AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮಂಥ ಹೆಂಡತಿ ಯಾರಿಗೂ ಸಿಗಬಾರದು’; ಪ್ರಿಯಾಮಣಿಗೆ ನೇರವಾಗಿ ಶಾಪ ಹಾಕಿದ ಜನರು

‘ಸ್ನೇಹಿತನಿಗಾಗಿ ನೀವು ಶ್ರೀಕಾಂತ್​ಗೆ ಯಾಕೆ ಮೋಸ ಮಾಡಿದ್ರಿ? ಮಾಡಿದ ತಪ್ಪಿಗಾಗಿ ನೀವು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವೇ ಇಲ್ಲ’ ಎಂದು ಜನರು ‘ದಿ ಫ್ಯಾಮಿಲಿ ಮ್ಯಾನ್​ 2’ ನಟಿ ಪ್ರಿಯಾಮಣಿಗೆ ಶಾಪ ಹಾಕುತ್ತಿದ್ದಾರೆ.

‘ನಿಮ್ಮಂಥ ಹೆಂಡತಿ ಯಾರಿಗೂ ಸಿಗಬಾರದು’; ಪ್ರಿಯಾಮಣಿಗೆ ನೇರವಾಗಿ ಶಾಪ ಹಾಕಿದ ಜನರು
ಪ್ರಿಯಾಮಣಿ
TV9 Web
| Edited By: |

Updated on: Jul 17, 2021 | 2:24 PM

Share

ಸಿನಿಮಾ ಕಲಾವಿದರಿಗೆ ಪ್ರೇಕ್ಷಕರಿಂದ ಹಲವು ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಅದು ಸ್ವಲ್ಪ ವಿಚಿತ್ರವಾಗಿಯೂ ಇರುತ್ತದೆ. ಅದೇ ರೀತಿ ನಟಿ ಪ್ರಿಯಾಮಣಿ ಅವರಿಗೆ ಇತ್ತೀಚೆಗೆ ಅಭಿಮಾನಿಗಳಿಂದ ಬಗೆಬಗೆಯ ಕಮೆಂಟ್​​ಗಳು ಬರುತ್ತಿವೆ. ಜೂನ್​ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಪ್ರಿಯಾಮಣಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಇದರಲ್ಲಿ ಅವರು ನಿಭಾಯಿಸಿದ ಸುಚಿ ಅಥವಾ ಸುಚಿತ್ರಾ ಐಯ್ಯರ್​​ ಎಂಬ ಪಾತ್ರ ಕೂಡ ಭಾರಿ ಚರ್ಚೆಗೆ ಒಳಗಾಗಿದೆ. ಈಗ ಪ್ರಿಯಾಮಣಿ ಏನೇ ಪೋಸ್ಟ್ ಮಾಡಿದರೂ ಅದಕ್ಕೆ ಕಮೆಂಟ್​ ಮಾಡುವ ಪ್ರೇಕ್ಷಕರು ‘ದಿ ಫ್ಯಾಮಿಲಿ ಮ್ಯಾನ್ 2’ ಪಾತ್ರವನ್ನು ಎಳೆದು ತರುತ್ತಿದ್ದಾರೆ.

ಈ ವೆಬ್​ ಸರಣಿಯಲ್ಲಿ ಮನೋಜ್​ ಭಾಜಪೇಯ್​ ಮತ್ತು ಪ್ರಿಯಾಮಣಿ ಅವರು ಶ್ರೀಕಾಂತ್​ ತಿವಾರಿ-ಸುಚಿತ್ರಾ ಐಯ್ಯರ್​​ ಎಂಬ ಗಂಡ-ಹೆಂಡತಿಯ ಪಾತ್ರವನ್ನು ಮಾಡಿದ್ದಾರೆ. ಸುಚಿ ತನ್ನ ಸ್ನೇಹಿತನ ಜೊತೆಗೆ ಹೊಂದಿರುವ ಆಪ್ತತೆಯ ಕಾರಣದಿಂದ ಶ್ರೀಕಾಂತ್​ ತಿವಾರಿಯ ಸಂಸಾರದಲ್ಲಿ ಬಿರುಕು ಉಂಟಾಗುತ್ತದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಈ ವಿಚಾರವನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಒಂದು ವರ್ಗದ ನೆಟ್ಟಿಗರು ಪ್ರಿಯಾಮಣಿಗೆ ಕಟುವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ದೇವರು ಬೇಕಾದರೆ ಸ್ವಲ್ಪ ಬಡತನ ಕೊಡಲಿ, ಆದರೆ ನಿಮ್ಮಂಥ ಹೆಂಡತಿಯನ್ನು ಕೊಡುವುದು ಬೇಡ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹಲವಾರು ಪ್ರಶ್ನೆಗಳನ್ನು ಪ್ರಿಯಾಮಣಿಗೆ ಜನರು ಕೇಳುತ್ತಿದ್ದಾರೆ. ‘ನೀವು ಶ್ರೀಕಾಂತ್​ಗೆ ಈ ರೀತಿ ಮಾಡಬಾರದಾಗಿತ್ತು. ಸ್ನೇಹಿತನಿಗಾಗಿ ನೀವು ಶ್ರೀಕಾಂತ್​ಗೆ ಯಾಕೆ ಮೋಸ ಮಾಡಿದ್ರಿ? ಮಾಡಿದ ತಪ್ಪಿಗಾಗಿ ನೀವು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವೇ ಇಲ್ಲ’ ಎಂದೆಲ್ಲ ಜನರು ಕಟುವಾಗಿ ಕಮೆಂಟ್​ ಮಾಡಿದ್ದಾರೆ.

ಇದು ಪ್ರಿಯಾಮಣಿಗೆ ಸ್ವಲ್ಪ ಬೇಸರ ತರಿಸಿದೆ ಕೂಡ. ‘ಇದು ರೀಲ್​ ಅಷ್ಟೇ. ರಿಯಲ್​ ಅಲ್ಲ. ನಾನು ನಟಿ ಮಾತ್ರ. ನಿಜಜೀವನದಲ್ಲಿ ನಾನು ಆ ರೀತಿ ಮಹಿಳೆ ಅಲ್ಲ ಎಂದು ಎಲ್ಲರಿಗೂ ನಾನು ವಿವರಣೆ ನೀಡುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಿಮಗೆ ಆ ಪಾತ್ರ ಇಷ್ಟ ಆಗಿಲ್ಲ ಎಂದರೆ ಓಕೆ. ಅದು ನಿಮ್ಮ ಅಭಿಪ್ರಾಯ. ಆದರೆ ಅದನ್ನು ಕಲಾವಿದರ ಪರ್ಸನಲ್ ಜೀವನಕ್ಕೆ ಯಾಕೆ ಕನೆಕ್ಟ್​ ಮಾಡುತ್ತೀರಿ?’ ಎಂದು ಪ್ರಿಯಾಮಣಿ ಮರುಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ