AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು? ಕಾರಣವೇನು?

Bigg Boss: ಈ ವಾರ ನಡೆದ ಟಾಸ್ಕ್​ಗಳಲ್ಲಿ ಕೆಲವು ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಕೆಲವರಿಗೆ ನ್ಯಾಯವಾಗಿದೆ, ಕೆಲವರಿಗೆ ಅನ್ಯಾಯವಾಗಿದೆ. ಹಾಗಾಗಿ ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್​ ಏನು ಹೇಳಲಿದ್ದಾರೆ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಆದರೆ ಈ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಬರುವುದಿಲ್ಲ ಎನ್ನಲಾಗುತ್ತಿದೆ.

ವೀಕೆಂಡ್ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು? ಕಾರಣವೇನು?
ಮಂಜುನಾಥ ಸಿ.
|

Updated on: Dec 22, 2023 | 9:53 PM

Share

ವಾರಗಳು ಕಳೆದಂತೆ ಕನ್ನಡ ಬಿಗ್​ಬಾಸ್ (BiggBoss) ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಸ್ಪರ್ಧಿಗಳ ನಡುವಿನ ಕೆಮಿಸ್ಟ್ರಿ ಬದಲಾಗುತ್ತಿದೆ. ಹಿಂದೆ ಗೆಳೆಯರಾಗಿದ್ದವರು-ವೈರಿಗಳಾಗಿದ್ದಾರೆ, ವೈರಿಗಳು-ಗೆಳೆಯರಾಗಿದ್ದಾರೆ. ಎಲಿಮಿನೇಟ್ ಆಗದೆ ಮನೆಯಲ್ಲಿ ಉಳಿದುಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ಗಲಾಟೆ-ಜಗಳಗಳು ನಡೆದಿವೆ. ಹಲವರು ಹಲವು ತಪ್ಪುಗಳನ್ನು ಮಾಡಿದ್ದಾರೆ. ಹಾಗಾಗಿ ಈ ಬಾರಿಯ ವೀಕೆಂಡ್ ಪಂಚಾಯ್ತಿಯ ಮೇಲೆ ವೀಕ್ಷಕರ ನಿರೀಕ್ಷೆ ಇದೆ. ಆದರೆ ಈ ಬಾರಿ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಬರುವುದಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಬಂದು ಆ ವಾರ ಸ್ಪರ್ಧಿಗಳು ಮಾಡಿದ ತಪ್ಪು-ಒಪ್ಪುಗಳ ಬಗ್ಗೆ ಮಾತನಾಡುತ್ತಾರೆ. ಉತ್ತಮವಾಗಿ ಆಡಿದವರಿಗೆ ಚಪ್ಪಾಳೆ ನೀಡುತ್ತಾರೆ, ಕೆಟ್ಟದಾಗಿ ಆಡಿದವರಿಗೆ ಬುದ್ಧಿವಾದ ಹೇಳುತ್ತಾರೆ. ಮನೆಯಲ್ಲಿ ಆದ ತಪ್ಪುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಸ್ಪರ್ಧಿಗಳನ್ನು ತುಸು ನಗಿಸಿ, ತುಸು ಬುದ್ಧಿ ಹೇಳುತ್ತಾರೆ. ಕೊನೆಗೆ ಭಾನುವಾರ ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುತ್ತಾರೆ. ಆದರೆ ಈ ವಾರ ಇದೆಲ್ಲ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಶನಿವಾರ ಅಂದರೆ ಡಿಸೆಂಬರ್ 23ರಂದು ಕಿಚ್ಚು ಸುದೀಪ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಸಿಸಿಎಲ್ ಪ್ರಾರಂಭವಾಗುತ್ತಿದೆ. ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದ ಹಲವು ತಾರೆಗಳು ಆಗಮಿಸಲಿದ್ದಾರೆ. ಹಾಗಾಗಿ ಶುಕ್ರವಾರದಿಂದಲೇ ಸುದೀಪ್ ಬಹಳ ಬ್ಯುಸಿಯಾಗಿರಲಿದ್ದಾರೆ ಎನ್ನಲಾಗುತ್ತಿದ್ದು, ಬಿಗ್​ಬಾಸ್ ಶೂಟಿಂಗ್​ಗೆ ಗೈರಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಶುಕ್ರವಾರವೇ ಚಿತ್ರೀಕರಣವನ್ನು ಮುಗಿಸಿರುವ ಸಾಧ್ಯೆತೆಯೂ ಇದೆಯಾದರೂ, ಶುಕ್ರವಾರದ ಸಂಜೆ ಲೈವ್​ನಲ್ಲಿ ಸ್ಪರ್ಧಿಗಳು ಸಾಮಾನ್ಯ ಧಿರಿಸಿನಲ್ಲಿಯೇ ಇದ್ದಿದ್ದು ಕಂಡು ಬಂದಿತು, ಅಲ್ಲದೆ ಜೈಲು ಸೇರಿರುವ ಸಂಗೀತಾ ಇನ್ನೂ ಜೈಲಿನಲ್ಲಿಯೇ ಇದ್ದ ದೃಶ್ಯಗಳನ್ನು ಸಹ ಲೈವ್​​ನಲ್ಲಿ ತೋರಿಸಲಾಗಿದೆ. ಹಾಗಾಗಿ ಶುಕ್ರವಾರ ಸುದೀಪ್ ಎಪಿಸೋಡ್​ನ ಚಿತ್ರೀಕರಣ ನಡೆದಿರುವುದು ಅನುಮಾನ.

ಸುದೀಪ್ ಸಾಮಾನ್ಯವಾಗಿ ವೀಕೆಂಡ್ ಎಪಿಸೋಡ್​ಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಬೇರೆ ಭಾಷೆಗಳಲ್ಲಿ ಮುಖ್ಯ ನಿರೂಪಕರು ಗೈರಾದಾಗ ಮತ್ತೊಬ್ಬ ಅತಿಥಿ ನಟರನ್ನು ಕರೆತಂದು ನಿರೂಪಣೆ ಮಾಡಿಸಿದ್ದಿದೆ. ಆದರೆ ಕನ್ನಡ ಬಿಗ್​ಬಾಸ್​ನಲ್ಲಿ ಈವರೆಗೆ ಹಾಗಾಗಿಲ್ಲ. ಹಾಗಾಗಿ ಈ ಬಾರಿ ಸುದೀಪ್ ಇಲ್ಲದೆ ವೀಕೆಂಡ್ ಎಪಿಸೋಡ್ ಹೇಗೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ