AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ

Bigg Boss: ಬಿಗ್​ಬಾಸ್ ಮನೆಯಲ್ಲಿ ಮೊಟ್ಟೆಗಾಗಿ ಜಗಳ ನಡೆಯುವುದು ಸಾಮಾನ್ಯ ಆದರೆ ಬುಧವಾರದ ಎಪಿಸೋಡ್​ನಲ್ಲಿ ಮೊಟ್ಟೆಯಿಂದಾಗಿ ಸಖತ್ ಕಾಮಿಡಿ ನಡೆದಿದೆ. ಏನದು?

ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ
ಅವಿನಾಶ್-ಸಂತು
ಮಂಜುನಾಥ ಸಿ.
|

Updated on: Dec 13, 2023 | 11:40 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತೋಷ್ (Tukali Santhosh) ಮತ್ತು ವರ್ತೂರು ಸಂತೋಷ್ ಗಳಸ್ಯ-ಕಂಠಸ್ಯ. ಸದಾ ಒಟ್ಟಿಗೆ ಕೂತು ಮನೆಯ ಇತರೆ ಸದಸ್ಯರ ಬಗ್ಗೆ ತಮಗೆ ತೋಚಿದಂತೆ ಮಾತನಾಡುತ್ತಾ, ತಮಾಷೆ ಮಾಡುತ್ತಾ ಇರುತ್ತಾರೆ. ವೈಲ್ಡ್ ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟಿರುವ ಅವಿನಾಶ್ ಅವರನ್ನು ಸಹ ಜೊತೆಗೆ ಸೇರಿಸಿಕೊಂಡಿರುವ ತುಕಾಲಿ ಮತ್ತು ವರ್ತೂರು, ಅವಿನಾಶ್​ ಅನ್ನು ಆಡಿಕೊಂಡು ಒಳ್ಳೆಯ ಟೈಂಪಾಸ್ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅವಿನಾಶ್ ಅನ್ನು ತಮಾಷೆ ಮಾಡಿದ್ದಾರೆ. ಆದರೆ ಬುಧವಾರದ ಎಪಿಸೋಡ್​ನಲ್ಲಿ ಅವಿನಾಶ್ ತಾವೇ ಬಂದು ಹಳ್ಳಕ್ಕೆ ಬಿದ್ದರು.

ಬಿಗ್​ಬಾಸ್, ಯಾರಿಗೆ ಹೇಗೆ ಅರ್ಥವಾಗಿದ್ದಾರೆ ತಿಳಿದುಕೊಳ್ಳುವ ಕುತೂಹಲ ಇದೆ ಎಂಬ ಕಾರಣಕ್ಕೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಿ, ನೀವು ಅರಿತುಕೊಂಡಂತೆ ಬಿಗ್​ಬಾಸ್ ಚಿತ್ರ ಬರೆಯಿರಿ ಎಂದರು. ಅಂತೆಯೇ ಎಲ್ಲರೂ ಚಿತ್ರ ಬಿಡಿಸಿದರು. ಹಲವರು ಬಿಗ್​ಬಾಸ್ ಅನ್ನು ವ್ಯಕ್ತಿಯ ರೀತಿಯಲ್ಲಿಯೇ ಚಿತ್ರ ಬಿಡಿಸಿದರು. ವಿನಯ್ ತುಸು ಭಿನ್ನವಾಗಿ ಮತ್ತು ಚೆನ್ನಾಗಿ ಚಿತ್ರ ಬಿಡಿಸಿದ್ದರು.

ಇದನ್ನೂ ಓದಿ:ಆ ಒಂದು ವಿಚಾರಕ್ಕೆ ಎಲ್ಲರ ಮೆಚ್ಚುಗೆ ಪಡೆದ ವಿನಯ್ ಗೌಡ

ಆದರೆ ಟಾಸ್ಕ್​ನ ಆರಂಭದಿಂದಲೂ ಚಿತ್ರ ಬಿಡಿಸಲು ಪರದಾಡಿದ ತುಕಾಲಿ ಕೊನೆಗೆ, ಮೊಟ್ಟೆ ಇಡುವ ಕೋಳಿಯ ಚಿತ್ರ ಬಿಡಿಸಿ, ನನ್ನ ಪ್ರಕಾರ ಬಿಗ್​ಬಾಸ್ ಎಂದರೆ ಮೊಟ್ಟೆ ಇಡುವ ಕೋಳಿ ಎಂದರು. ಟಾಸ್ಕ್​ ಎಲ್ಲ ಮುಗಿದ ಮೇಲೆ ವರ್ತೂರು ಹಾಗೂ ತುಕಾಲಿ ಇದೇ ವಿಷಯವಾಗಿ ಚರ್ಚೆ ಮಾಡುತ್ತಿದ್ದರು. ಅಲ್ಲಿಗೆ ವಿನಯ್ ಹಾಗೂ ಅವಿನಾಶ್ ಸಹ ಬಂದರು.

ಆಗ ವಿನಯ್, ಅವಿನಾಶ್ ಅವರನ್ನು ಉದ್ದೇಶಿಸಿ, ತುಕಾಲಿ ಹಾಗೂ ವರ್ತೂರು ಅವರ ಮನೆಗಳು ಅಕ್ಕ-ಪಕ್ಕದಲ್ಲಿವೆ. ನಡುವೆ ಕಾಂಪೌಂಡ್ ಇದೆ. ವರ್ತೂರು ಅವರ ಹುಂಜ, ಕಾಂಪೌಂಡ್ ಮೇಲೆ ಕೂತು ವರ್ತೂರು ಅವರ ಜಾಗದಲ್ಲಿ ಮೊಟ್ಟೆ ಇಟ್ಟರೆ ಆ ಮೊಟ್ಟೆ ಯಾರಿಗೆ ಸೇರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಯನ್ನು ಕೇಳಿಸಿಕೊಂಡ ಅವಿನಾಶ್ ಸ್ವಲ್ಪ ಹೊತ್ತು ಯೋಚಿಸಿ ತುಕಾಲಿ ಅವರಿಗೆ ಸೇರುತ್ತದೆ ಎಂದು ಉತ್ತರ ನೀಡಿದ್ದಾರೆ.

ಉತ್ತರ ಕೇಳುತ್ತಿದ್ದಂತೆ, ವರ್ತೂರು, ‘ಈ ಬಾರಿ ನೀವೇ ಬಿಗ್​ಬಾಸ್ ಗೆಲ್ಲುವುದು’ ಎಂದು ಹೇಳಿ ನಗುತ್ತಾ ಹೊರಟು ಹೋದರೆ, ತುಕಾಲಿ ಹಾಗೂ ವಿನಯ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ಬಳಿಕ, ತುಕಾಲಿ, ಹುಂಜ ಎಂದಾದರೂ ಮೊಟ್ಟೆ ಇಡುತ್ತಾ? ಎಂದು ಕೇಳಿದಾಗ, ಅಯ್ಯೋ, ಇಲ್ಲ ನಾನು ಪ್ರಶ್ನೆ ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಸಫಾಯಿ ಕೊಟ್ಟಿದ್ದಾರೆ ಅವಿನಾಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ