AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​ನಿಂದ ಹೋಗ್ತೀನಿ’; ಈ ಬಾರಿ ಜೋರಾಗಿದೆ ಬ್ಲಾಕ್​ಮೇಲ್ ತಂತ್ರ?

‘ನಾನು ಬಿಗ್ ಬಾಸ್ ಬಿಟ್ಟು ಹೋಗ್ತೀನಿ’ ಎಂದು ಹೇಳೋದು ಈ ಬಾರಿಯ ಬಿಗ್​ ಬಾಸ್ ಸೀಸನ್​ನಲ್ಲಿ ಜೋರಾಗಿದೆ. ಈಗಾಗಲೇ ಮೂವರು ದೊಡ್ಮನೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದರು. ಆ ಬಳಿಕ ಮನಸ್ಸು ಬದಲಿಸಿದರು.

‘ಬಿಗ್​ ಬಾಸ್​ನಿಂದ ಹೋಗ್ತೀನಿ’; ಈ ಬಾರಿ ಜೋರಾಗಿದೆ ಬ್ಲಾಕ್​ಮೇಲ್ ತಂತ್ರ?
ಸಂಗೀತಾ-ವಿನಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 08, 2023 | 12:44 PM

ಬಿಗ್ ಬಾಸ್​ಗೆ (Bigg Boss)  ಹೋಗಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಆದರೆ, ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕರೂ ಕೆಲವರು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಇನ್ನೂ ಕೆಲವರು ದೊಡ್ಮನೆಯ ರಾಜಕೀಯ, ಆಟಗಳಿಂದ ಬೇಸತ್ತು ಹೊರಗೆ ಬರುವ ನಿರ್ಧಾರ ಮಾಡುತ್ತಾರೆ. ಈ ಬಾರಿಯ ಬಿಗ್​ ಬಾಸ್ ಸೀಸನ್​ನಲ್ಲಿ ಅದು ಜೋರಾಗಿದೆ. ಈಗಾಗಲೇ ಮೂವರು ದೊಡ್ಮನೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದರು. ಆ ಬಳಿಕ ಮನಸ್ಸು ಬದಲಿಸಿದರು. ಆ ಬಗ್ಗೆ ಇಲ್ಲಿದೆ ವಿವರ.

ಸಂಗೀತಾ ಶೃಂಗೇರಿ

‘777 ಚಾರ್ಲಿ’ ಅಂಥ ಚಿತ್ರಗಳಲ್ಲಿ ನಟಿಸಿದವರು ಸಂಗೀತಾ ಶೃಂಗೇರಿ. ಅವರು ದೊಡ್ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಆದರೆ, ಅವರಿಗೆ ದೊಡ್ಮನೆ ಆಟ ಆಗಾಗ ಸಾಕು ಎನಿಸುತ್ತದೆ. ತನಿಷಾ, ಕಾರ್ತಿಕ್ ಜೊತೆ ಜಗಳ ಆದಾಗ ಅವರು ದೊಡ್ಮನೆಯಿಂದ ಹೊರಹೋಗುತ್ತೇನೆ ಎಂದಿದ್ದರು. ತಮ್ಮನ್ನು ಕಳುಹಿಸುವಂತೆ ಅವರು ಕೋರಿಕೊಂಡರು. ಬ್ರಹ್ಮಾಂಡ ಗುರೂಜಿಯನ್ನು ಕಳುಹಿಸಲು ಡೋರ್ ಓಪನ್ ಮಾಡಿದಾಗ ಇವರೂ ಡೋರ್​ನಿಂದ ಹೊರಗೆ ಕಾಲಿಟ್ಟಿದ್ದರು. ಕಾರ್ತಿಕ್ ಅವರ ಅಟೆಂಷನ್ ಗಳಿಸಲು ಅವರು ಈ ರೀತಿಯ ತಂತ್ರ ರೂಪಿಸಿದ್ದರು ಎನ್ನುವ ಆರೋಪ ಕೇಳಿ ಬಂತು.

ವರ್ತೂರು ಸಂತೋಷ್

ವರ್ತೂರು ಸಂತೋಷ್ ಅವರು ದೊಡ್ಮನೆಗೆ ಸ್ಪರ್ಧಿ ಆಗಿ ಬಂದರು. ಈ ವೇಳೆ ಅವರ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಎಲ್ಲರ ಗಮನ ಸೆಳೆಯಿತು. ಈ ಪ್ರಕರಣದಲ್ಲಿ ಅವರು ಅರೆಸ್ಟ್​ ಕೂಡ ಆದರು. ಒಂದು ವಾರಗಳ ಕಾಲ ಅವರು ಹೊರಗೆ ಇದ್ದರು. ಅವರು ಮರಳಿ ದೊಡ್ಮನೆಗೆ ಬಂದರು. ಆದರೆ, ಅವರಿಗೆ ಮನೆಯ ನೆನಪು, ಹೊರಗೆ ಏನಾಗುತ್ತಿದೆ ಎನ್ನುವ ಭಯ ಕಾಡಿದೆ. ಹೀಗಾಗಿ, ನಾನು ಮನೆಯಿಂದ ಹೊರಗೆ ಹೊಗ್ತೀನಿ ಎಂದು ಹಠ ಹಿಡಿದು ಕುಳಿತಿದ್ದರು. ವೀಕೆಂಡ್​ನಲ್ಲಿ ಸುದೀಪ್ ಕೂಡ ಅರ್ಧಕ್ಕೆ ಶೋನಿಂದ ಹೊರ ನಡೆದರು.

ವಿನಯ್ ಗೌಡ

ಡಿಸೆಂಬರ್ 7ರ ಎಪಿಸೋಡ್​ನಲ್ಲಿ ವಿನಯ್ ಗೌಡ ಅವರು ದೊಡ್ಮನೆಯಿಂದ ಹೊರಹೋಗುವ ಬೆದರಿಕೆ ಹಾಕಿದರು. ಕಾರ್ತಿಕ್ ಮಹೇಶ್ ಎಸೆದ ಚಪ್ಪಲಿ ನೆಲಕ್ಕೆ ಬಡಿದು ವಿನಯ್​ಗೆ ತಾಗಿತು. ಇದರಿಂದ ವಿನಯ್ ಅವರು ಸಾಕಷ್ಟು ಕೂಗಾಟ ನಡೆಸಿದರು. ‘ಅವನಿಂದ ಚಪ್ಪಲಿ ಏಟು ತಿನ್ನುವಂಥದ್ದು ನನಗೇನು ಬಂದಿದೆ? ನಾನು ಬಿಗ್ ಬಾಸ್​ನಿಂದ ಹೋಗುತ್ತೇನೆ’ ಎಂದು ದೊಡ್ಮನೆಯ ಮುಖ್ಯದ್ವಾರ ಬಡಿದರು. ಇದರಿಂದ ದೊಡ್ಮನೆಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಆ ಬಳಿಕ ಅವರು ನಿರ್ಧಾರ ಬದಲಿಸಿದರು. ‘ಕಪ್ ತೆಗೆದುಕೊಂಡೇ ಹೋಗೋದು’ ಎಂದಿದ್ದಾರೆ ವಿನಯ್.

ಇದನ್ನೂ ಓದಿ: ‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

ಬ್ಲಾಕ್​ಮೇಲ್ ತಂತ್ರ

ಈ ಮೊದಲಿನ ಸೀಸನ್​ಗಳಲ್ಲಿ ಅಲ್ಲೊಂದು, ಇಲ್ಲೊಂದು ಸ್ಪರ್ಧಿಗಳು ಬಿಗ್ ಬಾಸ್ ಬಿಟ್ಟು ಹೋಗುವ ಬಗ್ಗೆ ಹೇಳಿದ್ದಿದೆ. ಆದರೆ, ಇದೇ ಮೊದಲ ಬಾರಿಗೆ ಸಾಲು ಸಾಲು ಸ್ಪರ್ಧಿಗಳು ಈ ರೀತಿ ಬಿಗ್ ಬಾಸ್ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಬ್ಲಾಕ್​ಮೇಲ್ ತಂತ್ರ ಅಷ್ಟೇ ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 8 December 23

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು