AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ

Bigg Boss: ಬಿಗ್​ಬಾಸ್ ಮನೆಯಲ್ಲಿ ಮೊಟ್ಟೆಗಾಗಿ ಜಗಳ ನಡೆಯುವುದು ಸಾಮಾನ್ಯ ಆದರೆ ಬುಧವಾರದ ಎಪಿಸೋಡ್​ನಲ್ಲಿ ಮೊಟ್ಟೆಯಿಂದಾಗಿ ಸಖತ್ ಕಾಮಿಡಿ ನಡೆದಿದೆ. ಏನದು?

ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ
ಅವಿನಾಶ್-ಸಂತು
ಮಂಜುನಾಥ ಸಿ.
|

Updated on: Dec 13, 2023 | 11:40 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತೋಷ್ (Tukali Santhosh) ಮತ್ತು ವರ್ತೂರು ಸಂತೋಷ್ ಗಳಸ್ಯ-ಕಂಠಸ್ಯ. ಸದಾ ಒಟ್ಟಿಗೆ ಕೂತು ಮನೆಯ ಇತರೆ ಸದಸ್ಯರ ಬಗ್ಗೆ ತಮಗೆ ತೋಚಿದಂತೆ ಮಾತನಾಡುತ್ತಾ, ತಮಾಷೆ ಮಾಡುತ್ತಾ ಇರುತ್ತಾರೆ. ವೈಲ್ಡ್ ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟಿರುವ ಅವಿನಾಶ್ ಅವರನ್ನು ಸಹ ಜೊತೆಗೆ ಸೇರಿಸಿಕೊಂಡಿರುವ ತುಕಾಲಿ ಮತ್ತು ವರ್ತೂರು, ಅವಿನಾಶ್​ ಅನ್ನು ಆಡಿಕೊಂಡು ಒಳ್ಳೆಯ ಟೈಂಪಾಸ್ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅವಿನಾಶ್ ಅನ್ನು ತಮಾಷೆ ಮಾಡಿದ್ದಾರೆ. ಆದರೆ ಬುಧವಾರದ ಎಪಿಸೋಡ್​ನಲ್ಲಿ ಅವಿನಾಶ್ ತಾವೇ ಬಂದು ಹಳ್ಳಕ್ಕೆ ಬಿದ್ದರು.

ಬಿಗ್​ಬಾಸ್, ಯಾರಿಗೆ ಹೇಗೆ ಅರ್ಥವಾಗಿದ್ದಾರೆ ತಿಳಿದುಕೊಳ್ಳುವ ಕುತೂಹಲ ಇದೆ ಎಂಬ ಕಾರಣಕ್ಕೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಿ, ನೀವು ಅರಿತುಕೊಂಡಂತೆ ಬಿಗ್​ಬಾಸ್ ಚಿತ್ರ ಬರೆಯಿರಿ ಎಂದರು. ಅಂತೆಯೇ ಎಲ್ಲರೂ ಚಿತ್ರ ಬಿಡಿಸಿದರು. ಹಲವರು ಬಿಗ್​ಬಾಸ್ ಅನ್ನು ವ್ಯಕ್ತಿಯ ರೀತಿಯಲ್ಲಿಯೇ ಚಿತ್ರ ಬಿಡಿಸಿದರು. ವಿನಯ್ ತುಸು ಭಿನ್ನವಾಗಿ ಮತ್ತು ಚೆನ್ನಾಗಿ ಚಿತ್ರ ಬಿಡಿಸಿದ್ದರು.

ಇದನ್ನೂ ಓದಿ:ಆ ಒಂದು ವಿಚಾರಕ್ಕೆ ಎಲ್ಲರ ಮೆಚ್ಚುಗೆ ಪಡೆದ ವಿನಯ್ ಗೌಡ

ಆದರೆ ಟಾಸ್ಕ್​ನ ಆರಂಭದಿಂದಲೂ ಚಿತ್ರ ಬಿಡಿಸಲು ಪರದಾಡಿದ ತುಕಾಲಿ ಕೊನೆಗೆ, ಮೊಟ್ಟೆ ಇಡುವ ಕೋಳಿಯ ಚಿತ್ರ ಬಿಡಿಸಿ, ನನ್ನ ಪ್ರಕಾರ ಬಿಗ್​ಬಾಸ್ ಎಂದರೆ ಮೊಟ್ಟೆ ಇಡುವ ಕೋಳಿ ಎಂದರು. ಟಾಸ್ಕ್​ ಎಲ್ಲ ಮುಗಿದ ಮೇಲೆ ವರ್ತೂರು ಹಾಗೂ ತುಕಾಲಿ ಇದೇ ವಿಷಯವಾಗಿ ಚರ್ಚೆ ಮಾಡುತ್ತಿದ್ದರು. ಅಲ್ಲಿಗೆ ವಿನಯ್ ಹಾಗೂ ಅವಿನಾಶ್ ಸಹ ಬಂದರು.

ಆಗ ವಿನಯ್, ಅವಿನಾಶ್ ಅವರನ್ನು ಉದ್ದೇಶಿಸಿ, ತುಕಾಲಿ ಹಾಗೂ ವರ್ತೂರು ಅವರ ಮನೆಗಳು ಅಕ್ಕ-ಪಕ್ಕದಲ್ಲಿವೆ. ನಡುವೆ ಕಾಂಪೌಂಡ್ ಇದೆ. ವರ್ತೂರು ಅವರ ಹುಂಜ, ಕಾಂಪೌಂಡ್ ಮೇಲೆ ಕೂತು ವರ್ತೂರು ಅವರ ಜಾಗದಲ್ಲಿ ಮೊಟ್ಟೆ ಇಟ್ಟರೆ ಆ ಮೊಟ್ಟೆ ಯಾರಿಗೆ ಸೇರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಯನ್ನು ಕೇಳಿಸಿಕೊಂಡ ಅವಿನಾಶ್ ಸ್ವಲ್ಪ ಹೊತ್ತು ಯೋಚಿಸಿ ತುಕಾಲಿ ಅವರಿಗೆ ಸೇರುತ್ತದೆ ಎಂದು ಉತ್ತರ ನೀಡಿದ್ದಾರೆ.

ಉತ್ತರ ಕೇಳುತ್ತಿದ್ದಂತೆ, ವರ್ತೂರು, ‘ಈ ಬಾರಿ ನೀವೇ ಬಿಗ್​ಬಾಸ್ ಗೆಲ್ಲುವುದು’ ಎಂದು ಹೇಳಿ ನಗುತ್ತಾ ಹೊರಟು ಹೋದರೆ, ತುಕಾಲಿ ಹಾಗೂ ವಿನಯ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ಬಳಿಕ, ತುಕಾಲಿ, ಹುಂಜ ಎಂದಾದರೂ ಮೊಟ್ಟೆ ಇಡುತ್ತಾ? ಎಂದು ಕೇಳಿದಾಗ, ಅಯ್ಯೋ, ಇಲ್ಲ ನಾನು ಪ್ರಶ್ನೆ ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಸಫಾಯಿ ಕೊಟ್ಟಿದ್ದಾರೆ ಅವಿನಾಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ