AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ

ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು.

‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ
ಅರುಣ್ ಸಾಗರ್-ಸುದೀಪ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Oct 01, 2022 | 10:07 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ 18 ಸ್ಪರ್ಧಿಗಳು ಒಂದು ವಾರ ಪೂರ್ಣಗೊಳಿಸಿದ್ದಾರೆ. ಈ ವಾರ ಒಂದಷ್ಟು ಫನ್ ಇತ್ತು, ಕಿತ್ತಾಟ ಇತ್ತು. ವೀಕೆಂಡ್​ನಲ್ಲಿ ಸುದೀಪ್ ಅವರು ಬಂದು ಎಲ್ಲ ಸ್ಪರ್ಧಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ಜನರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಪೈಕಿ ಅರುಣ್ ಸಾಗರ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅರುಣ್ ಸಾಗರ್ ನಡೆದುಕೊಂಡ ರೀತಿಯೇ ಕಾರಣ. ಇದಕ್ಕೆ ಸುದೀಪ್ (Sudeep) ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಅರುಣ್ ಸಾಗರ್ (Arun Sagar) ಕ್ಷಮೆ ಕೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್​ ಒಂದನ್ನು ನೀಡಲಾಗಿತ್ತು. ತ್ರಿಕೋನಾಕಾರದ ಬಾಕ್ಸ್​ನಲ್ಲಿ ಬಾಲ್​ಗಳನ್ನು ಜೋಡಿಸಿ ಪಿರಾಮಿಡ್ ಆಕಾರ ಮಾಡಬೇಕು.ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು. ಅವರು ಜೋಕರ್​ನಂತೆ ನಡೆದುಕೊಂಡಿದ್ದರು. ಇದು ಮನೆಯವರ ಕೋಪಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ
Image
‘ಅವರು ಅಂದ್ರೆ ನಂಗೆ ತುಂಬಾ ಇಷ್ಟ’; ಐಶ್ವರ್ಯಾ ಬಳಿಕ ದೀಪಿಕಾ ಕಡೆ ವಾಲಿದ್ರಾ ಸೈಕ್ ನವಾಜ್​?
Image
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
Image
ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್​’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ
Image
ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

ಕಳಪೆ ಕೊಡುವಾಗ ಅನೇಕರು ಅರುಣ್ ಸಾಗರ್ ಬಗ್ಗೆ ಈ ವಿಚಾರದಲ್ಲಿ ಕಮೆಂಟ್ ಮಾಡಿದ್ದರು. ಸಾನ್ಯಾ, ರೂಪೇಶ್ ಶೆಟ್ಟಿ ಇದೇ ವಿಚಾರಕ್ಕೆ ಅರುಣ್ ಸಾಗರ್​ಗೆ ಕಳಪೆ ನೀಡಿದರು. ಇದಕ್ಕೆ ಅರುಣ್ ಸಾಗರ್ ಸಿಟ್ಟಾಗಿದ್ದರು. ರೂಪೇಶ್​ ವಿರುದ್ಧ ಪರೋಕ್ಷವಾಗಿ ಅರುಣ್ ಸಾಗರ್ ಸಿಡುಕಿದ್ದರು.

ಈ ಬಗ್ಗೆ ಸುದೀಪ್ ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಅರುಣ್ ಸಾಗರ್ ಅವರೇ ನೀವು ಫೆಂಟಾಸ್ಟಿಕ್ ಎಂಟರ್​ಟೇನರ್​. ಮನೆ ಒಳಗೆ ಇರುವ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳಬೇಡಿ. ಟಾಸ್ಕ್​ನ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ, ವಿದೂಷಕನಾದ್ರಿ. ನಾಯಕ ಆಗೋ ಜಾಗದಲ್ಲಿ ಜೋಕರ್ ಆಗಬೇಡಿ. ಜೋಕರ್ ಆಗೋ ಜಾಗದಲ್ಲಿ ನಾಯಕನಾಗಬೇಡಿ’ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಅರುಣ್ ಸಾಗರ್ ಅವರಿಗೆ ತಪ್ಪಿನ ಅರಿವಾಗಿದೆ.

Published On - 9:51 pm, Sat, 1 October 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ