AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವರೆಲ್ಲ ಮನುಷ್ಯರಾ?’; ಮುಖಕ್ಕೆ ಹೊಡೆದಂತೆ ಹೇಳಿದ ವರ್ತೂರು ಸಂತೋಷ್

ಟಾಸ್ಕ್ ಗೆದ್ದವರಿಗೆ ಬಿಗ್ ಬಾಸ್ ಪಾಯಿಂಟ್ಸ್ ನೀಡುತ್ತಿದ್ದರು. ಇದನ್ನು ಬಳಕೆ ಮಾಡಿಕೊಂಡು ಗ್ರೋಸರಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದರು. ಈ ವೇಳೆ ಎಲ್ಲರೂ ಕಿತ್ತಾಡಿಕೊಂಡಿದ್ದಾರೆ.

‘ಇವರೆಲ್ಲ ಮನುಷ್ಯರಾ?’; ಮುಖಕ್ಕೆ ಹೊಡೆದಂತೆ ಹೇಳಿದ ವರ್ತೂರು ಸಂತೋಷ್
ವರ್ತೂರು ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: Dec 23, 2023 | 7:25 AM

ಬಿಗ್ ಬಾಸ್ ಮನೆಯಲ್ಲಿ ಗೆಳೆತನ, ಪ್ರೀತಿಗೆ ಬೆಲೆ ನೀಡೋಕೆ ಸ್ಪರ್ಧಿಗಳು ಹಿಂದೇಟು ಹಾಕುತ್ತಾರೆ. ಒಳ್ಳೆಯ ರೀತಿಯಲ್ಲಿ ವರ್ತಿಸುವ ಕೆಲವರು ನಂತರ ಉಲ್ಟಾ ಹೊಡೆಯುತ್ತಾರೆ. ಯಾರು ಯಾವಾಗ ಬೇಕಾದರೂ ಬದಾಗುತ್ತಾರೆ. ಈ ವಿಚಾರ ವರ್ತೂರು ಸಂತೋಷ್ (Varthur Santosh) ಅವರಿಗೆ ಸ್ಪಷ್ಟವಾಗಿದೆ. ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ‘ಇವರೆಲ್ಲ ಮನುಷ್ಯರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತವಾಗಿ ಲೈವ್ ವೀಕ್ಷಿಸುವ ಅವಕಾಶ ಇದೆ.

ಬಿಗ್ ಬಾಸ್ ಮನೆಯಲ್ಲಿ ಹಣದ ಮಾತೇ ಬರುವುದಿಲ್ಲ. ಬಿಗ್ ಬಾಸ್ ಏನು ನೀಡುತ್ತಾರೋ ಅದನ್ನೇ ಬಳಕೆ ಮಾಡಿಕೊಳ್ಳಬೇಕು. ಆದರೆ, ಈ ವಾರ ಸ್ಪರ್ಧಿಗಳಿಗೆ ಒಂದು ಅವಕಾಶ ಸಿಕ್ಕಿತ್ತು. ಟಾಸ್ಕ್ ಗೆದ್ದವರಿಗೆ ಬಿಗ್ ಬಾಸ್ ಪಾಯಿಂಟ್ಸ್ ನೀಡುತ್ತಿದ್ದರು. ಇದನ್ನು ಬಳಕೆ ಮಾಡಿಕೊಂಡು ಗ್ರೋಸರಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದರು. ಈ ವೇಳೆ ಎಲ್ಲರೂ ಕಿತ್ತಾಡಿಕೊಂಡಿದ್ದಾರೆ.

ಯಾವುದೋ ವಿಚಾರ ಮಾತನಾಡುವಾಗ ಮೋಸ ಶಬ್ದವನ್ನು ಬಳಕೆ ಮಾಡಿದರು ತುಕಾಲಿ ಸಂತೋಷ್. ತನಿಷಾಗೆ ಮೋಸ ಆಗುತ್ತಿದೆ ಎಂದರು. ಈ ಮಾತನ್ನು ಕೇಳಿ ವರ್ತೂರು ಸಂತೋಷ್ ಅವರು ತಮ್ಮ ವಾದ ಮುಂದಿಟ್ಟರು. ‘200 ರೂಪಾಯಿ ತಂಡದ ಕಟ್ಟಿದ ತನಿಷಾ ಉತ್ತಮಳಾ ಅಥವಾ 1000 ಪಾಯಿಂಟ್ಸ್ ಕೊಟ್ಟು ತಂಡ ಕಟ್ಟಿದ ಸಂಗೀತ ಉತ್ತಮಳಾ? ಹಾಲು, ಬಾಳೆಹಣ್ಣು, ಮೂರು ಮೊಟ್ಟೆ ಕೊಟ್ಟು ಕ್ಷಮೆ ಕೇಳಿದ ಅವಳು (ತನಿಷಾ) ಇಂದು ಪಾಯಿಂಟ್ಸ್ ನೀಡಿ ದಿನಸಿ ಖರೀದಿ ಮಾಡಬೇಕು ಎಂದು ಹೇಳಿದಾಗ ಸೈಲೆಂಟ್ ಆದಳು. ಅವಳು ಉತ್ತಮಳಾ? ಇವರೆಲ್ಲಾ ಮನುಷ್ಯರಾ?’ ಎಂದು ವರ್ತೂರು ಸಂತೋಷ್ ಕೋಪದಿಂದ ಕೇಳಿದ್ದಾರೆ.

ಇದನ್ನೂ ಓದಿ: ಹಣ ಕೊಟ್ಟು ದಿನಸಿ ಪಡೆಯಲು ಬಿಗ್ ಬಾಸ್ ಅವಕಾಶ; ಮತ್ತೆ ದೊಡ್ಮನೆ ರಣರಂಗ

‘ಕ್ಯಾಪ್ಟನ್ ಆಗಬೇಕು ಎನ್ನುವ ಕಾರಣಕ್ಕೆ ಸ್ವಾರ್ಥ ಮೆರೆಯುತ್ತಿದ್ದಾರೆ. ಬೇಯದೇ ಇರುವ ಚಪಾತಿ ತಿಂದಿದ್ದೇನೆ. ಇವರೆಲ್ಲ ಮನುಷ್ಯರಾ’ ಎಂದು ಪ್ರಶ್ನೆ ಮಾಡಿದ್ದಾರೆ ಸಂತೋಷ್. ಅವರ ಮಾತನ್ನು ಅನೇಕ ವೀಕ್ಷಕರು ಒಪ್ಪಿದ್ದಾರೆ. ಅವರು ನಿಜವಾದ ಮಾತನ್ನು ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ