AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ.

ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?
ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​-ಕಾಮಿಡಿ ಕಿಲಾಡಿಗಳು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 28, 2022 | 1:17 PM

Share

ಕನ್ನಡ ಕಿರುತೆರೆಯಲ್ಲಿ  ಈಗ ರಿಯಾಲಿಟಿ ಶೋಗಳು (Reality Show) ಸಾಕಷ್ಟು ಹೈಲೈಟ್​ ಆಗುತ್ತಿವೆ. ಎಲ್ಲಾ ವಾಹಿನಿಗಳ ಮಧ್ಯೆ ಇದಕ್ಕಾಗಿ ದೊಡ್ಡ ಮಟ್ಟದ ಕಾಂಪಿಟೇಷನ್​ ಇದೆ. ಹೀಗಾಗಿ ಒಂದಕ್ಕಿಂತ ಒಂದು ಶೋಅನ್ನು ಅದ್ದೂರಿಯಾಗಿ ವೀಕ್ಷಕರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ‘ಡಾನ್ಸ್​ ಕರ್ನಾಟಕ ಡಾನ್ಸ್​, ‘ಕಾಮಿಡಿ ಕಿಲಾಡಿಗಳು’ ಈಗಾಗಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಈ ಎರಡೂ ಶೋಗಳು ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ‘ಡಾನ್ಸ್​ ಕರ್ನಾಟಕ ಡಾನ್ಸ್’ (Dance Karnataka Dance) ಮೂಲಕ ಸಾಕಷ್ಟು ಡ್ಯಾನ್ಸರ್​ಗಳು ರಾಜ್ಯಕ್ಕೆ ಪರಿಚಯವಾದರೆ, ‘ಕಾಮಿಡಿ ಕಿಲಾಡಿಗಳು’ ಮೂಲಕ ಹಲವು ಕಲಾವಿದರು ಗುರುತಿಸಿಕೊಂಡಿದ್ದಾರೆ. ಈಗ ಇವೆರಡೂ ಕಾರ್ಯಕ್ರಮದ ಹೊಸ ಸೀಸನ್​ ಆರಂಭವಾಗುತ್ತಿದೆ. ಇದಕ್ಕೆ ಆಡಿಷನ್ ಕರೆಯಲಾಗಿದೆ.

ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್​ ನಡೆಯುತ್ತಿದೆ. ಆಸಕ್ತರು ಆಡಿಷನಲ್ಲಿ ಪಾಲ್ಗೊಳ್ಳಬಹುದು. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಐದು ಸೀಸನ್​ ಪೂರ್ಣಗೊಳಿಸಿದ್ದು, ‘ಕಾಮಿಡಿ ಕಾಲಾಡಿಗಳು’ ಮೂರು ಸೀಸನ್​ ಪೂರ್ಣಗೊಳಿಸಿದೆ. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ ‘ಕರ್ನಾಟಕದ 31 ಜಿಲ್ಲೆಗಳಲ್ಲಿ ಕಾಮಿಡಿ ಮತ್ತು ಡ್ಯಾನ್ಸ್ ಪ್ರತಿಭೆಗಳಿಗಾಗಿ ನಡೆಯುತ್ತಿದೆ ‘DKD-6’ ಮತ್ತು ಕಾಮಿಡಿ ಕಿಲಾಡಿಗಳು-4ರ ಮಹಾ ಆಡಿಷನ್. ನಿಮ್ಮ ಟ್ಯಾಲೆಂಟ್​ಗೆ ಇಲ್ಲಿದೆ ಅವಕಾಶದ ಹೆಬ್ಬಾಗಿಲು’ ಎಂದು ಬರೆದುಕೊಂಡಿದೆ.

ಇನ್ನು, ಈ ಕಾರ್ಯಕ್ರಮಕ್ಕೆ ವಯಸ್ಸಿನ ಮಿತಿ ಕೂಡ ಇದೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ಗೆ ಆಡಿಷನ್​ ಕೊಡಬೇಕು ಎಂದರೆ ನಿಮ್ಮ ವಯಸ್ಸಿನ ಮಿತಿ ಇದೆ. ಡಿಕೆಡಿಗೆ ವಯಸ್ಸಿನ ಮಿತಿ 6-60 ವರ್ಷ ಹಾಗೂ ‘ಕಾಮಿಡಿ ಕಾಲಾಡಿಗಳು’ ಶೋಗೆ ಭಾಗವಹಿಸುವ ಸ್ಪರ್ಧಿಯ ವಯಸ್ಸಿನ ಮಿತಿ 16-60 ವರ್ಷ ಇದೆ. ಪಾಸ್​ಪೋರ್ಟ್​ ಸೈಜ್​ನ ಫೋಟೋ ಹಾಗೂ ಅಡ್ರೆಸ್ ಪ್ರೂಫ್​​ ಪ್ರತಿಯೊಂದಿಗೆ ಆಡಿಷನ್​ಗೆ ಬರಬೇಕು ಎಂದು ವಾಹಿನಿ ತಿಳಿಸಿದೆ.

View this post on Instagram

A post shared by Zee Kannada (@zeekannada)

ಇಂದು (ಫೆಬ್ರವರಿ 28) ಚಿತ್ರದುರ್ಗ ಹಾಗೂ ಶಿರಸಿಯಲ್ಲಿ ಆಡಿಷನ್​ ನಡೆಯುತ್ತಿದೆ. ಮಂಗಳವಾರ (ಮಾರ್ಚ್​ 1) ಹಾವೇರಿ, ಬುಧವಾರ (ಮಾರ್ಚ್​ 2) ಚಿಕ್ಕಮಗಳೂರು ಹಾಗೂ ಗದಗದಲ್ಲಿ ಆಡಿಷನ್​ ನಡೆಯುತ್ತಿದೆ. ಮುಂದಿನ ಆಡಿಷನ್​ ಬಗ್ಗೆ ವಾಹಿನಿ ಕಡೆಯಿಂದ ಶೀಘ್ರವೇ ಅಪ್​ಡೇಟ್​ ಸಿಗಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್​ ನಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು

ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ