Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ನಾಮಿನೇಟ್ ಆದವರ್ಯಾರು: ಹೊರ ಹೋಗುವುದ್ಯಾರು?

Bigg Boss: ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಲು ಈ ವಾರ ನಾಮಿನೇಟ್ ಮಾಡಿದವರು ಯಾರು? ಈ ವಾರ ಸೇಫ್ ಆಗಿದ್ಯಾರು?

ಈ ವಾರ ನಾಮಿನೇಟ್ ಆದವರ್ಯಾರು: ಹೊರ ಹೋಗುವುದ್ಯಾರು?
ಬಿಗ್​ಬಾಸ್
Follow us
ಮಂಜುನಾಥ ಸಿ.
|

Updated on: Dec 12, 2023 | 11:33 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಕಳೆದ ವಾರ ನಡೆದ ಜಗಳ-ಕಿತ್ತಾಟದ ಬಿಸಿ ಇನ್ನೂ ಪೂರ್ಣವಾಗಿ ಆರಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ನೀಡುವ ಮೂಲಕ ಮನೆಯ ವಾತಾವರಣವನ್ನು ತಿಳಿ ಗೊಳಿಸುವ ಪ್ರಯತ್ನವನ್ನು ಬಿಗ್​ಬಾಸ್ ಮಾಡಿದ್ದಾರಾದರೂ, ಆ ಟಾಸ್ಕ್​ಗೂ ಮುನ್ನ ನಡೆದ ನಾಮಿನೇಷನ್, ಕಳೆದ ವಾರ ನಡೆದ ಜಿದ್ದಾ-ಜಿದ್ದು ಸ್ಪರ್ಧಿಗಳ ಮನದಲ್ಲಿ ಹಾಗೆಯೇ ಇದೆ ಎಂಬುದಕ್ಕೆ ಸಾಕ್ಷಿಯಾಯಿತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸ್ವಲ್ಪ ಕಡಿಮೆ ಮಂದಿ ನಾಮಿನೇಟ್ ಆಗಿದ್ದಾರೆ, ಆದರೆ ಕಳೆದ ವಾರ ಇದ್ದ ಮುಖಗಳು ಈ ವಾರವೂ ಕೆಲವು ಇವೆ.

ಕಳೆದ ಬಾರಿ ನಾಮಿನೇಷನ್​ನಿಂದ ಹೊರಗೆ ಉಳಿದಿದ್ದ ವೈಲ್ಡ್ ಕಾರ್ಡ್ ಎಂಟ್ರಿಗಳಾದ ಅವಿನಾಶ್ ಹಾಗೂ ಪವಿ ಅವರನ್ನು ಈ ಬಾರಿ ನಾಮಿನೇಟ್ ಮಾಡುವ ಅವಕಾಶ ಸ್ಪರ್ಧಿಗಳಿಗೆ ಇತ್ತು. ಬಹುತೇಕರು ವೈಲ್ಡ್ ಕಾರ್ಡ್ ಎಂಟ್ರಿಗಳನ್ನು ಹೊರಗೆ ಕಳಿಸುವ ಪ್ರಯತ್ನ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು, ಅಂತೆಯೇ ಕೆಲವರು ವೈಲ್ಡ್ ಕಾರ್ಡ್ ಎಂಟ್ರಿ ಸದಸ್ಯರ ಹೆಸರು ತೆಗೆದುಕೊಂಡರಾದರೂ ನಾಮಿನೇಟ್ ಆಗಿದ್ದು ಒಬ್ಬರು ಮಾತ್ರ.

ಈ ಬಾರಿ ಸೀಕ್ರೆಟ್ ರೂಂನಲ್ಲಿ ನಾಮಿನೇಷನ್ ನಡೆಯಿತು, ಮೊದಲ ಹೋದ ನಮ್ರತಾ ಆರು ಮಂದಿಯ ಸ್ಪರ್ಧಿಗಳ ಚಿತ್ರವನ್ನು ತೂಗು ಹಾಕಿ ಆರು ಮಂದಿಯನ್ನು ನಾಮಿನೇಟ್ ಮಾಡಿದರು. ನಂತರ ಬಂದವರು ಇಬ್ಬರನ್ನು ನಾಮಿನೇಟ್ ಮಾಡಬೇಕಾಗಿತ್ತು. ನಾಮಿನೇಟ್ ಮಾಡಬೇಕಾದವರ ಚಿತ್ರಗಳನ್ನು ಅದೇ ಗೋಡೆಯ ಮೇಲೆ ತೂಗು ಹಾಕಬೇಕಿತ್ತು. ಅಂತೆಯೇ ಎಲ್ಲ ಸ್ಪರ್ಧಿಗಳು ಬಂದು ತಾವು ನಾಮಿನೇಟ್ ಮಾಡಲು ಇಚ್ಛಿಸಿದವರ ಫೋಟೊಗಳನ್ನು ಗೋಡೆಗೆ ತೂಗು ಹಾಕಿದರು.

ಇದನ್ನೂ ಓದಿ:ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?

ಕಾರ್ತಿಕ್, ವಿನಯ್​ ಹೆಸರನ್ನು ನಾಮಿನೇಟ್ ಮಾಡಿದ್ದು, ವರ್ತೂರು ಅವರು ಕಾರ್ತಿಕ್ ಹಾಗೂ ತನಿಷಾ ಹೆಸರನ್ನು ನಾಮಿನೇಟ್ ಮಾಡಿದ್ದು ಆಶ್ಚರ್ಯಕಾರಿಯಾಗಿತ್ತು. ಸಿರಿ ಅವರು ತುಕಾಲಿಯನ್ನು, ಪವಿಯನ್ನು ಮುಖ್ಯವಾಗಿ ನಾಮಿನೇಟ್ ಮಾಡಿದರು. ಸಂಗೀತಾ ಅವರು ತುಕಾಲಿಯನ್ನು, ನಮ್ರತಾ ಹಾಗೂ ವಿನಯ್​ ಅನ್ನು ನಾಮಿನೇಟ್ ಮಾಡಿದರು ತುಕಾಲಿ ಸಂತು, ಸಂಗೀತಾ, ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು.

ಕೊನೆಯದಾಗಿ ವಿನಯ್, ಸಂಗೀತಾ, ಪವಿ, ಡ್ರೋನ್ ಪ್ರತಾಪ್, ಮೈಖಲ್, ಸಿರಿ ಅವರುಗಳು ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದರು. ಕಳೆದ ವಾರ ನಾಮಿನೇಟ್ ಆಗಿದ್ದ ತುಕಾಲಿ, ನಮ್ರತಾ, ಕಾರ್ತಿಕ್ ಅವರುಗಳು ಸೇಫ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ