ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು

ಪ್ರಭುದೇವ ಇಂದು ಬಹು ದೊಡ್ಡ ಸ್ಟಾರ್, ಆದರೆ ಪ್ರಭುದೇವ ಸ್ಟಾರ್ ಆಗಲು ಕಾರಣವಾದ ಆ ಒಂದು ಸಣ್ಣ ಘಟನೆ, ತಂದೆ ಮೂಗೂರು ಸುಂದರಂ ಮಾಡಿದ ಆ ಒಂದು ಸಣ್ಣ ಕಾರ್ಯ ತಮ್ಮ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿತು ಎಂಬುದನ್ನು ಪ್ರಭುದೇವ ನೆನಪಿಸಿಕೊಂಡಿದ್ದಾರೆ.

ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು
ಪ್ರಭುದೇವ
Follow us
|

Updated on: Apr 02, 2023 | 11:05 PM

ವೀಕೆಂಡ್ ವಿತ್ ರಮೇಶ್​ನಲ್ಲಿ (Weekend With Ramesh) ಅತಿಥಿಯಾಗಿ ಆಗಮಿಸಿರುವ ನಟ, ನಿರ್ದೇಶಕ, ನೃತ್ಯಗಾರ ಪ್ರಭುದೇವ (Prabhu Deva) ನಿನ್ನೆಯ ಎಪಿಸೋಡ್​ನಲ್ಲಿ ತಮ್ಮ ಬಾಲ್ಯ, ಆಗ ಮಾಡಿದ ತುಂಟಾಟಗಳನ್ನು ನೆನಪು ಮಾಡಿಕೊಂಡಿದ್ದರು. ಇಂದಿನ ಎಪಿಸೋಡ್​ನಲ್ಲಿ ಅವರು ತಮ್ಮ ಸಿನಿಮಾ ಪಯಣ, ಚಿತ್ರರಂಗದಲ್ಲಿ ದೊರಕಿದ ಗೆಳೆಯರು, ವಿವಿಧ ಖ್ಯಾತನಾಮರೊಟ್ಟಿಗೆ ಕೆಲಸ ಮಾಡಿದ ಅನುಭವ, ಎಲ್ಲಕ್ಕಿಂತಲೂ ಮಿಗಿಲಾಗಿ ತಮಗೆ ಸಿಕ್ಕ ಗುರುಗಳು, ಸ್ಪೂರ್ತಿ, ತಮ್ಮ ತಂದೆ ನೀಡಿದ ಸ್ಪೂರ್ತಿಯ ಬಗ್ಗೆ ನೆನಪಿಸಿಕೊಂಡು ಭಾವುಕರಾದರು.

ವ್ಯಕ್ತಿಯೊಬ್ಬ ದೊಡ್ಡ ಸಾಧನೆ ಮಾಡಲು ಅವರ ಕುಟುಂಬದವರು ನೀಡುವ ಬೆಂಬಲ ಬಹಳ ಮುಖ್ಯ. ಪ್ರಭುದೇವಗೆ ಅಂಥಹಾ ಬೆಂಬಲ ದೊರಕಿದ್ದು ಅವರ ತಂದೆ ಮೂಗುರು ಸುಂದರಂ ಅವರಿಂದಲೇ. ಸುಂದರಂ ಅವರು ಮಾಡಿದ್ದು ಬಹಳ ಸರಳವಾದ ಕಾರ್ಯವಷ್ಟೆ ಆದರೆ ಅದು ಪ್ರಭುದೇವ ಜೀವನದಲ್ಲಿ ಬಹಳ ಮಹತ್ವದ ಕಾರ್ಯವಾಯಿತು. ಅದರ ಬಗ್ಗೆ ವೀಕೆಂಡ್ ವಿತ್ ರಮೇಶ್​ನಲ್ಲಿ ಪ್ರಭುದೇವ ಮಾತನಾಡಿದ್ದಾರೆ.

ಡ್ಯಾನ್ಸ್​ನಲ್ಲಿ ಎಳವೆಯಿಂದಲೂ ಅಪ್ರತಿಮರಾಗಿದ್ದ ಪ್ರಭುದೇವ ಅವರು ಓದಿನಲ್ಲಿ ಮೊದಲಿನಿಂದಲೂ ಬಹಳ ಹಿಂದಂತೆ. ಅದರಲ್ಲಿಯೂ ರಸಾಯನಶಾಸ್ತ್ರವೆಂದರೆ ಪ್ರಭುದೇವಗೆ ಭಯವೋ ಭಯ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಮೊದಲೇ ಬಹಳ ಶಿಸ್ತಿನ ವ್ಯಕ್ತಿ ಮೂಗೂರು ಸುಂದರಂ. ಪ್ರಭುದೇವಗೆ ಭಯವೋ ಭಯ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರಂ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು ಎಂದು ಕೇಳಿದಾಗ ಫೇಲ್ ಆಗಿದ್ದೇನೆ ಎಂದರಂತೆ. ಆಗ ಮೂಗುರು ಸುಂದರಂ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡು ಎಂದರಂತೆ.

ಆ ಕ್ಷಣ ಪ್ರಭುದೇವಗೆ ಅಳು ಬಂದುಬಿಟ್ಟಿತಂತೆ, ಆದರೆ ಅಪ್ಪ ಅಂದು ಬೆನ್ನಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು ಎಂದಿದ್ದಾರೆ ಪ್ರಭುದೇವ. ಅದಾದ ಬಳಿಕ ನಾನು ಬದಲಾಗಿಬಿಟ್ಟೆ, ಅಪ್ಪ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಅಪ್ಪ ಬೆನ್ನು ತಟ್ಟಿದ್ದರಿಂದಲೇ ನಾನು ಇಂದಿನ ಪ್ರಭುದೇವ ಆಗಲು ಸಾಧ್ಯವಾಗಿದ್ದು ಎಂದಿದ್ದಾರೆ ಪ್ರಭು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು