AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​

ಖ್ಯಾತ ನಟ ದಳಪತಿ ವಿಜಯ್​ ಅವರ ಮಗ ಜೇಸನ್​ ಸಂಜಯ್​ ಅವರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಯಾವುದೇ ನಿರ್ದೇಶಕರು ತಮ್ಮ ಮೊದಲ ಚಿತ್ರ ಮಾಡುವಾಗ ‘ಲೈಕಾ ಪ್ರೊಡಕ್ಷನ್ಸ್’ ರೀತಿಯ ದೊಡ್ಡ ಸಂಸ್ಥೆಯ ಜೊತೆ ಕೈ ಜೋಡಿಸುವುದು ಎಂದರೆ ಸುಲಭದ ಮಾತಲ್ಲ. ಜೇಸನ್​ ಸಂಜಯ್​ ಅವರಿಗೆ ಅಂಥ ಒಂದು ಅವಕಾಶ ಸಿಕ್ಕಿದೆ.

ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​
ಸುಭಾಸ್ಕರನ್, ಜೇಸನ್​​ ಸಂಜಯ್​, ದಳಪತಿ ವಿಜಯ್​
Follow us
ಮದನ್​ ಕುಮಾರ್​
|

Updated on:Aug 28, 2023 | 6:19 PM

ನಟ ದಳಪತಿ ವಿಜಯ್​ (Thalapathy Vijay) ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಈಗ ಅವರ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೀರೋಗಳ ಮಕ್ಕಳು ಕೂಡ ನಟರಾಗಬೇಕು ಎಂದು ಬಯಸುವುದೇ ಹೆಚ್ಚು. ಆದರೆ ದಳಪತಿ ವಿಜಯ್​ ಅವರ ಮಗ ಜೇಸನ್​ ಸಂಜಯ್​ (Jason Sanjay) ಬೇರೆ ಹಾದಿ ತುಳಿಯಲು ಮುಂದಾಗಿದ್ದಾರೆ. ಅವರು ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ವಿಶೇಷ ಏನೆಂದರೆ, ಜೇಸನ್​ ಸಂಜಯ್​ ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ (Lyca Productions) ಸಂಸ್ಥೆಯು ಬಂಡವಾಳ ಹೂಡಲಿದೆ. ಈ ಸುದ್ದಿ ಕೇಳಿ ದಳಪತಿ ವಿಜಯ್​ ಫ್ಯಾನ್ಸ್​ ಖುಷಿ ಆಗಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಈ ಹೊಸ ಸುದ್ದಿಯನ್ನು ‘ಲೈಕಾ ಪ್ರೊಡಕ್ಷನ್ಸ್​’ ಹಂಚಿಕೊಂಡಿದೆ.

ಕಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಗೆ ಸಲ್ಲುತ್ತದೆ. ಇತ್ತೀಚೆಗಷ್ಟೇ ಈ ಬ್ಯಾನರ್​ನಿಂದ ನಿಖಿಲ್​ ಕುಮಾರಸ್ವಾಮಿ ಅವರ ಹೊಸ ಸಿನಿಮಾ ಸೆಟ್ಟೇರಿತು. ಈಗ ಜೇಸನ್​ ಸಂಜಯ್​ ಅವರ ಮೊದಲ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬರೀ ಸ್ಟಾರ್​ ಕಲಾವಿದರಿಗೆ ಮಾತ್ರವಲ್ಲದೇ ಹೊಸಬರಿಗೂ ಈ ಸಂಸ್ಥೆಯ ಮೂಲಕ ನಿರ್ಮಾಪಕ ಸುಭಾಸ್ಕರನ್​ ಅವರು ಅವಕಾಶ ನೀಡುತ್ತಿದ್ದಾರೆ. ಜೇಸನ್​ ಸಂಜಯ್​ ಜೊತೆ ಕೈ ಜೋಡಿಸಿರುವುದಕ್ಕೆ ಸುಭಾಸ್ಕರನ್​ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಜೇಸನ್​ ಸಂಜಯ್​ ನಿರ್ದೇಶನ ಮಾಡಲಿರುವ ಮೊದಲ ಪ್ರಾಜೆಕ್ಟ್​ ಬಗ್ಗೆ ಸುಭಾಸ್ಕರನ್​ ಮಾತನಾಡಿದ್ದಾರೆ. ‘ಯಾವಾಗಲೂ ಯುವ ಪ್ರತಿಭೆಗಳಿಗೆ ಲೈಕಾ ಪ್ರೊಡಕ್ಷನ್ ಸಂಸ್ಥೆಯು ವೇದಿಕೆ ನಿರ್ಮಿಸಿಕೊಡುತ್ತಿದೆ. ನಮ್ಮ ಮುಂದಿನ ಸಿನಿಮಾ ಜೇಸನ್ ಸಂಜಯ್ ಜೊತೆ ಎಂಬುದನ್ನು ತಿಳಿಸಲು ಖುಷಿ ಆಗುತ್ತಿದೆ. ಜೇಸನ್ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಟೊರಾಂಟೋ ಫಿಲ್ಮ್​ ಸ್ಕೂಲ್​ನಲ್ಲಿ ಸಿನಿಮಾ ಮೇಕಿಂಗ್​ ಬಗ್ಗೆ ಡಿಪ್ಲೊಮಾ ಪಡೆದಿದ್ದಾರೆ. ಅವರು ತಮ್ಮ ಸ್ಕ್ರಿಪ್ಟ್​ ವಿವರಿಸಿದಾಗ ನಮಗೆ ಒಂದು ಸಿನಿಮೀಯ ಅನುಭವ ನೀಡಿತು. ಆದ್ದರಿಂದ ನಾವು ನಿರ್ಮಾಣ ಮಾಡಲು ಮುಂದಾದೆವು. ನಿರ್ದೇಶಕರಿಗೆ ಇರಬೇಕಾದ ಎಲ್ಲ ಮುಖ್ಯ ಗುಣಗಳು ಜೇಸನ್​ ಸಂಜಯ್​ ಅವರಿಗೆ ಇದೆ’ ಎಂದು ಸುಭಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗಾಗಿ ಬೆಂಗಳೂರಿಗೆ ಬಂದ ಲೈಕಾ ಕುಟುಂಬ, ಅದ್ಧೂರಿ ಮುಹೂರ್ತ

ಮೊದಲ ಚಿತ್ರ ಮಾಡುವಾಗ ‘ಲೈಕಾ ಪ್ರೊಡಕ್ಷನ್ಸ್’ ರೀತಿಯ ದೊಡ್ಡ ಸಂಸ್ಥೆಯ ಜೊತೆ ಕೈ ಜೋಡಿಸುವುದು ಎಂದರೆ ಸುಲಭದ ಮಾತಲ್ಲ. ಜೇಸನ್​ ಸಂಜಯ್​ ಅವರಿಗೆ ಅಂಥ ಒಂದು ಅವಕಾಶ ಸಿಕ್ಕಿದೆ. ‘ಈ ಅವಕಾಶ ಪಡೆದಿರುವುದು ಗೌರವದ ವಿಷಯ. ಯುವ ಪ್ರತಿಭೆಗಳಿಗೆ ಈ ಸಂಸ್ಥೆಯಿಂದ ಪ್ರೋತ್ಸಾಹ ಸಿಗುತ್ತಿದೆ. ಈ ಚಾನ್ಸ್​ ನೀಡಿದಕ್ಕೆ ಸುಭಾಸ್ಕರನ್ ಅವರಿಗೆ ನನ್ನ ಧನ್ಯವಾದಗಳು. ಡೈರೆಕ್ಟರ್​ ಆಗಬೇಕು ಎಂಬ ನನ್ನ ಕನಸುಗಳನ್ನು ನನಸು ಮಾಡಲು ಬೆಂಬಲ ನೀಡಿದ ತಮಿಳ್​ ಕುಮಾರನ್ ಅವರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದು ಜೇಸನ್​ ಸಂಜಯ್​ ಹೇಳಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ರಾಜಕೀಯದ ಎಂಟ್ರಿಗೆ ರಜನಿಕಾಂತ್​, ಅಜಿತ್​ ಫ್ಯಾನ್ಸ್​ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್​

ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಹೊಸ ಪ್ರತಿಭೆಗಳು ನಟಿಸುವ ಸಾಧ್ಯತೆ ಇದೆ. ತಾಂತ್ರಿಕ ಬಳಗದ ಬಗ್ಗೆಯೂ ಮಾಹಿತಿ ಹೊರಬರುವುದು ಬಾಕಿ ಇದೆ. ದಳಪತಿ ವಿಜಯ್​ ಮತ್ತು ಜೇಸನ್​ ಸಂಜಯ್​ ಅವರು ಜೊತೆಯಾಗಿ ಸಿನಿಮಾ ಮಾಡಲಿ ಎಂದು ಕೂಡ ಅಭಿಮಾನಿಗಳು ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:01 pm, Mon, 28 August 23

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ