬರೇ ಇದ್ದ ಜೀವನದಲ್ಲಿ ರಾಮನ ಆಗಮನವಾಗುತ್ತಾ?
ಸೀತಾ ರಾಮ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.

Updated on: Aug 23, 2023 | 10:05 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 28: ಹೆಲಿಕೊಪ್ಟರ್ ನಲ್ಲಿ ಹೋಗುವುದನ್ನು ತಡೆದ ಸೀತಾ, ರಾಮ್ ಮತ್ತು ಸಿಹಿಗೆ ಮನೆ ಕೆಲಸ ಮಾಡಲು ಹೇಳುತ್ತಾಳೆ. ಏನು ಅರಿಯದ ರಾಮ್ ಮೊದಲ ಬಾರಿಗೆ ಲುಂಗಿ ತೊಟ್ಟು ಕಸ ಗುಡಿಸುತ್ತಾನೆ. ಇಬ್ಬರೂ ಕಷ್ಟ ಪಟ್ಟು ಹಾಗೋ ಹೀಗೋ ಮನೆ ಸ್ವಚ್ಛ ಮಾಡುತ್ತಾರೆ. ಸೀತಾ ಕೂಡ ಚೇಷ್ಟೆ ಮಾಡಿಕೊಂಡು ರಾಮನನ್ನು ಕಿಚಾಯಿಸಿ ಖುಷಿ ಪಡುತ್ತಾಳೆ. ಇದನ್ನು ನೋಡಿದ ಸಿಹಿ, ತನ್ನ ಅಮ್ಮನನ್ನು ನಗಿಸಿದ್ದಕ್ಕಾಗಿ ರಾಮನಿಗೆ ಧನ್ಯವಾದ ಹೇಳುತ್ತಾಳೆ. ಇನ್ನೂ ರಾಮ್ ಕೂಡ ಮನೆ ಕಡೆ ಹೊರಡುತ್ತಾನೆ. ಲಾಯರ್ ವಿಚಾರವಾಗಿ ಸೀತಾಳನ್ನು ಕೇಳಿದರೂ ಸಿಹಿ ಇರುವ ಕಾರಣ ಯಾವ ವಿಚಾರವನ್ನೂ ಹೇಳುವುದಿಲ್ಲ.

ಮಲೇಷ್ಯಾಗೆ ಹೋಗುವ ಪ್ಲಾನ್ ರದ್ದು ಇನ್ನು ಅಶೋಕ್ ಬಳಿ ರಾಮ್ ಸೀತಾಳ ಗುಣಗಾನ ಮಾಡುತ್ತಾನೆ. ಅವಳ ನಡೆ ನುಡಿ ಮೆಚ್ಚಿಕೊಳ್ಳುತ್ತಾನೆ. ಜೊತೆಗೆ ಅಡ್ವಾನ್ಸ್ ಸ್ಯಾಲರಿ ಕೊಡಿಸುವ ವಿಚಾರವಾಗಿಯೂ ಮಾತನಾಡುತ್ತಾನೆ. ಅವನಿಗೆ ಸೀತಾ ಅದೇ ಮನೆಯಲ್ಲಿಯೇ ವಾಸಿಸಬೇಕು, ಸಿಹಿ ಅದೇ ಮನೆಯಲ್ಲಿಯೇ ತನ್ನ ಬಾಲ್ಯವನ್ನು ಕಳೆಯಬೇಕು ಎನ್ನುವ ಹಂಬಲ ಹಾಗಾಗಿ ಸೀತಾಳಿಗೆ ಸಹಾಯ ಮಾಡುವುದು ಅವನ ಮುಖ್ಯ ಉದ್ದೇಶ. ಅದಕ್ಕೆ ಅಶೋಕ್ ಕೂಡ ಸಾತ್ ನೀಡುತ್ತಾನೆ. ಇದೆಲ್ಲದರ ಜೊತೆ ರಾಮ್ ಮಲೇಷ್ಯಾಗೆ ಹೋಗುವ ಪ್ಲಾನ್ ಅನ್ನು ರದ್ದುಗೊಳಿಸುತ್ತಾನೆ.

ಇನ್ನು ಸೀತಾಳ ಗೆಳತಿ ಪ್ರೀಯಾ ತನಗೆ ಅಶೋಕ್ ಮೇಲಿರುವ ಪ್ರೀತಿಯನ್ನು ಅವಳ ಬಳಿ ಹಂಚಿಕೊಳ್ಳುತ್ತಾಳೆ. ಆದರೆ ಸೀತಾಳದ್ದು ಮಾತ್ರ ಒಂದೇ ಉತ್ತರ “ಬೆಲೆಬಾಳುತ್ತೆ ಎಂದು ಚಿನ್ನದ ಸೂಜಿಯನ್ನು ಚುಚ್ಚಿಕೊಳ್ಳಕಾಗುತ್ತಾ?”. ಆದರೆ ಪ್ರೀಯಾಳದ್ದು ಮಾತ್ರ ಕೋಟ್ಯಾಧಿಪತಿ ಅಶೋಕ್ ನನ್ನು ಮದುವೆಯಾಗುವ ಹಂಬಲ. ಅದನ್ನೇ ಸೀತಾಗೂ ಹೇಳುತ್ತಾಳೆ. ಆದರೆ ಅದನ್ನೆಲ್ಲಾ ಕೇಳುವ ಮನಸ್ಥಿತಿ ಸೀತಾಳದ್ದಲ್ಲ. ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಸೀತಾ ಬದುಕಿನಲ್ಲಿ ಮುಂದುವರಿಯಲಿ ಎಂಬುದು ಪ್ರೀಯಾಳ ಆಸೆ. ಆದರೆ ಸೀತಾಳ ನಿರ್ಧಾರ ಮಾತ್ರ ಎಂದಿಗೂ ಬದಲಾಗದು. ಅವರಿಬ್ಬರ ಪ್ರಪಂಚದಲ್ಲಿ ರಾಮನ ಆಗಮನವಾಗುತ್ತಾ?… ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್