AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಪರಿಸ್ಥಿತಿಗೆ ಕಟ್ಟುಬಿದ್ದ ಸೀತಾ; ಲಾಯರ್ ಮಾಡಿದ ಕುತಂತ್ರ ಫಲಿಸುತ್ತಾ?

‘ಸೀತಾ ರಾಮ’ ಧಾರಾವಾಹಿ ಸಂಚಿಕೆ 16: ಲಾಯರ್ ಮತ್ತು ಸೀತಾಳ ಅತ್ತಿಗೆ ಮಾಡಿದ ಕುತಂತ್ರ ಸೀತಾಳನ್ನು ಕಟ್ಟು ಹಾಕಿದೆ. ಸೀತಾ ಮತ್ತು ಸಿಹಿಗೆ ಸಹಾಯ ಮಾಡಿ ರಾಮ್ ಇವವರ ಬದುಕನ್ನೇ ಬದಲಿಸಬಹುದು.

Seetha Raama Serial: ಪರಿಸ್ಥಿತಿಗೆ ಕಟ್ಟುಬಿದ್ದ ಸೀತಾ; ಲಾಯರ್ ಮಾಡಿದ ಕುತಂತ್ರ ಫಲಿಸುತ್ತಾ?
ಸೀತಾ-ಸಿಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Aug 08, 2023 | 8:35 AM

Share

ಕಾಫಿ ಮಾಡಿದ ರಾಮ

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 16: ಮುಂಜಾನೆಯ ಬೆಳಕು ರಾಮನ ಕೋಣೆಗೆ ಬೀಳುತ್ತಿದ್ದಂತೆ ಅಲಾರಂ ತನ್ನ ಕೆಲಸ ಆರಂಭಿಸಿದೆ. ಆ ಶಬ್ದ ಕೇಳುತ್ತಿದ್ದಂತೆ ರಾಮ್​ಗೆ ಸೀತಾ ಮಾಡಿದ ಶಿಸ್ತಿನ ಪಾಠ ನೆನಪಾಗಿ, ಥಟ್ಟಂತ ಎಚ್ಚರಗೊಳ್ಳುತ್ತಾನೆ. ಅಡುಗೆ ಮನೆಗೆ ಹೋಗಿ ಅವನೇ ಕಾಫಿ ಮಾಡುತ್ತಾನೆ. ಆದರೆ ಉಪ್ಪು ಯಾವುದು? ಸಕ್ಕರೆ ಯಾವುದು? ತಿಳಿಯದೇ ಪರದಾಡುತ್ತಾನೆ. ಇದನ್ನೆಲ್ಲಾ ಕಂಡ ಭಾರ್ಗವಿ ಸಿಟ್ಟಿನಿಂದ ಕೆಲಸದವರ ಮೇಲೆ ಕೂಗಾಡುತ್ತಾಳೆ. ಅದಕ್ಕೆ ರಾಮ್ ತಾನೇ ಅಡುಗೆ ಮನೆಗೆ ಬಂದಿರುವುದಾಗಿ ಚಿಕ್ಕಿಗೆ ತಿಳಿಸಿ, ತಮ್ಮ ಆಫೀಸಿಗೆ ಮಹಿಳೆಯರು ಬೆಳಿಗ್ಗೆ ಎಷ್ಟೆಲ್ಲಾ ಕೆಲಸ ಮಾಡಿ ಬರುತ್ತಾರೆ ಎಂಬ ಬಗ್ಗೆ ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ತಾತನಿಗೆ, ರಾಮ ಲೋಕಾರೂಢಿಯಾಗಿ ಮಾತನಾಡುತ್ತಿರುವುದನ್ನು ಕೇಳಿ ಬಹಳ ಸಂತೋಷವಾಗುತ್ತದೆ. ಇದಕ್ಕೆಲ್ಲಾ ಸೀತಾ ಕಾರಣ ಎಂಬುದು ತಾತ ಮತ್ತು ಅಶೋಕನಿಗೆ ತಿಳಿಯುತ್ತದೆ. ಜೊತೆಗೆ ದೇಸಾಯಿ ಮನೆ ಹಿರಿ ತಲೆ ತಾತನಿಗೆ ತನ್ನ ಮೊಮ್ಮಗ ಬದಲಾಗುತ್ತಿದ್ದಾನೆ ಎಂಬುದು ತುಂಬಾ ಖುಷಿ ನೀಡುತ್ತದೆ.

ಅರಮನೆಗೆ ಪತ್ರ ಬರೆದ ಸಿಹಿ

ಇನ್ನು ಸಿಹಿ ಅರಮನೆಗೆ ಪತ್ರ ಬರೆಯುತ್ತಿದ್ದಾಳೆ. ಅರಮನೆ ಮನೆಗೆ ಬಂದರೆ ಏನು ಮಾಡಬೇಕು ಎಂಬುದನ್ನು ಬರೆದಿಟ್ಟಿದ್ದಾಳೆ. ಅದನ್ನು ಮನೆ ಮುಂದಿನ ಬಾಗಿಲಿನ ಮೇಲೆ ಅಂಟಿಸಿದ್ದಾಳೆ. ಅವಳ ಮುಗ್ಧತೆ ಎಲ್ಲರಿಗೂ ಇಷ್ಟ ಆಗಿದೆ.

ಇದನ್ನೂ ಓದಿ: ಪೂಜಾ ಲೋಕೇಶ್ ಸಂದರ್ಶನ: ‘ಸೀತಾ ರಾಮ’ ಧಾರಾವಾಹಿಯ ವಿಲನ್ ಪಾತ್ರದ ಬಗ್ಗೆ ಮಾತನಾಡಿದ ನಟಿ

ಸೀತಾಳಿಗೆ ಅತ್ತಿಗೆ ಕಾಟ..

ಮನೆಯ ನೋಟಿಸ್ ವಿಚಾರವನ್ನು ಕೇಳಲು ಸೀತಾಳ ಅತ್ತಿಗೆ ಬಂದಿದ್ದಾಳೆ. ಅದರ ಜೊತೆಗೆ ‘ಲಾಯರ್ ರುದ್ರ ಪ್ರತಾಪನಿಗೆ ಫೋನ್ ಮಾಡಿ ಈ ವಿಷಯ ಹೇಳು, ಇಲ್ಲವಾದಲ್ಲಿ ನೀನು ಜೈಲಿಗೆ ಹೋಗಬೇಕಾಗುತ್ತದೆ’ ಎಂಬ ಒತ್ತಡವನ್ನೂ ಹಾಕುತ್ತಾಳೆ. ಅತ್ತಿಗೆ ಮಾತಿಗೆ ಹೆದರಿದ ಸೀತಾ ಕೊನೆಗೂ ಲಾಯರ್​ಗೆ ಕಾಲ್ ಮಾಡಿದ್ದಾಳೆ. ಸರಿಯಾದ ಸಮಯವನ್ನು ಉಪಯೋಗಿಸಿಕೊಂಡ ರುದ್ರ ಇದನ್ನೆಲ್ಲಾ ಆಫೀಸ್ ಅಲ್ಲಿ ಕುಳಿತು ಮಾತನಾಡಬೇಕು ಎಂದು ನೆಪ ಹೇಳಿ ಸೀತಾಳನ್ನು ಕರೆಯುತ್ತಾನೆ. ದಿಕ್ಕು ತೋಚದೇ ಸೀತಾ ಮುಂದೇನು ಎಂದು ಚಿಂತಿಸುತ್ತಾಳೆ. ಆದರೆ ಸಿಹಿಯ ಪ್ರೀತಿ, ಅವಳ ಅಪ್ಪುಗೆ ಅದೆಲ್ಲವನ್ನೂ ಮರೆಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Tue, 8 August 23

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!