Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ರಾಕಿಯ ಕೆಜಿಎಫ್’; ದಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್

ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ರ್ಯಾಲಿ, ಅದರ ಬೃಹತ್ ಪ್ರಮಾಣದಿಂದ, ‘ಕೆಜಿಎಫ್ 2’ ಚಿತ್ರದ ಒಂದು ದೃಶ್ಯವನ್ನು ನೆನಪಿಸುತ್ತದೆ. ಐದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ ಈ ರ್ಯಾಲಿಯು ರಾಜಕೀಯ ವಲಯದಲ್ಲಿ ಸಂಚಲನವನ್ನು ಉಂಟುಮಾಡಿದೆ.

‘ಇದು ರಾಕಿಯ ಕೆಜಿಎಫ್’; ದಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್
ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 28, 2024 | 10:48 AM

‘ಕೆಜಿಎಫ್ 2’ ಚಿತ್ರದಲ್ಲಿ ಒಂದು ಥ್ರಿಲ್ಲಿಂಗ್ ಸೀನ್ ಬರುತ್ತದೆ. ರಾಕಿಯ ಕೆಜಿಎಫ್ ಹೇಗೆ ಇರುತ್ತದೆ ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ. ಅಲ್ಲಿ ಫೋಟೋ ತೆಗೆಯೋದು, ಮೇಲ್ಭಾಗದಲ್ಲಿ ವಿಮಾನ ಹಾರೋದು ನಿಷಿದ್ಧವಾಗಿರುತ್ತದೆ. ಆದಾಗ್ಯೂ ಕಷ್ಟಪಟ್ಟು ರಾಕಿಯ ಕೆಜಿಎಫ್​ನ ಒಂದು ದೃಶ್ಯವನ್ನು ಶೂಟ್ ಮಾಡಲಾಗಿರುತ್ತದೆ. ರಾಕಿಯ ಕೆಜಿಎಫ್​ನ ನೋಡಿ ಪ್ರಧಾನಿ ರಮಿಕಾ ಸೇನ್ ಶಾಕ್ ಆಗುತ್ತಾಳೆ. ಈಗ ದಳಪತಿ ವಿಜಯ್ ರ‍್ಯಾಲಿಯ ದೃಶ್ಯವನ್ನು ಅನೇಕರು ‘ಕೆಜಿಎಫ್ 2’ ಚಿತ್ರದ ದೃಶ್ಯಕ್ಕೆ ಹೋಲಿಕೆ ಮಾಡುತ್ತಾ ಇದ್ದಾರೆ.

ತಮಿಳುನಾಡಿನಲ್ಲಿ ವಿಜಯ್ ಅವರ ಪಕ್ಷದ ರ‍್ಯಾಲಿ ನಡೆದಿದೆ. ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷದ ಮೊದಲ ಸಾರ್ವಜನಿಕ ರ‍್ಯಾಲಿ ಇದಾಗಿತ್ತು. ವಿಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ರಾಜಕೀಯದಲ್ಲೂ ಇದೇ ರೀತಿಯ ಸ್ವಾಗತ ಸಿಗುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಒಂದೇ ರ‍್ಯಾಲಿ ಮೂಲಕ ವಿಜಯ್ ಉತ್ತರ ಕೊಟ್ಟಿದ್ದಾರೆ.

ವಿಜಯ್ ನಡೆಸಿದ ರ‍್ಯಾಲಿಯಲ್ಲಿ ಸುಮಾರು ಐದು ಲಕ್ಷ ಜನರು ಸೇರಿದ್ದರು ಎನ್ನಲಾಗಿದೆ. ‘ಇದು ರಾಕಿಯ ಕೆಜಿಎಫ್’ ಎಂದು ‘ಕೆಜಿಎಫ್ 2’ ಚಿತ್ರದಲ್ಲಿ ರಾಘವನ್ (ರಾವ್ ರಮೇಶ್) ಹೇಳುವ ಡೈಲಾಗ್​ ಜೊತೆ ರ‍್ಯಾಲಿಯ ದೃಶ್ಯಗಳನ್ನು ಜೋಡಿಸಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಆ ವಿಡಿಯೋ ನೋಡಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಪವರ್ ತೋರಿಸಿದ ದಳಪತಿ ವಿಜಯ್; ರಾಜಕೀಯ ರ‍್ಯಾಲಿಯಲ್ಲಿ ಐದು ಲಕ್ಷ ಮಂದಿ

‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಸ್ಥಾಪನೆ ಆಗಿದ್ದು, ವಿಜಯ್ ಇದರ ಸ್ಥಾಪಕ. ಅವರು ತಮ್ಮ ನಟನಾ ವೃತ್ತಿ ಉತ್ತುಂಗದಲ್ಲಿ ಇರುವಾಗಲೇ ಅದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಸದ್ಯ ವಿಜಯ್ ಹಮ್ಮಿಕೊಂಡಿರೋ ರ‍್ಯಾಲಿ ಉಳಿದ ಪಕ್ಷಗಳಲ್ಲಿ ಭಯ ಮೂಡಿಸಿದೆ. 2026ರಲ್ಲಿ ವಿಜಯ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ