Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದು ಮುತ್ತು ಕೊಡಿ’; ತನಿಷಾ ಎದುರು ವಿನಯ್ ಹೊಸ ಬೇಡಿಕೆ

ವಿನಯ್ ಹಾಗೂ ತನಿಷಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿಲ್ಲ. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಕಳೆದ ವಾರ ಇವರ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು. ಆದರೂ, ಈಗ ಕೊಟ್ಟಿರುವ ಫನ್ ಟಾಸ್ಕ್ ಎಲ್ಲಾ ದ್ವೇಷವನ್ನು ಮರೆಸಿದೆ.

‘ಒಂದು ಮುತ್ತು ಕೊಡಿ’; ತನಿಷಾ ಎದುರು ವಿನಯ್ ಹೊಸ ಬೇಡಿಕೆ
ವಿನಯ್-ತನಿಷಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 13, 2023 | 8:02 AM

ಕಳೆದವಾರ ಬಿಗ್ ಬಾಸ್ (Bigg Boss) ಮನೆಯ ವಾತಾವರಣ ಸರಿ ಇರಲಿಲ್ಲ. ಸ್ಪರ್ಧಿಗಳ ಮಧ್ಯೆ ದ್ವೇಷದ ಬೆಂಕಿ ಹತ್ತಿತ್ತು. ಈ ಕಾರಣಕ್ಕೆ ಈ ವಾರ ಬಿಗ್ ಬಾಸ್ ಫನ್ ಟಾಸ್ಕ್ ನೀಡಿದ್ದಾರೆ. ಇಡೀ ಮನೆ ಶಾಲೆಯಾಗಿ ಬದಲಾಗಿದೆ. ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ನಮ್ರತಾ (Namratha) ಮೊದಲಾದವರು ವಿದ್ಯಾರ್ಥಿಗಳಾದರೆ, ತನಿಷಾ, ಮೈಕಲ್ ಮೊದಲಾದವರು ಟೀಚರ್ ಆಗಿದ್ದಾರೆ. ಈ ಫನ್​ ಟಾಸ್ಕ್​ನಲ್ಲಿ ವಿನಯ್ ಅವರು ತನಿಷಾ ಬಳಿ ಒಂದು ಮುತ್ತಾ (ಮುತ್ತು) ಕೊಡುವಂತೆ ಕೇಳಿದ್ದಾರೆ!

ವಿನಯ್ ಅವರು ಸ್ಕೂಲ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ವಿನಯ್ ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಇಷ್ಟ ಆಗಿದೆ. ದ್ವೇಷ ಮರೆತು ಅವರು ಬಾಲ್ಯದ ದಿನಕ್ಕೆ ಹೋಗಿದ್ದಾರೆ. ತನಿಷಾ ಅವರು ಪೌಡರ್ ರೂಂನಲ್ಲಿ ರೆಡಿ ಆಗುತ್ತಿದ್ದರು. ಅಲ್ಲಿಗೆ ತೆರಳಿದ ವಿನಯ್ ತನಿಷಾ ಜೊತೆ ಮಾತನಾಡಿದ್ದಾರೆ.

‘ಊಟ ತಂದಿದ್ದೀನಿ ಮಿಸ್. ಕೇಕ್ ತಂದಿದ್ದೀನಿ ಮಿಸ್. ನಾನು ಗುಡ್ ಬಾಯ್. ನಂಗೆ ಒಂದು ಮುತ್ತಾ ಕೊಡಲ್ವ’ ಎಂದು ವಿನಯ್ ಸಣ್ಣ ಮಕ್ಕಳಂತೆ ಮುಗ್ಧ ಮುಖ ಮಾಡಿ ಕೇಳಿದ್ದಾರೆ. ‘ನೀವು ಸ್ಟಾರ್ ಕೇಳ್ತೀರಿ ಅಂದ್ಕೊಂಡಿದ್ದೆ’ ಎಂದರು ತನಿಷಾ. ‘ಆ ಸ್ಟಾರ್​ನ ಕಾರ್ತಿಕ್​ಗೆ ಕೊಡಿ. ನಂಗೆ ಮುತ್ತಾ ಬೇಕು’ ಎಂದರು ವಿನಯ್. ‘ಯಾರೋ ಅಡ್ವಾಂಟೇಜ್ ತೆಗೆದುಕೊಳ್ಳುವಂತೆ ಕಾಣುತ್ತಿದೆಯಲ್ಲ’ ಎಂದು ನಗುತ್ತಲೇ ಹೇಳಿದರು ತನಿಷಾ. ಆ ಬಳಿಕ ವಿನಯ್ ಅವರು ಪತ್ನಿಯನ್ನು ನೆನಪು ಮಾಡಿಕೊಂಡರು. ‘ನಮ್ಮವ್ವ ಮನೆಯಲ್ಲಿ ನೋಡ್ತಾ ಇರ್ತಾರೆ. ಮನೆಗೆ ಹೋದ ತಕ್ಷಣ ಕೆರ ತೆಗೆದುಕೊಂಡು ಹೊಡೀತಾರೆ’ ಎಂದು ವಿನಯ್ ಅಲ್ಲಿಂದ ತೆರಳಿದರು.

ಇದನ್ನೂ ಓದಿ: ‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​

ವಿನಯ್ ಹಾಗೂ ತನಿಷಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿಲ್ಲ. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಕಳೆದ ವಾರ ಇವರ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು. ಆದರೂ, ಈಗ ಕೊಟ್ಟಿರುವ ಫನ್ ಟಾಸ್ಕ್ ಎಲ್ಲಾ ದ್ವೇಷವನ್ನು ಮರೆಸಿದೆ. ಎಲ್ಲರೂ ಒಟ್ಟಾಗಿ ಆಟ ಆಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್