AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ

ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು.

‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ
ಅರುಣ್ ಸಾಗರ್-ಸುದೀಪ್
TV9 Web
| Edited By: |

Updated on:Oct 01, 2022 | 10:07 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ 18 ಸ್ಪರ್ಧಿಗಳು ಒಂದು ವಾರ ಪೂರ್ಣಗೊಳಿಸಿದ್ದಾರೆ. ಈ ವಾರ ಒಂದಷ್ಟು ಫನ್ ಇತ್ತು, ಕಿತ್ತಾಟ ಇತ್ತು. ವೀಕೆಂಡ್​ನಲ್ಲಿ ಸುದೀಪ್ ಅವರು ಬಂದು ಎಲ್ಲ ಸ್ಪರ್ಧಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ಜನರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಪೈಕಿ ಅರುಣ್ ಸಾಗರ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅರುಣ್ ಸಾಗರ್ ನಡೆದುಕೊಂಡ ರೀತಿಯೇ ಕಾರಣ. ಇದಕ್ಕೆ ಸುದೀಪ್ (Sudeep) ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಅರುಣ್ ಸಾಗರ್ (Arun Sagar) ಕ್ಷಮೆ ಕೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್​ ಒಂದನ್ನು ನೀಡಲಾಗಿತ್ತು. ತ್ರಿಕೋನಾಕಾರದ ಬಾಕ್ಸ್​ನಲ್ಲಿ ಬಾಲ್​ಗಳನ್ನು ಜೋಡಿಸಿ ಪಿರಾಮಿಡ್ ಆಕಾರ ಮಾಡಬೇಕು.ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು. ಅವರು ಜೋಕರ್​ನಂತೆ ನಡೆದುಕೊಂಡಿದ್ದರು. ಇದು ಮನೆಯವರ ಕೋಪಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ
Image
‘ಅವರು ಅಂದ್ರೆ ನಂಗೆ ತುಂಬಾ ಇಷ್ಟ’; ಐಶ್ವರ್ಯಾ ಬಳಿಕ ದೀಪಿಕಾ ಕಡೆ ವಾಲಿದ್ರಾ ಸೈಕ್ ನವಾಜ್​?
Image
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
Image
ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್​’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ

ಕಳಪೆ ಕೊಡುವಾಗ ಅನೇಕರು ಅರುಣ್ ಸಾಗರ್ ಬಗ್ಗೆ ಈ ವಿಚಾರದಲ್ಲಿ ಕಮೆಂಟ್ ಮಾಡಿದ್ದರು. ಸಾನ್ಯಾ, ರೂಪೇಶ್ ಶೆಟ್ಟಿ ಇದೇ ವಿಚಾರಕ್ಕೆ ಅರುಣ್ ಸಾಗರ್​ಗೆ ಕಳಪೆ ನೀಡಿದರು. ಇದಕ್ಕೆ ಅರುಣ್ ಸಾಗರ್ ಸಿಟ್ಟಾಗಿದ್ದರು. ರೂಪೇಶ್​ ವಿರುದ್ಧ ಪರೋಕ್ಷವಾಗಿ ಅರುಣ್ ಸಾಗರ್ ಸಿಡುಕಿದ್ದರು.

ಈ ಬಗ್ಗೆ ಸುದೀಪ್ ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಅರುಣ್ ಸಾಗರ್ ಅವರೇ ನೀವು ಫೆಂಟಾಸ್ಟಿಕ್ ಎಂಟರ್​ಟೇನರ್​. ಮನೆ ಒಳಗೆ ಇರುವ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳಬೇಡಿ. ಟಾಸ್ಕ್​ನ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ, ವಿದೂಷಕನಾದ್ರಿ. ನಾಯಕ ಆಗೋ ಜಾಗದಲ್ಲಿ ಜೋಕರ್ ಆಗಬೇಡಿ. ಜೋಕರ್ ಆಗೋ ಜಾಗದಲ್ಲಿ ನಾಯಕನಾಗಬೇಡಿ’ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಅರುಣ್ ಸಾಗರ್ ಅವರಿಗೆ ತಪ್ಪಿನ ಅರಿವಾಗಿದೆ.

Published On - 9:51 pm, Sat, 1 October 22

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!