AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಾಗಾಗಿದ್ದರೆ..’; ವಿಜಯ್ ಗೆಲುವಿನಿಂದ ರಜನಿ ಫ್ಯಾನ್ಸ್​​ಗೆ ಭಾರಿ ನಿರಾಸೆ

ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಮ್' ಪಕ್ಷ ತಮಿಳುನಾಡು ರಾಜಕೀಯದಲ್ಲಿ ಭರ್ಜರಿ ಜಯ ಸಾಧಿಸಿ, 108 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ವಿಜಯ್ ಮುಖ್ಯಮಂತ್ರಿಯಾಗುವುದು ಈಗ ಖಚಿತವಾಗಿದೆ. ಆದರೆ, ರಜನಿಕಾಂತ್ ರಾಜಕೀಯ ಪ್ರವೇಶಿಸದಿರುವುದಕ್ಕೆ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ರಜನಿ ಕಾಲಕ್ಕೆ ಸರಿಯಾಗಿ ರಾಜಕೀಯಕ್ಕೆ ಬಂದಿದ್ದರೆ ತಮಿಳುನಾಡಿನ ಚಿತ್ರಣವೇ ಬೇರೆಯಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಹಾಗಾಗಿದ್ದರೆ..’; ವಿಜಯ್ ಗೆಲುವಿನಿಂದ ರಜನಿ ಫ್ಯಾನ್ಸ್​​ಗೆ ಭಾರಿ ನಿರಾಸೆ
ರಜನಿ-ವಿಜಯ್
ರಾಜೇಶ್ ದುಗ್ಗುಮನೆ
|

Updated on:May 05, 2026 | 9:02 AM

Share

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಭರ್ಜರಿ ಜಯ ಹೊಸ ಸಂಚಲನ ಮೂಡಿಸಿದೆ. ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಅವರು ಇತಿಹಾಸ ಬರೆದಿದ್ದಾರೆ. ಆದರೆ, ವಿಜಯ್ ಅವರ ಈ ಗೆಲುವು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಮಾತ್ರ ಒಂದು ರೀತಿಯ ನಿರಾಸೆ ಮತ್ತು ಬೇಸರವನ್ನು ಉಂಟುಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

ದಳಪತಿ ವಿಜಯ್ ಅವರು ತಮ್ಮ ಸಿನಿಮಾ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ರಾಜಕೀಯ ಪ್ರವೇಶಿಸುವ ಧೈರ್ಯ ಮಾಡಿದರು. ಇದಕ್ಕಾಗಿ ಅವರು ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದರು. 2026ರ ಚುನಾವಣೆಯಲ್ಲಿ ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ವಿಜಯ್ ಮುಖ್ಯಮಂತ್ರಿಯಾಗುವುದು ಈಗ ಬಹುತೇಕ ಖಚಿತವಾಗಿದೆ. ವಿಜಯ್ ಫ್ಯಾನ್ ಬೇಸ್ ಇರುವಾಗಲೇ ರಾಜಕೀಯಕ್ಕೆ ಬಂದಿದ್ದು ಅವರಿಗೆ ಪ್ಲಸ್ ಪಾಯಿಂಟ್ ಆಯಿತು ಎಂಬುದು ವಿಶ್ಲೇಷಕರ ಅಭಿಪ್ರಾಯ.

ರಜನಿ ಅಭಿಮಾನಿಗಳ ನಿರಾಸೆಗೆ ಕಾರಣವೇನು?

ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಕಳೆದ 20-25 ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಪ್ರತಿ ಬಾರಿ ಚುನಾವಣೆ ಬಂದಾಗಲೂ ಅಭಿಮಾನಿಗಳು ‘ತಲೈವಾ’ ರಾಜಕೀಯಕ್ಕೆ ಕಾಲಿಡುತ್ತಾರೆ ಎಂದು ಕಾಯುತ್ತಿದ್ದರು. ಆದರೆ, ರಜನಿಕಾಂತ್ ಅವರು ಸುದೀರ್ಘ ಕಾಲ ಆಲೋಚಿಸಿ, ಕೊನೆಯ ಕ್ಷಣದಲ್ಲಿ ಆರೋಗ್ಯದ ಕಾರಣ ನೀಡಿ ಹಿಂದೆ ಸರಿದರು.

‘ರಜನಿಕಾಂತ್ ಅವರು 20 ವರ್ಷಗಳ ಹಿಂದೆಯೇ, ರಾಜಕೀಯಕ್ಕೆ ಬಂದಿದ್ದರೆ, ಇವತ್ತು ತಮಿಳುನಾಡಿನ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅವರು ಸುಲಭವಾಗಿ ಮುಖ್ಯಮಂತ್ರಿಯಾಗುತ್ತಿದ್ದರು’ ಎಂಬುದು ರಜನಿ ಅಭಿಮಾನಿಗಳ ಅಭಿಪ್ರಾಯ.

ಕಮಲ್ ಸೋಲು – ವಿಜಯ್ ಗೆಲುವು:

ರಜನಿಕಾಂತ್ ಅವರಿಗಿಂತ ಮೊದಲೇ ಕಮಲ್ ಹಾಸನ್ ರಾಜಕೀಯಕ್ಕೆ ಬಂದರೂ, ಮತದಾರರು ಅವರನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಲಿಲ್ಲ. ಆದರೆ ವಿಜಯ್ ವಿಷಯದಲ್ಲಿ ಮತದಾರರು ಭರ್ಜರಿ ಬೆಂಬಲ ನೀಡಿದ್ದಾರೆ. ವಿಜಯ್ ಅವರ ಈ ಗೆಲುವನ್ನು ಕಂಡ ರಜನಿ ಅಭಿಮಾನಿಗಳು, ‘ನಮ್ಮ ನೆಚ್ಚಿನ ನಟನಿಗೂ ಇಂತಹ ಸುವರ್ಣ ಅವಕಾಶವಿತ್ತು, ಆದರೆ ಕಾಲ ಮೀರಿ ಹೋಯಿತು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘2026ಕ್ಕೆ ನಾನೇ ಸಿಎಂ’; 2024ರಲ್ಲೇ ಸೂಚನೆ ಕೊಟ್ಟಿದ್ದ ದಳಪತಿ ವಿಜಯ್

ಒಟ್ಟಾರೆಯಾಗಿ, ವಿಜಯ್ ಅವರ ಯಶಸ್ಸು ಒಂದು ಕಡೆ ಸಂಭ್ರಮ ತಂದಿದ್ದರೆ, ಮತ್ತೊಂದೆಡೆ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಕನಸು ಭಗ್ನಗೊಂಡಿರುವುದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಇಂದಿಗೂ ಮರೆಯಲಾಗದ ನೋವಾಗಿ ಉಳಿದಿದೆ. ಅಂದು ರಜನಿ ಮಾಡದ ಸಾಧನೆಯನ್ನು ಇಂದು ವಿಜಯ್ ಮಾಡಿ ತೋರಿಸಿದ್ದಾರೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:01 am, Tue, 5 May 26

Follow Us