AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?
ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​-ಕಾಮಿಡಿ ಕಿಲಾಡಿಗಳು
TV9 Web
| Edited By: |

Updated on: Feb 28, 2022 | 1:17 PM

Share

ಕನ್ನಡ ಕಿರುತೆರೆಯಲ್ಲಿ  ಈಗ ರಿಯಾಲಿಟಿ ಶೋಗಳು (Reality Show) ಸಾಕಷ್ಟು ಹೈಲೈಟ್​ ಆಗುತ್ತಿವೆ. ಎಲ್ಲಾ ವಾಹಿನಿಗಳ ಮಧ್ಯೆ ಇದಕ್ಕಾಗಿ ದೊಡ್ಡ ಮಟ್ಟದ ಕಾಂಪಿಟೇಷನ್​ ಇದೆ. ಹೀಗಾಗಿ ಒಂದಕ್ಕಿಂತ ಒಂದು ಶೋಅನ್ನು ಅದ್ದೂರಿಯಾಗಿ ವೀಕ್ಷಕರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ‘ಡಾನ್ಸ್​ ಕರ್ನಾಟಕ ಡಾನ್ಸ್​, ‘ಕಾಮಿಡಿ ಕಿಲಾಡಿಗಳು’ ಈಗಾಗಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಈ ಎರಡೂ ಶೋಗಳು ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ‘ಡಾನ್ಸ್​ ಕರ್ನಾಟಕ ಡಾನ್ಸ್’ (Dance Karnataka Dance) ಮೂಲಕ ಸಾಕಷ್ಟು ಡ್ಯಾನ್ಸರ್​ಗಳು ರಾಜ್ಯಕ್ಕೆ ಪರಿಚಯವಾದರೆ, ‘ಕಾಮಿಡಿ ಕಿಲಾಡಿಗಳು’ ಮೂಲಕ ಹಲವು ಕಲಾವಿದರು ಗುರುತಿಸಿಕೊಂಡಿದ್ದಾರೆ. ಈಗ ಇವೆರಡೂ ಕಾರ್ಯಕ್ರಮದ ಹೊಸ ಸೀಸನ್​ ಆರಂಭವಾಗುತ್ತಿದೆ. ಇದಕ್ಕೆ ಆಡಿಷನ್ ಕರೆಯಲಾಗಿದೆ.

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ ‘ಕರ್ನಾಟಕದ 31 ಜಿಲ್ಲೆಗಳಲ್ಲಿ ಕಾಮಿಡಿ ಮತ್ತು ಡ್ಯಾನ್ಸ್ ಪ್ರತಿಭೆಗಳಿಗಾಗಿ ನಡೆಯುತ್ತಿದೆ ‘DKD-6’ ಮತ್ತು ಕಾಮಿಡಿ ಕಿಲಾಡಿಗಳು-4ರ ಮಹಾ ಆಡಿಷನ್. ನಿಮ್ಮ ಟ್ಯಾಲೆಂಟ್​ಗೆ ಇಲ್ಲಿದೆ ಅವಕಾಶದ ಹೆಬ್ಬಾಗಿಲು’ ಎಂದು ಬರೆದುಕೊಂಡಿದೆ.

ಇನ್ನು, ಈ ಕಾರ್ಯಕ್ರಮಕ್ಕೆ ವಯಸ್ಸಿನ ಮಿತಿ ಕೂಡ ಇದೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ಗೆ ಆಡಿಷನ್​ ಕೊಡಬೇಕು ಎಂದರೆ ನಿಮ್ಮ ವಯಸ್ಸಿನ ಮಿತಿ ಇದೆ. ಡಿಕೆಡಿಗೆ ವಯಸ್ಸಿನ ಮಿತಿ 6-60 ವರ್ಷ ಹಾಗೂ ‘ಕಾಮಿಡಿ ಕಾಲಾಡಿಗಳು’ ಶೋಗೆ ಭಾಗವಹಿಸುವ ಸ್ಪರ್ಧಿಯ ವಯಸ್ಸಿನ ಮಿತಿ 16-60 ವರ್ಷ ಇದೆ. ಪಾಸ್​ಪೋರ್ಟ್​ ಸೈಜ್​ನ ಫೋಟೋ ಹಾಗೂ ಅಡ್ರೆಸ್ ಪ್ರೂಫ್​​ ಪ್ರತಿಯೊಂದಿಗೆ ಆಡಿಷನ್​ಗೆ ಬರಬೇಕು ಎಂದು ವಾಹಿನಿ ತಿಳಿಸಿದೆ.

View this post on Instagram

A post shared by Zee Kannada (@zeekannada)

ಇಂದು (ಫೆಬ್ರವರಿ 28) ಚಿತ್ರದುರ್ಗ ಹಾಗೂ ಶಿರಸಿಯಲ್ಲಿ ಆಡಿಷನ್​ ನಡೆಯುತ್ತಿದೆ. ಮಂಗಳವಾರ (ಮಾರ್ಚ್​ 1) ಹಾವೇರಿ, ಬುಧವಾರ (ಮಾರ್ಚ್​ 2) ಚಿಕ್ಕಮಗಳೂರು ಹಾಗೂ ಗದಗದಲ್ಲಿ ಆಡಿಷನ್​ ನಡೆಯುತ್ತಿದೆ. ಮುಂದಿನ ಆಡಿಷನ್​ ಬಗ್ಗೆ ವಾಹಿನಿ ಕಡೆಯಿಂದ ಶೀಘ್ರವೇ ಅಪ್​ಡೇಟ್​ ಸಿಗಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್​ ನಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು

ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ