AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ವಠಾರದಲ್ಲಿ ಗಣೇಶನ ಹಬ್ಬ ನಡೆಯುತ್ತಾ?

Seetha Raama:ನನ್ನ ಬದುಕಿನ ಮುಖ್ಯವಾದ ವ್ಯಕ್ತಿಗಳಲ್ಲಿ ಸಿಹಿಯೂ ಒಬ್ಬಳು ಎನ್ನುತ್ತಾನೆ ರಾಮ್. ನನ್ನಿಂದ ಅವಳನ್ನು ದೂರ ಮಾಡಬೇಡಿ ಎಂದು ಸೀತಾ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ಕಾದು ನೋಡೋಣ.

ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ವಠಾರದಲ್ಲಿ ಗಣೇಶನ ಹಬ್ಬ ನಡೆಯುತ್ತಾ?
ಸೀತಾ-ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 20, 2023 | 11:48 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 49: ಸಿಹಿಗೆ ತಮ್ಮ ವಠಾರದಲ್ಲಿ ಗಣೇಶನನ್ನು ಕೂರಿಸುವ ಸಂಭ್ರಮ. ಮಕ್ಕಳೆಲ್ಲಾ ಸೇರಿ ಅಲ್ಪ ಸ್ವಲ್ಪ ದುಡ್ಡು ಒಟ್ಟುಗೂಡಿಸಿ, ಹೆಚ್ಚು ಬೇಕಿರುವ ದುಡ್ಡಿಗೆ ಏನು ಮಾಡುವುದು ಎಂದು ಚಿಂತೆ ಮಾಡುತ್ತಾರೆ. ಅಷ್ಟೇ ಹೊತ್ತಿಗೆ ಸಿಹಿ ತಾನು ನನ್ನ ಗೆಳೆಯನನ್ನು ಕೇಳುವೆ ಎನ್ನುತ್ತಾಳೆ. ಇನ್ನು ಸೀತಾ ಮನೆಗೆ ಬಂದ ಅವಳ ಅಣ್ಣ, ಹಣ ಕೇಳುತ್ತಾನೆ. ಇಲ್ಲ ಎಂದರೂ ಕೇಳದೆ ಇರುವಷ್ಟು ಹಣವನ್ನು ಕಿತ್ತುಕೊಂಡು ಹೋಗುತ್ತಾನೆ.

ಇತ್ತ ಸಿಹಿ, ರಾಮನಿಗೆ ಗಣಪನನ್ನು ಕೂರಿಸಲು ಹಣ ಕೊಡು ಎಂದು ಫೋನ್ ಮಾಡಿ ಕೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೂ ಬಂದ ಸೀತಾಳ ಅಣ್ಣ ಅವಳು ಮನೆ ಮನೆ ತಿರುಗಿ ಒಟ್ಟು ಮಾಡಿಟ್ಟ ಹಣವನ್ನೂ ಹಿಂದೂ ಮುಂದೂ ನೋಡದೆಯೇ ಕಿತ್ತು ಹೋಗುತ್ತಾನೆ. ಇದೆಲ್ಲವನ್ನು ಫೋನ್ ನಲ್ಲಿ ನೋಡುತ್ತಿದ್ದ ರಾಮ್ ಅವಳ ಮನೆಗೆ ಬರುತ್ತಾನೆ. ಕೋಪದಲ್ಲಿಯೇ ಜೋರಾಗಿ ಅಳುತ್ತಾ ಮನೆಗೆ ಬಂದ ಸಿಹಿ ಸೀತಮ್ಮನ ಬಳಿ ಮಾವ ಮಾಡಿದ ಕೆಲಸವನ್ನು ಹೇಳುತ್ತಾಳೆ. ಎಲ್ಲರೂ ನಂಗೆ ಮೋಸ ಮಾಡುತ್ತಾರೆ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ಅವಳನ್ನು ಸಮಾಧಾನ ಮಾಡಿದ ರಾಮ್ ತಾನು ಗಣೇಶನನ್ನು ತರುವುದಾಗಿ ಸಿಹಿಗೆ ಪ್ರಾಮೀಸ್ ಮಾಡುತ್ತಾನೆ. ಅದನ್ನು ನೋಡಿದ ಸೀತಾ ಮಕ್ಕಳಿಗೆ ಹಾಗೆಲ್ಲಾ ಆಣೆ – ಪ್ರಮಾಣ ಮಾಡಿ ಕಲಿಸಬೇಡಿ ಎನ್ನುತ್ತಾಳೆ. ಅದಕ್ಕೆ ರಾಮ್ ನನ್ನ ಬದುಕಿನ ಮುಖ್ಯವಾದ ವ್ಯಕ್ತಿಗಳಲ್ಲಿ ಸಿಹಿಯೂ ಒಬ್ಬಳು. ನನ್ನಿಂದ ಅವಳನ್ನು ದೂರ ಮಾಡಬೇಡಿ ಎಂದು ಸೀತಾ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್