AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ರಾಮ್ ಖುಷಿಗೆ ಸಿಹಿಯೇ ಕಾರಣ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಸ್ಪರ್ಧೆಯಲ್ಲಿ ಗೆಲ್ಲುತ್ತಾಳಾ ಸಿಹಿ?

Seetha Raama: ಸಿಹಿ ಗಣಪ ಇಲ್ಲದೇ ನಾವು ಸೋಲುತ್ತೇವೆ ಎಂದು ನೆನೆಸಿಕೊಂಡು ಸಪ್ಪಗೆ ಕೂರುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ರಾಮ್, ಪ್ಲಾನ್ ಮಾಡಿ ಗಣಪನನ್ನು ಕೂರಿಸಲು ಹಣ ಒಟ್ಟುಗೂಡಿಸಿ. ಗಣಪತಿಯನ್ನು ತರುತ್ತಾನೆ. ಆ ಅದ್ದೂರಿ ಮೆರವಣಿಗೆ ನೋಡಿ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ರಾಮ್ ನಿಂದಾಗಿ, ಸ್ಪರ್ಧೆಯಲ್ಲಿ ಗೆಲ್ಲುತ್ತಾಳ ಸಿಹಿ? ಭಾರ್ಗವಿ ಕೊಟ್ಟ ಗಣಪ ಮನೆಗೆ ಬಾರದ್ದು ರಾಮನಿಂದ ಎಂಬುದು ಅವಳಿಗೆ ತಿಳಿಯುತ್ತಾ? ಕಾದು ನೋಡೋಣ.

Seetha Raama: ರಾಮ್ ಖುಷಿಗೆ ಸಿಹಿಯೇ ಕಾರಣ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಸ್ಪರ್ಧೆಯಲ್ಲಿ ಗೆಲ್ಲುತ್ತಾಳಾ ಸಿಹಿ?
ಸೀತಾ-ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 21, 2023 | 10:47 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 50: ದುಡ್ಡನ್ನು ಮಾವ ಕಿತ್ತುಕೊಂಡು ಹೋದದ್ದಕ್ಕೆ ಬೇಸರ ಪಟ್ಟುಕೊಂಡ ಸಿಹಿಯನ್ನು ವಠಾರದ ಮಕ್ಕಳೆಲ್ಲಾ ಬಂದು ಸಮಾಧಾನ ಮಾಡುತ್ತಾರೆ. ಜೊತೆಗೆ ಮಣ್ಣಿನ ಗಣಪತಿಯನ್ನು ಎಲ್ಲರೂ ಒಟ್ಟಿಗೆ ಸೇರಿ ಮಾಡೋಣ ಎನ್ನುತ್ತಾರೆ. ಹಾಗೆಯೇ ವಠಾರದವರೆಲ್ಲಾ ಒಟ್ಟು ಗೂಡಿ ತಮ್ಮ ತಮ್ಮ ಕೈಲಾದಷ್ಟು ಗಣಪತಿ ಮಾಡುತ್ತಾರೆ. ಇನ್ನು ಸಿಹಿ ಕೂಡ ರಾಮನಿಗೆ ಗಣಪತಿ ತರುವುದು ಬೇಡ ನಾವೇ ಗಣಪತಿ ಮಾಡುತ್ತೇವೆ ಎಂದು ಸೀತಮ್ಮ ಒತ್ತಾಯ ಮಾಡಿದ್ದಕ್ಕೆ ಹೇಳುತ್ತಾಳೆ. ಆದರೆ ಅವಳ ಮಾತನ್ನು ಒಪ್ಪದ ರಾಮ್ ಅವಳಿಗೆ ಖುಷಿ ಪಡಿಸಲು ನಿರ್ಧಾರ ಮಾಡುತ್ತಾನೆ. ಅದಕ್ಕೆ ಅಶೋಕ್ ಕೂಡ ಕೈ ಜೋಡಿಸುತ್ತಾನೆ.

ಇನ್ನು ಖುಷಿ ತನ್ನ ಎಲ್ಲ ಆಸೆಗಳನ್ನು ಪೂರೈಸಲು ಗಣೇಶನ ಬಳಿ ಬೇಡಿಕೆ ಇಡುತ್ತಾಳೆ. ಹೆಲಿಕಾಪ್ಟರ್ ನಲ್ಲಿ ಹೋಗುವಂತೆ ಮಾಡು ಅದಕ್ಕಾಗಿ ದಿನಪೂರ್ತಿ ಉಪವಾಸ ಮಾಡುತ್ತೇನೆ ಎಂದು ಬೇಡಿಕೊಳ್ಳುತ್ತಾಳೆ. ರಾಮ್ ಮನೆಯಲ್ಲಿ ಕೂಡ ಹಬ್ಬದ ಕಳೆ ಗಟ್ಟಿರುತ್ತದೆ. ಹಬ್ಬಕ್ಕೆ ಗಣಪನನ್ನು ತರಲು ಹೋದ ರಾಮ್ ಮತ್ತು ಅಶೋಕ್ ತಮ್ಮ ಮನೆಗೆ ತರಬೇಕಾದ ಗಣಪನನ್ನು ಸಿಹಿ ಮನೆಗೆ ಕಳುಹಿಸುತ್ತಾನೆ. ಮನೆಯಿಂದ ಖುಷಿ ಖುಷಿಯಲ್ಲಿ ಹೊರಟ ರಾಮ್ ನನ್ನು ನೋಡಿದ ಭಾರ್ಗವಿ ಅದಕ್ಕೆ ಕಾರಣ ತಿಳಿಯಲು ಹಪಹಪಿಸುತ್ತಾಳೆ.

ಇದನ್ನೂ ಓದಿ:‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ

ಹೊಸ ಬಟ್ಟೆ ಹಾಕಿ ರೆಡಿ ಆದ ಸಿಹಿ ಗಣಪ ಇಲ್ಲದೇ ನಾವು ಸೋಲುತ್ತೇವೆ ಎಂದು ನೆನೆಸಿಕೊಂಡು ಸಪ್ಪಗೆ ಕೂರುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ರಾಮ್, ಪ್ಲಾನ್ ಮಾಡಿ ಗಣಪನನ್ನು ಕೂರಿಸಲು ಹಣ ಒಟ್ಟುಗೂಡಿಸಿ. ಗಣಪತಿಯನ್ನು ತರುತ್ತಾನೆ. ಆ ಅದ್ದೂರಿ ಮೆರವಣಿಗೆ ನೋಡಿ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ರಾಮ್ ನಿಂದಾಗಿ ಸ್ಪರ್ಧೆಯಲ್ಲಿ ಗೆಲ್ಲುತ್ತಾಳ ಸಿಹಿ? ಭಾರ್ಗವಿ ಕೊಟ್ಟ ಗಣಪ ಮನೆಗೆ ಬಾರದ್ದು ರಾಮನಿಂದ ಎಂಬುದು ಅವಳಿಗೆ ತಿಳಿಯುತ್ತಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!