AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ಕೊನೆಯಾಗಲಿದೆ ವರ್ತೂರು ಸಂತೋಷ್-ತುಕಾಲಿ ಫ್ರೆಂಡ್​ಶಿಪ್​; ಸಿಕ್ಕಿದೆ ಸೂಚನೆ

ಇಬ್ಬರೂ ಸಂತೋಷ್ ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೇ ಇರುತ್ತಾರೆ. ಒಂದೇ ತಂಡದಲ್ಲಿ ಆಡಲು ಬಯಸುತ್ತಾರೆ. ಆದರೆ, ಇವರ ಫ್ರೆಂಡ್​ಶಿಪ್ ಶೀಘ್ರವೇ ಕೊನೆ ಆಗಬಹುದು ಅನ್ನೋದು ಪ್ರತಾಪ್ ಅಭಿಪ್ರಾಯ.

ಶೀಘ್ರವೇ ಕೊನೆಯಾಗಲಿದೆ ವರ್ತೂರು ಸಂತೋಷ್-ತುಕಾಲಿ ಫ್ರೆಂಡ್​ಶಿಪ್​; ಸಿಕ್ಕಿದೆ ಸೂಚನೆ
ವರ್ತೂರು-ತುಕಾಲಿ
ರಾಜೇಶ್ ದುಗ್ಗುಮನೆ
|

Updated on:Dec 14, 2023 | 10:27 AM

Share

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ (Tukali Santosh) ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಒಬ್ಬರ ಮಾತನ್ನು ಒಬ್ಬರು ಕೇಳುತ್ತಿದ್ದಾರೆ. ಇಬ್ಬರ ಫ್ರೆಂಡ್​ಶಿಪ್ ಬ್ರೇಕ್ ಆಗುವ ಸೂಚನೆ ಸಿಕ್ಕಿದೆ. ಇಬ್ಬರ ಜೊತೆಯೂ ಒಳ್ಳೆಯ ಒಡನಾಟ ಹೊಂದಿರುವ ಪ್ರತಾಪ್ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚಲಿದೆ. ಕಲರ್ಸ್ ಕನ್ನಡ, ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ.

ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಆರಂಭದಲ್ಲಿ ಬೇರೆ ಬೇರೆ ಆಗೇ ಇದ್ದರು. ಯಾವಾಗ ವರ್ತೂರು ಸಂತೋಷ್ ಅವರು ಹೊರಗೆ ಹೋಗಿ ಬಂದರೋ ತುಕಾಲಿ ಜೊತೆ ಫ್ರೆಂಡ್​ಶಿಪ್ ಬೆಳೆಯಿತು. ಈಗ ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೇ ಇರುತ್ತಾರೆ. ಒಂದೇ ತಂಡದಲ್ಲಿ ಆಡಲು ಬಯಸುತ್ತಾರೆ. ಆದರೆ, ಇವರ ಫ್ರೆಂಡ್​ಶಿಪ್ ಶೀಘ್ರವೇ ಕೊನೆ ಆಗಬಹುದು ಅನ್ನೋದು ಪ್ರತಾಪ್ ಅಭಿಪ್ರಾಯ.

ಇದನ್ನೂ ಓದಿ: ‘ನಾನೇ ಕಾರಣ ಅನಿಸುತ್ತೆ’; ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರು ಸಂತೋಷ್​ಗೆ ಮಾತ್ರ

ಕಾರ್ತಿಕ್ ಹಾಗೂ ಸಂಗೀತಾ ಜೊತೆ ಡ್ರೋನ್ ಪ್ರತಾಪ್ ಕುಳಿತಿದ್ದರು. ಈ ವೇಳೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ವರ್ತೂರು ಸಂತೋಷ್​ ಅವರಿಗೆ ಕಾಮಿಡಿ ಸಂತೋಷ್​ ಮೇಲೆ ಅಸಮಧಾನ ಇದೆ. ಮೊದಲಿದ್ದ ಬಾಂಡಿಂಗ್ ಈಗ ಇಲ್ಲ. ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಇದು ಸರಿ ಹೋದರೂ ಹೋಗಬಹುದು’ ಎಂದಿದ್ದಾರೆ ಡ್ರೋನ್ ಪ್ರತಾಪ್.

ಇದನ್ನೂ ಓದಿ: ‘ನನಗೆ ಪ್ರತಾಪ್​ ತುಂಬ ಇಷ್ಟ’: ಕನ್ಫೆಷನ್​​ ರೂಮ್​ನಲ್ಲಿ ಕಣ್ಣೀರು ಹಾಕಿಕೊಂಡು ಹೇಳಿದ ಸಂಗೀತಾ

ಪ್ರತಾಪ್ ಅವರು ಬಿಗ್ ಬಾಸ್​ನಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಅವರಿಗೆ ಇಬ್ಬರೂ ಸಂತೋಷ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ ಅವರ ಊಹೆ ಸರಿ ಆದರೂ ಅಚ್ಚರಿ ಏನಿಲ್ಲ. ಈ ವಾರ ಫನ್ ಟಾಸ್ಕ್​ ನೀಡಲಾಗುತ್ತಿದೆ. ಹೀಗಾಗಿ, ಹೆಚ್ಚು ಜಗಳ ನಡೆದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Thu, 14 December 23

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ